BBK-11: ಗೌತಮಿ ಮೇಲೆ ಸ್ವರ್ಗ ನಿವಾಸಿಗಳ ಕೆಂಗಣ್ಣು.. ಬಿಗ್ಬಾಸ್ನಲ್ಲಿಂದು ಮಾತಿನ ಯುದ್ಧ
Team Udayavani, Oct 1, 2024, 11:08 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11)ದಲ್ಲಿ ಮೊದಲ ದಿನವೇ ಸ್ವರ್ಗ – ನರಕದ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಕೆಲವರು ಆಟದ ಮೂಲಕ ಉತ್ತರ ಕೊಡಲು ಸಿದ್ದವಾಗಿದ್ದರೆ, ಇನ್ನು ಕೆಲವರು ರಣತಂತ್ರದ ಮೂಲಕ ಉತ್ತರ ಕೊಡಲು ಸಿದ್ದರಾಗಿದ್ದಾರೆ.
ಮೊದಲ ದಿನ ಆಟದಲ್ಲಿ ಚೈತ್ರಾ (Chaitra Kundapura), ಯಮುನಾ (Yamuna) ಹಾಗೂ ಜಗದೀಶ್ (Lawyer Jagadish) ಅವರು ತನ್ನ ಅಸಲಿ ಆಟವನ್ನು ತೋರಿಸಲು ಶುರು ಮಾಡಿದ್ದಾರೆ. ಮೂವರ ಧ್ವನಿ ಬಿಗ್ ಬಾಸ್ ಮನೆಯಲ್ಲಿ ಜೋರಾಗಿ ಕೇಳಿದೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಇನ್ನೊಂದು ಕಡೆ ಉಳಿದ ನಾಮಿನೇಷನ್ ಗಾಗಿ ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ವೊಂದನ್ನು ನೀಡಿದ್ದಾರೆ. ಎರಡನೇ ಹಂತದ ನಾಮಿನೇಷನ್ ಪ್ರಕ್ರಿಯೆಗೆ ಟಾಸ್ಕ್ ನೀಡಲಿದ್ದು,ಸಾಹಸ ಟಾಸ್ಕ್ ಮಾಡುವುದನ್ನು ಪ್ರೋಮದಲ್ಲಿ ತೋರಿಸಲಾಗಿದೆ.
ಯಮುನಾ, ಭವ್ಯಾ, ಗೌತಮಿಯ (Gauthami Jadav) ಹೆಸರು ನಾಮಿನೇಷನ್ ಆಗಿರುವುದು ಪ್ರೋಮೋದಲ್ಲಿ ತೋರಿಸಲಾಗಿದೆ. ಭವ್ಯಾ ಅವರ ಹಸರೆನ್ನು ಹೇಳಿ ಅವರು ಡಾಮಿನೇಟ್ ಆಗಿದ್ದಾರೆ ಎನ್ನುವ ಕಾರಣವನ್ನು ನೀಡಿದ್ದಾರೆ. ಇನ್ನೊಂದು ಕಡೆ ಎರಡು ಮೂರು ಮಂದಿ ಗೌತಮಿ ಅವರ ಹೆಸರು ಹೇಳಿ ಅವರಿಗೆ ನರಕದ ನಿವಾಸಿಗಳ ಮೇಲೆ ಹೆಚ್ಚಿನ ಕಾಳಜಿ ಇದೆ. ನಮ್ಮಗಿಂತ ಜಾಸ್ತಿ ಗೌತಮಿ ನರಕದ ನಿವಾಸಿಗಳ ಜತೆ ಇರುತ್ತಾರೆ ಎನ್ನುವ ಕಾರಣವನ್ನು ನೀಡಿದ್ದಾರೆ.
ಮೊದಲ ನಾಮಿನೇಶನ್ ತಾಪ ಸ್ವರ್ಗಕ್ಕೂ ವ್ಯಾಪಿಸಿದ್ಯಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/hOSwZCCMjv
— Colors Kannada (@ColorsKannada) October 1, 2024
ಈ ನಡುವೆ ನರಕದ ನಿವಾಸಿಗಳ ಜತೆ ಹೆಚ್ಚಿನ ಟೈಮ್ ಕಳೆಯುತ್ತಾರೆ ಎನ್ನುವ ವಿಚಾರಕ್ಕೆ ಶಿಶಿರ್ (Shishir Shastry) ಹಾಗೂ ಯಮುನಾ ನಡುವೆ ಮಾತಿನ ಯುದ್ದ ನಡೆದಿದೆ. ನಮ್ಮ ಹತ್ರ ಅವರು ಮಾತನಾಡಿದ್ರೆ ಏನು ತಪ್ಪು ಎಂದು ಶಿಶಿರ್ ಪ್ರಶ್ನಿಸಿದ್ದಾರೆ. ಇದಕ್ಕೆ ನಾನು ನಿಮಗೆ ಉತ್ತರ ಕೊಡಬೇಕಾಗಿಲ್ಲ ಎಂದು ಯಮುನಾ ಹೇಳಿದ್ದಾರೆ. ಈ ನಡುವೆ ಯಮುನಾ ಶಿಶಿರ್ ಅವರಿಗೆ Who are You? ಎಂದಿದ್ದಾರೆ. ಇದಕ್ಕೆ ಶಿಶಿರ್ ಅವರು ಗರಂ ಆಗಿ ನೀವು ನಮಗೆ Who are You? ಎಂದು ಹೇಳುವ ಹಾಗಿಲ್ಲ ಎಂದು ಮರು ಉತ್ತರ ಕೊಟ್ಟಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇಂದು ರಾತ್ರಿ(ಅ.1ರಂದು) 9:30ಕ್ಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK-11: ಬಿಗ್ಬಾಸ್ ಮನೆಯಲ್ಲಿ ಆ ʼಡೌಟ್ʼನಿಂದಲೇ ಶುರುವಾಯಿತು ಜಗಳ
BBK11: ಬಿಗ್ಬಾಸ್ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್ ಸುರೇಶ್ ಬಳಿ ಇರುವುದೇನು?
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು
AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್ಬಾಸ್ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್
BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thirthahalli: ವಾಗ್ದೇವಿ ಶಾಲೆಯ 4 ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ
Legislative Council Bye Election: ಕಿಶೋರ್ ಕುಮಾರ್ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್
Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು
Politics: ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ರಾಜೀನಾಮೆ ಕೊಡುವುದು:ಆರಗ
Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.