Udupi ನಗರದಲ್ಲಿವೆ ಅಪಾಯಕಾರಿ ಗುಂಡಿಗಳು

ಜೋಡುಕಟ್ಟೆ , ಕಲ್ಸಂಕ, ಕೆ.ಎಂ. ಮಾರ್ಗ ಸಂಚಾರಕ್ಕೆ ಸಮಸ್ಯೆ;  ಎಚ್ಚರ ತಪ್ಪಿದರೆ ವಾಹನಗಳ ಅಪಘಾತ

Team Udayavani, Oct 1, 2024, 3:01 PM IST

8(1)

ಉಡುಪಿ: ನಗರದೊಳಗಿನ ಆದಿಉಡುಪಿ-ಮಲ್ಪೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಗುಂಡಿಗಳಿರುವುದಲ್ಲ. ನಗರದೊಳಗಿನ ಕೆಲವು ರಸ್ತೆಗಳು ಕೂಡ ನಿತ್ಯ ಸವಾರರಿಗೆ ಸಂಚಾರ ಸಂಚಕಾರ ತಂದೊಡ್ಡುತ್ತಿವೆ.

ನಗರದ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಜನ ಸಮಾನ್ಯರನ್ನು ಬೆಚ್ಚಿ ಬೀಳಿಸುವಂತಿದೆ. ಇದೀಗ ಮಳೆಗಾಲ ಕಡಿಮೆಯಾಗಿ ಬಿಸಿಲಿನ ವಾತಾವರಣ ಆರಂಭವಾಗಿದ್ದರೂ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ನಗರಸಭೆ ಕ್ರಮವಹಿಸಿದಂತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿನ ಅಪಾಯಕಾರಿ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುವುದು ಮಾತ್ರವಲ್ಲದೇ ಟ್ರಾಫಿಕ್‌ ಸಮಸ್ಯೆಯನ್ನು ಸೃಷ್ಟಿಸುತ್ತಿವೆ.

ಜೋಡುಕಟ್ಟೆ ಕೆ. ಎಂ. ಮಾರ್ಗ ರಸ್ತೆ, ಕಲ್ಸಂಕ ಸಹಿತ ಕೆಲವು ಕಡೆಗಳಲ್ಲಿ ಬೃಹತ್‌ ಗುಂಡಿಗಳು ಅಪಾಯವನ್ನು ಆಹ್ವಾನಿಸುತ್ತಿದೆ. ಬ್ರಹ್ಮಗಿರಿಯಿಂದ ಅಜ್ಜರಕಾಡು ಮಾರ್ಗವಾಗಿ ಜೋಡುಕಟ್ಟೆ ಸಂಪರ್ಕಿಸುವ ವೃತ್ತದಲ್ಲಿ ಎರಡು ದೊಡ್ಡ ಗಾತ್ರದ ಗುಂಡಿಗಳು ಅಪಾಯಕಾರಿಯಾಗಿದೆ.

ಈಗಾಗಲೆ ಸ್ಕೂಟರ್‌ ಸವಾರರು ಕೆಲವರು ಗುಂಡಿಗಳು ಅರಿವಿಗೆ ಬಾರದೆ ನಿಯಂತ್ರಣ ತಪ್ಪಿ ಬಿದ್ದ ಘಟನೆಗಳು ಸಂಭವಿಸಿದೆ. ಇನ್ನಿತರೆ ವಾಹನಗಳಿಗೂ ಈ ಗುಂಡಿ ಅಪಾಯಕಾರಿಯಾಗಿ ಕಾಡುತ್ತಿದೆ.

ಕಲ್ಸಂಕ ಪರಿಸರದಲ್ಲಿ ರಸ್ತೆ ಬದಿಯ ಎರಡು ಕಡೆಗಳಲ್ಲಿ ಇಂಟರ್‌ಲಾಕ್‌ ಜಾಗದಲ್ಲಿ ಮಣ್ಣು ಕುಸಿದು ಬೃಹತ್‌ ಗುಂಡಿ ಸೃಷ್ಟಿಯಾಗುತ್ತಿದೆ. ಈಗಾಗಲೆ ಪೈಪ್‌ಲೈನ್‌ ಸಹಿತ ಮೊದಲಾದ ಕಾಮಗಾರಿ ಕಾರಣದಿಂದ ಈ ಪರಿಸರದಲ್ಲಿ ಇಂಟರ್‌ಲಾಕ್‌ ತೆಗೆದು ಕಾಮಗಾರಿ ನಡೆಸಲಾಗಿತ್ತು.

ಆ ಪ್ರದೇಶ ಕುಸಿತವಾಗುತ್ತಿದ್ದು, ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ. ಕಲ್ಸಂಕ ಯಾವಾಗಲು ಹೆಚ್ಚು ವಾಹನ ಸಂಚಾರದ ವೃತ್ತವಾಗಿದೆ. ಶ್ರೀ ಕೃಷ್ಣ ಮಠಕ್ಕೆ ಬರುವ ಭಕ್ತರ ವಾಹನಗಳು ಇದೇ ಮಾರ್ಗದಲ್ಲಿ ಓಡಾಟ ನಡೆಸುತ್ತವೆ. ಇಲ್ಲಿ ಕೊಂಚ ಎಚ್ಚರ ತಪ್ಪಿ ಬದಿಯಲ್ಲಿ ಸಂಚರಿಸಿದರೂ ನಿಯಂತ್ರಣ ತಪ್ಪಿ ಬೀಳುವ ಅಪಾಯವಿದೆ. ಈ ಬಗ್ಗೆ ನಗರಸಭೆ ಅಥವಾ ಸೂಕ್ತ ಕ್ರಮವಹಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪರ್ಯಾಯ ಸಮಯದಲ್ಲಿ ನಿರ್ಮಿಸಲಾಗಿದ್ದ ಬ್ರಹ್ಮಗಿರಿಯಿಂದ ಅಜ್ಜರಕಾಡು ರಸ್ತೆ ಮೇಲಿನ ತೇಪೆ ಮತ್ತೆ ಕಿತ್ತುಹೋಗಿ ಗುಂಡಿ ಬಿದ್ದಿವೆ. ಇಲ್ಲಿ ವಾಹನ ಸವಾರಿ ನಿತ್ಯ ಕಿರಿಕಿರಿ ಎಂದೆನಿಸಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿರುವುದರಿಂದ ಅಪಾಯಕಾರಿ ಗುಂಡಿಗಳನ್ನು ಗುರುತಿಸಿ ಶೀಘ್ರ ದುರಸ್ತಿ ಪಡಿಸುವಂತೆ ನಗರಸಭೆಯನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.

ಹದಗೆಟ್ಟ ರಸ್ತೆ, ಗುಂಡಿಗಳ ದುರಸ್ತಿಗೆ ಕ್ರಮ
ಮಳೆ ಕಡಿಮೆಯಾಗಿರುವುದರಿಂದ ನಗರದಲ್ಲಿ ಹದಗೆಟ್ಟ ರಸ್ತೆ ಮತ್ತು ಗುಂಡಿಗಳ ದುರಸ್ತಿಗೆ ಕ್ರಮವಹಿಸಲಾಗುವುದು. ನಗರದ ಹೆದ್ದಾರಿ ರಸ್ತೆ ಬದಿ ಇಂಟರ್‌ಲಾಕ್‌ ಅಳವಡಿಸಿದ ಕಡೆಗಳಲ್ಲಿಯೂ ಕೆಲವು ಅವ್ಯವಸ್ಥೆ ಇದ್ದು, ಸರಿಪಡಿಸಲು ಹೆದ್ದಾರಿ ಎಂಜಿನಿಯರ್‌ಗೆ ಸೂಚನೆ ನೀಡಲಾಗುವುದು. ವಾರಾಹಿ ಪೈಪ್‌ಲೈನ್‌ ಅನಂತರ ಕೆಲವು ರಸ್ತೆ ದುರಸ್ತಿ ಗೆ ಬಾಕಿ ಇದ್ದು, ಇದನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ತಿಳಿಸಲಾಗುವುದು. ಶಿರಿಬೀಡು ಯುಜಿಡಿ ಮ್ಯಾನ್‌ಹೋಲ್‌ ಕುಸಿದು ಹೋಗಿದ್ದು, ದುರಸ್ತಿ ಕಾರ್ಯ ಅಗತ್ಯವಾಗಿತ್ತು. ಶೀಘ್ರವಾಗಿ ಕಾಮಗಾರಿ ಮುಗಿಸಿ, ವ್ಯವಸ್ಥಿತ ರಸ್ತೆ ನಿರ್ಮಿಸಲಾಗುವುದು. – ಪ್ರಭಾಕರ್‌ ಪೂಜಾರಿ, ಅಧ್ಯಕ್ಷರು, ಉಡುಪಿ ನಗರಸಭೆ.

ಶಿರಿಬೀಡು ಯುಜಿಡಿ ಕಾಮಗಾರಿ, ಟ್ರಾಫಿಕ್‌ ಜಾಮ್‌
ಸರ್ವಿಸ್‌ ಬಸ್‌ ನಿಲ್ದಾಣದಿಂದ ಶಿರಿಬೀಡು ವೃತ್ತ ಸಂಪರ್ಕಿಸುವ ರಸ್ತೆಯಲ್ಲಿ ಒಳಚರಂಡಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿರುವ ಪರಿಣಾಮ ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರ್ಯಾಯ ಮಾರ್ಗದಲ್ಲಿನ ಸಂಚಾರದಲ್ಲಿ ವಾಹನಗಳ ಒತ್ತಡ ಅಧಿಕಗೊಂಡು ಆಗಾಗ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಸದ್ಯಕ್ಕೆ ಮೂರರಿಂದ ನಾಲ್ಕು ಮಂದಿ ಪೊಲೀಸ್‌ ಸಿಬಂದಿ ಸುಗಮ ಸಂಚಾರಕ್ಕೆ ನಿಯೋಜಿಸಲ್ಪಟ್ಟಿದ್ದು, ವಾಹನ ದಟ್ಟಣೆ ಅಧಿಕವಿದ್ದಾಗ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶೀಘ್ರ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಕ್ರಮವಹಿಸಲು ಸ್ಥಳೀಯರು ಸೂಚಿಸಿದ್ದಾರೆ.

ಟಾಪ್ ನ್ಯೂಸ್

ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ

Sai Baba: ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

web

ಹೊಳೆಯುವ, ಆರೋಗ್ಯಕರ ತ್ವಚೆಗೆ 10 ಅತ್ಯುತ್ತಮ ನೈಸರ್ಗಿಕ ಪಾನೀಯಗಳು

Mumbai: ತಾಯಿಯನ್ನು ಕೊಂ*ದು, ದೇಹದ ಭಾಗ ಬೇಯಿಸಿದ ತಿಂದ ಮಗನಿಗೆ ಗಲ್ಲುಶಿಕ್ಷೆ!

Mumbai: ತಾಯಿಯನ್ನು ಕೊಂ*ದು, ದೇಹದ ಭಾಗ ಬೇಯಿಸಿದ ತಿಂದ ಮಗನಿಗೆ ಗಲ್ಲುಶಿಕ್ಷೆ!

Tirupati Laddu case:ಸುಪ್ರೀಂ ತರಾಟೆ ಬೆನ್ನಲ್ಲೇ ಅ.3ರವರೆಗೆ SIT ತನಿಖೆಗೆ ಆಂಧ್ರ ತಡೆ

Tirupati Laddu case:ಸುಪ್ರೀಂ ತರಾಟೆ ಬೆನ್ನಲ್ಲೇ ಅ.3ರವರೆಗೆ SIT ತನಿಖೆಗೆ ಆಂಧ್ರ ತಡೆ

3-anadapura

Anadapura ಬಳಿ ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ

MLA-Beluru

Unstable: ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ಸರಕಾರ ಯತ್ನ: ಶಾಸಕ ಬೇಳೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಅಡುಗೆಯಲ್ಲಿ ಭಾರತಕ್ಕೆ ಮೊದಲ ಶ್ರೇಷ್ಠತಾ ಪದಕ ತಂದ ಹರ್ಷವರ್ಧನ್‌

Udupi: ಅಡುಗೆಯಲ್ಲಿ ಭಾರತಕ್ಕೆ ಮೊದಲ ಶ್ರೇಷ್ಠತಾ ಪದಕ ತಂದ ಹರ್ಷವರ್ಧನ್‌

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಅ.3-12: ನವರಾತ್ರಿ ಮಹೋತ್ಸವ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಅ.3-12: ನವರಾತ್ರಿ ಮಹೋತ್ಸವ

Udupi: ಗೀತಾರ್ಥ ಚಿಂತನೆ-51: ಧೃತರಾಷ್ಟ್ರ, ದುರ್ಯೋಧನ, ಅರ್ಜುನರ ಮನಃಸ್ಥಿತಿ

Udupi: ಗೀತಾರ್ಥ ಚಿಂತನೆ-51: ಧೃತರಾಷ್ಟ್ರ, ದುರ್ಯೋಧನ, ಅರ್ಜುನರ ಮನಃಸ್ಥಿತಿ

ಬೆಂಗಳೂರಿನಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ದಿಗ್ವಿಜಯ ಮಹೋತ್ಸವ

ಬೆಂಗಳೂರಿನಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ದಿಗ್ವಿಜಯ ಮಹೋತ್ಸವ

Untitled-1

Malpe: ಹುಲ್ಲು ತರಲು ಹೋಗಿದ್ದ ಮಹಿಳೆ ನಾಪತ್ತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Aland: ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆಯಿಂದ 160 ಮಂದಿ ಅಸ್ವಸ್ಥ

Aland: ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆಯಿಂದ 160 ಮಂದಿ ಅಸ್ವಸ್ಥ

ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ

Sai Baba: ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

web

ಹೊಳೆಯುವ, ಆರೋಗ್ಯಕರ ತ್ವಚೆಗೆ 10 ಅತ್ಯುತ್ತಮ ನೈಸರ್ಗಿಕ ಪಾನೀಯಗಳು

Mumbai: ತಾಯಿಯನ್ನು ಕೊಂ*ದು, ದೇಹದ ಭಾಗ ಬೇಯಿಸಿದ ತಿಂದ ಮಗನಿಗೆ ಗಲ್ಲುಶಿಕ್ಷೆ!

Mumbai: ತಾಯಿಯನ್ನು ಕೊಂ*ದು, ದೇಹದ ಭಾಗ ಬೇಯಿಸಿದ ತಿಂದ ಮಗನಿಗೆ ಗಲ್ಲುಶಿಕ್ಷೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.