Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

ಒಂದು ವೇಳೆ ಆರೋಪಿ ಕ್ರಿಮಿನಲ್‌ ಕೇಸ್‌ ಎದುರಿಸುತ್ತಿದ್ದರೆ...

Team Udayavani, Oct 1, 2024, 12:51 PM IST

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

ನವದೆಹಲಿ: ಸಾರ್ವಜನಿಕ ಸುರಕ್ಷತೆ ಸರ್ವೋತ್ಕೃಷ್ಟವಾದದ್ದು, ಈ ನಿಟ್ಟಿನಲ್ಲಿ ರಸ್ತೆ, ಜಲಮೂಲ ಅಥವಾ ರೈಲ್ವೆ ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧರ್ಮದ ದೇವಸ್ಥಾನ, ದರ್ಗಾಗಳಿರಲಿ ಅವೆಲ್ಲವನ್ನೂ ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ (Supreme court) ಮಂಗಳವಾರ (ಅ.01) ಮಹತ್ವದ ಆದೇಶ ನೀಡಿದೆ.

“ಭಾರತ ಜಾತ್ಯತೀತ ದೇಶವಾಗಿದೆ. ಬುಲ್ಡೋಜರ್‌ ಕಾರ್ಯಾಚರಣೆ ಮತ್ತು ಅತಿಕ್ರಮಣ ವಿರೋಧಿ ತೆರವು ಕಾರ್ಯ ಯಾವುದೇ ಧರ್ಮವನ್ನು ಲೆಕ್ಕಿಸದೇ ಎಲ್ಲಾ ನಾಗರಿಕರಿಗೆ ಸಂಬಂಧಿಸಿದೆ” ಎಂದು ಸುಪ್ರೀಂಕೋರ್ಟ್‌ ಒತ್ತಿ ಹೇಳಿದೆ.

ಅಪರಾಧ ಕೃತ್ಯ ಎಸಗಿದ ಆರೋಪಿಗಳ ಮನೆಯ ಮೇಲಿನ ಬುಲ್ಡೋಜರ್‌ ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಪೀಠದ ಜಸ್ಟೀಸ್‌ ಬಿಆರ್‌ ಗವಾಯಿ ಮತ್ತು ಜಸ್ಟೀಸ್‌ ಕೆವಿ ವಿಶ್ವನಾಥನ್‌, ಬುಲ್ಡೋಜರ್‌ ಕಾರ್ಯಾಚರಣೆಯ ಟ್ರೆಂಡ್‌ ಹಲವು ರಾಜ್ಯಗಳಲ್ಲಿ ಮುಂದುವರಿದಿದೆ. ಇದನ್ನು ಬುಲ್ಡೋಜರ್‌ ನ್ಯಾಯ ಎಂದೇ ಕರೆಯುತ್ತಿದ್ದಾರೆ. ಈ ಹಿಂದೆ ಅಧಿಕಾರಿಗಳು ಕಾನೂನು ಬಾಹಿರ ಕಟ್ಟಡಗಳ ತೆರವಿಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳ ಪರವಾಗಿ ವಾದಿಸಲು ಹಾಜರಾಗಿದ್ದರು. ಒಂದು ವೇಳೆ ಆರೋಪಿ ಕ್ರಿಮಿನಲ್‌ ಕೇಸ್‌ ಎದುರಿಸುತ್ತಿದ್ದರೆ ಅವರು ಬುಲ್ಡೋಜರ್‌ ಕಾರ್ಯಾಚರಣೆ ಎದುರಿಸಲು ಕಾರಣವಾಗಬಹುದೇ ಎಂದು ಪೀಠ ಪ್ರಶ್ನಿಸಿತ್ತು.

“ಅದಕ್ಕೆ ಮೆಹ್ತಾ ಅವರು, ಖಂಡಿತವಾಗಿಯೂ ಇಲ್ಲ, ಅವರು ಅತ್ಯಾಚಾರ ಅಥವಾ ಭಯೋತ್ಪಾದನೆಯಂತಹ ಕೃತ್ಯ ಎಸಗಿದ್ದರೂ ಕೂಡಾ ಅಂತಹ ಕಾರ್ಯಾಚರಣೆ ಸಮರ್ಪಕವಲ್ಲ. ಮೈ ಲಾರ್ಡ್‌, ಅದೇ ರೀತಿ ಕಾರ್ಯಾಚರಣೆ ನಡೆಸುವ ಬಗ್ಗೆ ಒಂದು ದಿನದ ಮೊದಲು ನೋಟಿಸ್‌ ಅಂಟಿಸಬಾರದು, ಇದು ಬಹುತೇಕ ನಗರಪಾಲಿಕೆಯ ಕಾನೂನು ಅನ್ವಯ ಕಾರ್ಯಾಚರಣೆ ನಡೆದಿದೆ. ಇಂತಹ ಕಾರ್ಯಾಚರಣೆ ಬಗ್ಗೆ ರಿಜಿಸ್ಟರ್ಡ್‌ ಅಂಚೆ ಮೂಲಕ ನೋಟಿಸ್‌ ನೀಡಿರುವ ಬಗ್ಗೆ ಪೀಠ ಗಮನಿಸಬೇಕು ಎಂದು ಹೇಳಿದರು.

ಯಾವುದೇ ಅನಧಿಕೃತ ಕಟ್ಟಡವಿರಲಿ, ಅವೆಲ್ಲದಕ್ಕೂ ಒಂದೇ ಕಾನೂನು ಅನ್ವಯ, ಇದು ಧರ್ಮ ಅಥವಾ ನಂಬಿಕೆಗೆ ಸಂಬಂಧಿಸಿದ್ದಲ್ಲ ಎಂದು ಜಸ್ಟೀಸ್‌ ಗವಾಯಿ ಪ್ರತ್ಯುತ್ತರ ನೀಡಿದರು.

ಆಸ್ತಿ ಧ್ವಂಸಗೊಳಿಸಲು ಅಪರಾಧ ಕೃತ್ಯ ಎಸಗಿರುವುದೇ ಮಾನದಂಡವಾಗಬಾರದು, ನಾಗರಿಕ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಮಾತ್ರ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿ ಆದೇಶ ನೀಡಿದೆ.

ಟಾಪ್ ನ್ಯೂಸ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಬಸವರಾಜ ಬೊಮ್ಮಾಯಿ

Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ

BBK-11: ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

BBK-11: ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

Ranji trophy 2024 karnataka team

Ranji Trophy 2024-25: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ ಆಯ್ಕೆ

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

Kolkata Case: ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

Kolkata Case: ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

Lacknow: 1.5 ಲಕ್ಷ ರೂ. ಮೌಲ್ಯದ iPhone ಡೆಲಿವರಿ ಮಾಡಲು ಹೋದ ಯುವಕನ ಹ*ತ್ಯೆ!

Lucknow: 1.5 ಲಕ್ಷ ರೂ. ಮೌಲ್ಯದ iPhone ಡೆಲಿವರಿ ಮಾಡಲು ಹೋದ ಯುವಕನ ಹ*ತ್ಯೆ!

Himachal Pradesh: ವಿಮಾನ ಪತನಗೊಂಡು 56 ವರ್ಷಗಳ ಬಳಿಕ 4 ಮೃತದೇಹ ಪತ್ತೆ

Himachal Pradesh: ಭಾರತೀಯ ವಾಯುಪಡೆ ವಿಮಾನ ಪತನಗೊಂಡು 56 ವರ್ಷಗಳ ಬಳಿಕ 4 ಮೃತದೇಹ ಶೋಧ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

araga

Politics: ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ರಾಜೀನಾಮೆ ಕೊಡುವುದು:ಆರಗ

ಬಸವರಾಜ ಬೊಮ್ಮಾಯಿ

Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ

0622

Ranav Kshirsagr: ಪಾಸಿಟಿವ್‌ ಹುಡುಗನ ನೆಗೆಟಿವ್‌ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.