Grant: 15ನೇ ಹಣಕಾಸು ಆಯೋಗ ಅನುದಾನದಡಿ ರಾಜ್ಯಕ್ಕೆ 2,637 ಕೋ. ರೂ.
ಗ್ರಾಮ ಪಂಚಾಯಿತಿಗೆ 2,241.45 ಕೋಟಿ ತಾಲೂಕು ಪಂಚಾಯಿತಿಗೆ 263.70 ಕೋಟಿ ರೂಪಾಯಿ
Team Udayavani, Oct 1, 2024, 7:15 AM IST
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಅನುದಾನದಡಿ 2,637 ಕೋಟಿ ರೂ. ನಿಗದಿಪಡಿಸಿದ್ದು, ಈ ಪೈಕಿ 2,241.45 ಕೋಟಿ ರೂ. (ಶೇ. 85)ಗಳನ್ನು ಗ್ರಾಮ ಪಂಚಾಯತ್ಗೆ, 263.70 ಕೋಟಿ ರೂ. (ಶೇ. 10)ಗಳನ್ನು ತಾಲೂಕು ಪಂಚಾಯತ್ಗಳಿಗೆ ಹಾಗೂ 131.85 ಕೋಟಿ ರೂ. (ಶೇ. 5)ಗಳನ್ನು ಜಿ.ಪಂ.ಗಳಿಗೆ ನಿಗದಿಪಡಿಸಿದೆ.
ಈ ಅನುದಾನ ಬಳಕೆ ಬಗ್ಗೆ ಷರತ್ತು ವಿಧಿಸಿರುವ ಆಯೋಗವು, ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ, ಅನುದಾನ ಬಳಕೆಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಪ್ರಮಾಣಪತ್ರ (ಯುಸಿ) ಸಲ್ಲಿಸುವಂತೆಯೂ ಕಟ್ಟಪ್ಪಣೆ ಮಾಡಿದೆ.
ಶೇ. 60 ನಿರ್ಬಂಧಿತ ಅನುದಾನ
ಪ್ರತೀ ಗ್ರಾಮ ಪಂಚಾಯತ್ಗಳು 2,241.45 ಕೋಟಿ ರೂ.ಗಳಲ್ಲಿ ಶೇ. 60ರಷ್ಟು ನಿರ್ಬಂಧಿತ ಅನುದಾನವಾಗಿರಲಿದ್ದು ಶೇ. 40 ಮೂಲ ಅನುದಾನವಾಗಿರಲಿದೆ. ಮೂಲ ಅನುದಾನವನ್ನು ಯಾವುದೇ ಕಾರಣಕ್ಕೂ ಪಂಚಾಯತ್ ಸಿಬಂದಿಯ ವೇತನ ಪಾವತಿ ಅಥವಾ ಕಚೇರಿಯ ಇತರ ವೆಚ್ಚಗಳಿಗೆ ಬಳಸುವಂತಿಲ್ಲ. ನಿರ್ಬಂಧಿತ ಅನುದಾನವನ್ನು ಗ್ರಾಮಾಂತರ ಪ್ರದೇಶದ ನೈರ್ಮಲೀಕರಣ ಸೇವೆ ಉತ್ತಮಗೊಳಿಸುವಿಕೆ, ಬಯಲು ಬಹಿರ್ದೆಸೆಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳುವಿಕೆ, ನೀರು ಸರಬ ರಾಜು, ಮಳೆ ನೀರು ಕೊಯ್ಲು, ನೀರು ಮರುಬಳಕೆ ಸೇರಿ ಇನ್ನಿತರ ಕಾಮಗಾರಿಗಳಿಗೆ ಬಳಸಬಹುದು ಎಂದು ಆಯೋಗ ಸೂಚಿಸಿದೆ.
ಒಂದು ವೇಳೆ ಮಳೆ ನೀರು ಕೊಯ್ಲುನಂತಹ ಯೋಜನೆಗಳು ಅನುಷ್ಠಾನಗೊಂಡಿದ್ದರೆ, ಆ ಅನುದಾನವನ್ನು ನಿಗದಿತ ಮಾರ್ಗಸೂಚಿಯಡಿ ಬೇರೆ ಕಾಮಗಾರಿಗೆ ಬಳಸಬಹುದು. ಲಭ್ಯ ಅನುದಾನದಡಿ ಶೇ. 5ರಷ್ಟನ್ನು ವಿಶೇಷಚೇತನರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು ವೈಯಕ್ತಿಕ ಸವಲತ್ತು ನೀಡುವಂತಿಲ್ಲ ಎಂದು ಷರತ್ತು ವಿಧಿಸಿದೆ.
ಯಾವುದಕ್ಕೆ ಬಳಕೆ?
ವಿದ್ಯುತ್ ಬಿಲ್ ಕಡಿಮೆ ಮಾಡಲು ಸೌರ ವಿದ್ಯುತ್ ಅಳವಡಿಸಲು ಮೂಲ ಅನುದಾನ ಬಳಸಿಕೊಳ್ಳಬಹುದು.
* ಕೃಷಿ, ತೋಟಗಾರಿಕೆ, ರೇಷ್ಮೆ ಬಳೆಗಳ ಉತ್ಪಾದನೆ ಹೆಚ್ಚಿಸಬಹುದಾದ ಸರಕಾರಿ ಕಾರ್ಯಕ್ರಮಗಳಿಗೆ ಉಪಯೋಗಿಸಬಹುದು.
* ಬಡತನ ನಿರ್ಮೂಲನೆಗಾಗಿ ಎನ್ಆರ್ಎಲ್ಎಂ ಮತ್ತು ಸಂಜೀವಿನಿ ಯೋಜನೆ ಜತೆಗೆ ಸೇರಿಸಿ ಅನುಷ್ಠಾನ ಮಾಡಬಹುದು.
* ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ, ಮತ್ತೆ ಶಾಲೆಗೆ ಸೇರಿಸುವ ಕಾರ್ಯ, ಗ್ರಂಥಾಲಯ, ವಾಚನಾಲಯಗಳ ನಿರ್ವಹಣೆ. ಸರಕಾರಿ ಶಾಲೆ, ಅಂಗನವಾಡಿ ಶೌಚಾಲಯ ನಿರ್ಮಾಣ.
* ಆರೋಗ್ಯ ಇಲಾಖೆಯ ಪಿಎಚ್ಸಿ, ಸಿಎಚ್ಸಿ, ಉಪಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬಹುದು.
* ಸಾಂಕ್ರಾಮಿಕ ರೋಗ ತಡೆ, ಪಶು ವೈದ್ಯ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ
Political: ಡಿಸಿಎಂ ಡಿ.ಕೆ.ಶಿವಕುಮಾರ್ -ಪರಮೇಶ್ವರ್ ರಹಸ್ಯ ಭೇಟಿ; ಮಾತುಕತೆ
Illegal immigration: ಪಾಕಿಸ್ಥಾನಿಗರ ವಿಚಾರಣೆ ನಡೆಯುತ್ತಿದೆ: ಗೃಹ ಸಚಿವ ಪರಮೇಶ್ವರ್
Govt.,: ಆರ್ಥಿಕ ಹೊರೆ ತಗ್ಗಿಸಲು ನಿಗಮ-ಮಂಡಳಿ ವಿಲೀನ?
Mysuru: ರಾಮೋಜಿ ಫಿಲಂ ಸಿಟಿ ಮಾದರಿ ಮೈಸೂರು ಚಿತ್ರನಗರಿ ನಿರ್ಮಾಣ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ
Bantwal: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
Kolkata Case: ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು
ಸುರತ್ಕಲ್ನಲ್ಲಿ ಪವಿತ್ರಾ ಗೌಡ ಹೋಲುವ ಕೇಸ್: ಯುವತಿಗೆ ಅಶ್ಲೀಲ ಫೋಟೋ- ಸಂದೇಶ ಕಳಿಸಿ ಕಿರುಕುಳ
Lucknow: 1.5 ಲಕ್ಷ ರೂ. ಮೌಲ್ಯದ iPhone ಡೆಲಿವರಿ ಮಾಡಲು ಹೋದ ಯುವಕನ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.