Ullal: ಕಾಲೇಜು ಹುಡುಗನ ಹುಲಿ ತಲೆ ಕೀ ಚೈನ್‌ಗೆ ಬೇಡಿಕೆ!

ಸಣ್ಣ ವಯಸ್ಸಿನಲ್ಲೇ ಮೂಡಿದ ಕಲಾಸಕ್ತಿಯಿಂದ ಲಾಭ; ಬಿಡುವಿನ ವೇಳೆಯಲ್ಲಿ ತಲೆಯ ಪ್ರತಿಕೃತಿ ರಚಿಸಿ ಮಾರಾಟ

Team Udayavani, Oct 1, 2024, 1:15 PM IST

3(1)

ಉಳ್ಳಾಲ: ನವರಾತ್ರಿಗೆ ಭಾರಿ ಜನಾಕರ್ಷಣೆ ಪಡೆಯುವ ಹುಲಿ ವೇಷ, ಕುಣಿತ ಈಗ ಬೇರೆ ಬೇರೆ ರೂಪಗಳಲ್ಲಿ ವ್ಯಾಪಿಸುತ್ತಿದೆ. ಮನೆ ಮನೆಗೆ ಬರುವ ಹುಲಿಗಳು, ದೊಡ್ಡ ವೇದಿಕೆಗಳಲ್ಲಿ ನಡೆಯುವ ಹುಲಿ ವೇಷದ ಸ್ಪರ್ಧೆಗಳ ನಡುವೆ ಹುಲಿಗಳ ತಲೆಯ ಪ್ರತಿಕೃತಿ, ಕೀಚೈನ್‌ಗಳಿಗೂ ಭಾರಿ ಬೇಡಿಕೆ ಹುಟ್ಟಿಕೊಂಡಿದೆ. ಇದನ್ನು ಗಮನಿಸಿ ಕೋಟೆಕಾರಿನ ಬಾಲಕನೊಬ್ಬ ಆರಂಭಿಸಿರುವ ಹುಲಿ ವೇಷದ ಕೀ ಚೈನ್‌ ಮತ್ತು ಪ್ರತಿಕೃತಿ ನಿರ್ಮಾಣ ಕಾಯಕಕ್ಕೆ ಈಗ ಭಾರಿ ಬೆಲೆ ಬಂದಿದೆ. ಬೆಂಗಳೂರು, ಮುಂಬಯಿ ಸಹಿತ ವಿವಿಧೆಡೆಯಿಂದ ಬೇಡಿಕೆಗಳು ಬರುತ್ತಿವೆಯಂತೆ.

ಕೋಟೆಕಾರು ನಿವಾಸಿ ಪ್ರಸಿದ್ಧ ಕಲಾವಿದ ಜಯಪ್ರಸಾದ್‌ (ಜೆ.ಪಿ.) ಆಚಾರ್ಯ ಅವರ ಪುತ್ರನಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಜ್ಯೇಷ್ಠ ಆಚಾರ್ಯ ಮೂರನೇ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದ. ಅದರ ಜತೆಗೆ ತಂದೆಯ ಗರಡಿಯಲ್ಲಿ ಪಳಗಿದ್ದ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭಿಸಿದ ಹುಲಿ ವೇಷದ ತಲೆಯ ಪ್ರತಿಕೃತಿ ರಚನೆ ಇದೀಗ ಬೇಡಿಕೆಯನ್ನು ಪಡೆದುಕೊಂಡಿದೆ.

ಕಲಾವಿದ ಜೆ.ಪಿ. ಆಚಾರ್ಯ ಅವರು ಹುಲಿ ವೇಷ ಸ್ಪರ್ಧೆಯ ವಿಜೇತರಿಗೆ ನೀಡುವ ಹುಲಿಯ ತಲೆಗಳ ಪ್ರತಿಕೃತಿಯನ್ನು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಈ ನಡುವೆ ಜ್ಯೇಷ್ಠ ಒಂದು ಇಂಚು ಮತ್ತು ಎರಡು ಇಂಚಿನ ಹುಲಿಯ ತಲೆಯ ಪ್ರತಿಕೃತಿಯನ್ನು ನಿರ್ಮಿಸಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಜಾಲತಾಣದಲ್ಲಿ ವೀಕ್ಷಿಸಿದ ಜನರು ತಮಗೂ ಅದೇ ಮಾದರಿಯಲ್ಲಿ ತಯಾರಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಜ್ಯೇಷ್ಠ ಕಲಿಕೆಯ ಜತೆಗೇ ಈ ಪ್ರತಿಕೃತಿ ಮತ್ತು ಕೀಚೈನ್‌ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಲೇಜಿನಿಂದ ಬರುವಾಗ ಸಂಜೆ ಐದು ಗಂಟೆ ಆಗುತ್ತದೆ. ಕಲಿಕೆಯೊಂದಿಗೆ ಈ ಒಂದು ಪ್ರತಿಕೃತಿಗೆ ಬಣ್ಣ ತುಂಬಲು ಒಂದು ದಿವಸ ಹಿಡಿಯುತ್ತದೆ. ಹವ್ಯಾಸಕ್ಕಾಗಿ ಆರಂಭಿಸಿರುವ ಈ ಕಲೆಯನ್ನು ಕಲಿಕೆಯೊಂದಿಗೆ ಮುಂದುವರಿಸುತ್ತೇನೆ. ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಯೋಜನೆ ಇದೆ.
-ಜ್ಯೇಷ್ಠ ಆಚಾರ್ಯ,ಯುವ ಕಲಾವಿದ

ಜ್ಯೇಷ್ಠ ಮೂರನೇ ವರ್ಷದಿಂದಲೇ ಡ್ರಾಯಿಂಗ್‌ ರಚಿಸಲು ಆರಂಭಿಸಿದ್ದ. ಬಳಿಕ ನಾನು ಮಾಡುತ್ತಿದ್ದ ಪ್ರತಿಕೃತಿಗಳ ಬಗ್ಗೆ ಆಸಕ್ತಿ ಮೂಡಿ ಹುಲಿಯ ತಲೆಯ ಸಣ್ಣ ಪ್ರತಿಕೃತಿ ರಚಿಸಿದ್ದ. ಭಾರ ಕಡಿಮೆ ಮಾಡುವುದಕ್ಕಾಗಿ ಈಗ ಫೈಬರ್‌ ಮೋಲ್ಡ್‌ನಲ್ಲಿ ಪ್ರತಿಕೃತಿ ತಯಾರಿಸಿ ಬಣ್ಣ ತುಂಬುವ ಕೆಲಸ ಮಾಡುತ್ತಿದ್ದಾನೆ.
-ಜೆ.ಪಿ. ಆಚಾರ್ಯ ಕೋಟೆಕಾರು, ಕಲಾವಿದರು

ಹುಲಿ ತಲೆ ಪ್ರತಿಕೃತಿ ನಿರ್ಮಾಣ ಹೇಗೆ?
ಮೊದಲು ಮಣ್ಣಿನಲ್ಲಿ ಹುಲಿಯ ತಲೆಯ ಪ್ರತಿಕೃತಿಯನ್ನು ತಯಾರಿಸಿ ಬಳಿಕ ಅದರ ಸಿಲಿಕಾನ್‌ ಮೌಲ್ಡ್‌ ತೆಗೆಯುತ್ತೇನೆ. ಫೈಬರ್‌ನಲ್ಲಿ ಗಟ್ಟಿ ಮಾಡುತ್ತೇನೆ. ಹೀಗೆ ಮಾಡಿದ ಒಂದು ಪ್ರತಿಕೃತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೆ. ಕೆಲವರು ಇದರ ಬೆಲೆ ಕೇಳಲು ಆರಂಭಿಸಿದರು. ಬಳಿಕ ಬೇಡಿಕೆ ಮೇರೆಗೆ ನಿರ್ಮಾಣಕ್ಕೆ ತೊಡಗಿಕೊಂಡೆ ಎನ್ನುತ್ತಾರೆ ಜ್ಯೇಷ್ಠ.

-ವಸಂತ ಎನ್‌. ಕೊಣಾಜೆ

ಟಾಪ್ ನ್ಯೂಸ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಬಸವರಾಜ ಬೊಮ್ಮಾಯಿ

Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ

BBK-11: ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

BBK-11: ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

Ranji trophy 2024 karnataka team

Ranji Trophy 2024-25: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ ಆಯ್ಕೆ

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

Mangaluru: ದಾಂಡಿಯಾ ನೃತ್ಯ ಆಯೋಜನೆಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಮನವಿ

7

Surathkal: ಈಡೇರದ ಸ್ಕೌಟ್ಸ್‌ – ಗೈಡ್ಸ್‌ ಭವನ ಬೇಡಿಕೆ

2

Mangaluru: ಸೈಬರ್‌ ವಂಚಕರಿಗೆ ಪೊಲೀಸರ ಜಾಲ!

malpe

Bajpe: ನೀರುಪಾಲಾಗಿದ್ದ ಒಬ್ಬನ ಶವ ಪತ್ತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-thirthahalli

Thirthahalli: ವಾಗ್ದೇವಿ ಶಾಲೆಯ 4 ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Legislative Council Bye Election: ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

Koteshwara: ಟಿಪ್ಪರ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

araga

Politics: ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ರಾಜೀನಾಮೆ ಕೊಡುವುದು:ಆರಗ

ಬಸವರಾಜ ಬೊಮ್ಮಾಯಿ

Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.