Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

ಈ ಸಿಹಿ ಖಾದ್ಯ ತಿಂತಾಯಿದ್ರೆ ತಿಂತಾನೆ ಇರ್ತಿರಾ ಅಷ್ಟು ರುಚಿ...

ಶ್ರೀರಾಮ್ ನಾಯಕ್, Sep 30, 2024, 5:47 PM IST

anjura-roll

ಮಹಾಲಯ ಮುಗಿಯಲು ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದಾದ ಬಳಿಕ ನವರಾತ್ರಿ, ದೀಪಾವಳಿ ಹಬ್ಬಗಳು ಬರುತ್ತಿವೆ ಈ ಶುಭ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ಮಾಡುತ್ತಾರೆ ಹಾಗಾಗಿ ಈ ಬಾರಿಯ ಹಬ್ಬಕ್ಕೆ ನೀವು ಮನೆಯಲ್ಲಿ ಹೊಸ ಬಗೆಯ ಸಿಹಿ ಖಾದ್ಯವನ್ನು ಪ್ರಯೋಗ ಮಾಡಿ ನೋಡಿ. ಈ ರೆಸಿಪಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನೊಂದು ವಿಷಯವೇನೆಂದರೆ ಈ ಖಾದ್ಯಕ್ಕೆ ಸಕ್ಕರೆ ಹಾಗೂ ಬೆಲ್ಲದ ಅಗತ್ಯವಿಲ್ಲ. ಇದರಲ್ಲಿ ಅತೀ ಹೆಚ್ಚು ಪ್ರೋಟೀನ್ ಅಂಶವಿರುವುದರಿಂದ ಇದು ಮಕ್ಕಳ ಆರೋಗ್ಯಕ್ಕೂ ಬಹಳ ಒಳ್ಳೆಯದು. ಕೆಲವು ಮಕ್ಕಳು ಡ್ರೈ ಫ್ಯೂಟ್ಸ್‌ ತಿನ್ನಲು ಇಷ್ಟಪಡುವುದಿಲ್ಲ ಅದರ ಬದಲಿಗೆ ಈ ರೀತಿಯ ರೆಸಿಪಿ ಮಾಡಿಕೊಟ್ಟರೆ ಖಂಡಿತವಾಗಿಯೂ ತಿನ್ನುತ್ತಾರೆ. ಹಾಗಾದರೆ ಮತ್ಯಾಕೆ ತಡ ಈ ಬಾರಿಯ ಹಬ್ಬಕ್ಕೆ ಮನೆಯಲ್ಲೇ ಅಂಜೂರ ರೋಲ್ ಮಾಡಿ ಮನೆಮಂದಿಯೊಂದಿಗೆ ಸವಿಯಿರಿ. ಬನ್ನಿ ಹಾಗಾದರೆ “ಅಂಜೂರ ರೋಲ್” ಮಾಡುವುದು ಹೇಗೆಂದು ತಿಳಿದು ಬರೋಣ…

ಅಂಜೂರ ರೋಲ್‌ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಒಣ ಅಂಜೂರ -250ಗ್ರಾಂ, ಖರ್ಜೂರ-250ಗ್ರಾಂ, ತುಪ್ಪ- 4ಚಮಚ, ಗೋಡಂಬಿ-ಅರ್ಧ ಕಪ್‌, ಬಾದಾಮ್‌ – ಅರ್ಧ ಕಪ್‌, ವಾಲ್‌ ನಟ್ಸ್‌- ಅರ್ಧ ಕಪ್‌, ಪಿಸ್ತಾ- 2 ಚಮಚ, ಒಣದ್ರಾಕ್ಷಿ – 2 ಚಮಚ, ಏಪ್ರಿಕಾಟ್‌(ಜಲ್ದರು ಹಣ್ಣು)- 4, ಸೂರ್ಯಕಾಂತಿ ಬೀಜ- 2ಚಮಚ, ಗಸಗಸೆ- 1ಚಮಚ, ತೆಂಗಿನಕಾಯಿ ಪುಡಿ – 2 ಚಮಚ, ಏಲಕ್ಕಿ ಪುಡಿ- ಅರ್ಧ ಟೀಸ್ಪೂನ್‌.

ತಯಾರಿಸುವ ವಿಧಾನ:
-ಮೊದಲಿಗೆ ಒಂದು ಮಿಕ್ಸಿಜಾರಿಗೆ ಒಣ ಅಂಜೂರ ಮತ್ತು ಖರ್ಜೂರವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ನಂತರ ಒಲೆ ಮೇಲೆ ಒಂದು ಪ್ಯಾನ್‌ ಇಟ್ಟು ಅದಕ್ಕೆ 2 ಚಮಚದಷ್ಟು ತುಪ್ಪ ಹಾಕಿ ರುಬ್ಬಿಟ್ಟ ಅಂಜೂರ/ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ(ಮೃದು ಆಗುವ ತನಕ).
-ತದನಂತರ ಇನ್ನೊಂದು ಪ್ಯಾನ್‌ ಗೆ 2 ಚಮಚದಷ್ಟು ತುಪ್ಪವನ್ನು ಹಾಕಿ ಅದಕ್ಕೆ ಸಣ್ಣಗೆ ಕಟ್‌ ಮಾಡಿಟ್ಟ ಗೋಡಂಬಿ, ಬಾದಾಮ್‌, ವಾಲ್‌ ನೆಟ್ಸ್‌ ಪಿಸ್ತಾ, ಒಣದ್ರಾಕ್ಷಿ, ಜಲ್ದರ್‌ ಹಣ್ಣು ಮತ್ತು ಸೂರ್ಯಕಾಂತಿ ಬೀಜ ಇವೆಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

-ಆ ಬಳಿಕ ಗಸಗಸೆ, ತೆಂಗಿನ ಪುಡಿ ಹಾಕಿ ಪುನಃ ಹುರಿಯಿರಿ. ನಂತರ ಮೊದಲೇ ಮಾಡಿಟ್ಟ ಅಂಜೂರ/ಖರ್ಜೂರದ ಮಿಶ್ರಣ ಸೇರಿಸಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
-ನಂತರ ಒಂದು ಪ್ಲೇಟ್ ಗೆ ಸಣ್ಣಗೆ ಚೂರು ಮಾಡಿಟ್ಟ ಪಿಸ್ತಾವನ್ನು ಹಾಕಿ, ಮಾಡಿಟ್ಟ ಅಂಜೂರದ ಮಿಶ್ರಣವನ್ನು ಹಾಕಿ ರೋಲ್‌ ಮಾಡಿ 30 ನಿಮಿಷ ಹಾಗೆ ಬಿಡಿ ಬಳಿಕ ಸಣ್ಣಗೆ ಕಟ್‌ ಮಾಡಿದರೆ ಅಂಜೂರ ರೋಲ್‌ ಸವಿಯಲು ಸಿದ್ಧ.

-ಶ್ರೀರಾಮ್ ಜಿ . ನಾಯಕ್

ಟಾಪ್ ನ್ಯೂಸ್

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

dharmendra kumar arenahalli

Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

arre

Kumble: ಮಾವನ ಕೊಲೆಗೆ ಯತ್ನ: ಆರೋಪಿ ಬಂಧನ

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

5

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.