Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ


Team Udayavani, Oct 3, 2024, 8:45 AM IST

WhatsApp Image 2024-10-01 at 9.22.19 PM

ಅಂದು ಭಗವಂತನೇ ಭುವಿಯ ಮೇಲಿದ್ದ ಕಾಲ. ಜಾರಿದ ಸೆರಗಿನ ಹಿಂದೆ ಮಹಾಭಾರತವೇ ನಡೆಯಿತು. ದುಶ್ಯಾಸನನ ಒಡಲ ಬಗೆದು ಆ ನೆತ್ತರಲ್ಲಿ ಪಾಂಚಾಲಿ ತನ್ನ ನೀಳವಾದ ಕೇಶರಾಶಿಯನ್ನು ತೊಳೆದು ಚೂಡಾಮಣಿಯನ್ನು ಧರಿಸಿದಳು. ನೆತ್ತರ ಹನಿಗಳು ನೆತ್ತಿ ಮೇಲಿನಿಂದ ಕೆನ್ನೆಗೆ ಜಾರಿದ್ದೇ ತಡ, ಅಲ್ಲಿಯವರೆಗೆ ಕಣ್ಣೀರ ಹರಿವಿಗೆ ಕೆನ್ನೆ ಮೇಲೆ ಛಾಪುಗೊಂಡಿದ್ದ ಕಣಿವೆಗಳು ಹೆಜ್ಜೆ ಗುರುತುಗಳು ಇಂದು ನೆತ್ತರ ಪ್ರವಾಹಗಳಾದವು. ದ್ರೌಪದಿಯ ಕಣ್ಣುಗಳಲ್ಲಿ ಹೊತ್ತಿ ಉರಿಯುತ್ತಿದ್ದ ಆ ಬೆಂಕಿ, ರಕ್ತದ ಓಕುಳಿಯಲ್ಲಿ ತಣ್ಣಗಾದವು. ಅಲ್ಲಿಗೆ ದುಶ್ಯಾಸನನ ಅಂತ್ಯವಾಯಿತು.

ಆದರೆ ಆ ನೆತ್ತರಹನಿಗಳು ಮತ್ತೆ ಸೇರಿದ್ದು ಕ್ಷಮಯಾ ಧರಿತ್ರಿಯ ಮೇಲೆಯೇ. ಮಳೆ ಸೇರಿ ಹರಿದದ್ದು ಗಂಗೆಯ ಮಡಿಲಲ್ಲೇ. ಅದಕ್ಕೆ ಇರಬೇಕು ಆ ಕಣಗಳು ಇನ್ನು ಭೂಮಿಯನ್ನು ಬಿಟ್ಟುಹೋಗಿಲ್ಲ. ವರ್ಷಗಳು ಉರುಳಿದವು ಮಹಾಭಾರತ ಈಗ ನವಭಾರತವಾಯಿತು.

ಹೊಸ ಕನಸು, ಹೊಸ ಬದುಕು ಆದರೆ ಬಾನೆತ್ತರ ಹಾರಿದರೂ ಭಗವಂತನನ್ನು ನಾವಿನ್ನು ತಲುಪಿಲ್ಲ.

ಸಂಜೆ ಕತ್ತಲು ಮುಸುಕಿದಂತೆ ಮತ್ತೆ ಮಹಾಭಾರತ ಪರ್ವ. ಇಲ್ಲಿ ದ್ರೌಪದಿ ಇನ್ನೂ ಎರಡು ತಿಂಗಳ ಹಸುಗೂಸು, ಎಪ್ಪತ್ತರ ತಾಯಿ, ಇಪ್ಪತ್ತರ ಯುವತಿ, ನಲವತ್ತರ ಹೆಣ್ಣು ಅಥವಾ ಆಕೆ ಮನುಷ್ಯಳೇ ಅಲ್ಲವೇನೋ. ಚದುರಂಗದ ಆಟವಿಲ್ಲ, ಶಕುನಿ ಯಾರು ತಿಳಿದಿಲ್ಲ. ಕೌರವರು ಪಾಂಡವರು ಒಂದೇ ಪಡೆಯಲ್ಲಿ ನಿಂತಿಹರು, ತನ್ನವರು ಪರರು ಎಲ್ಲರು ಒಂದೇ ಸಭೆಯೊಳಗೆ ಕುಳಿತಿದ್ದಾರೆ. ಅಂತಃಪುರವೂ ಸುರಕ್ಷಿತವಲ್ಲ. ಬೆಳಕು ಇರುವಾಗಲೂ ಬದುಕು ಸುಲಭವಲ್ಲ. ಇನ್ನು ಕತ್ತಲ ಪ್ರಪಂಚ ನಮ್ಮದಲ್ಲವೇ ಅಲ್ಲ. ದೂರದಲಿ ಮತ್ತೆ ಕಾಣುತ್ತ ಇರುವುದು ಅದೇ ನೆರಳು, ದುಶ್ಯಾಸನನಿಗೆ ಇಲ್ಲಿ ರೂಪ ಹಲವು.

ಚೂಡಾಮಣಿ ಮತ್ತೆ ಧರೆ ಸೇರಿತು, ಯುದ್ಧಗಳಿಗೆಲ್ಲ ಸ್ವಲ್ಪ ಜಿಬಿ ಡೇಟಾ ಬಾಣಗಳೇ ಸಾಕಾಯಿತು. ರಣರಂಗ ಈಗ ಅಂಗೈಯಲ್ಲೇ ಇದೆ. ಹದಿನಾಲ್ಕು ದಿನವೂ ಇಲ್ಲ ಈಗಿನ ಯುದ್ಧದ ಪರ್ವ. ಅಲ್ಲಲ್ಲಿ ವಸ್ತ್ರಾಪಹರಣ, ಅಲ್ಲಲ್ಲಿ ಅತ್ಯಾಚಾರ, ಸಂಜಯನ ಮಾಧ್ಯಮ ವಿಭಾಗ ಕೌರವರ ಪರವೋ ಪಾಂಡವರ ಪರವೋ ತಿಳಿದಿಲ್ಲ. ಧರ್ಮರಾಯನ ಸರಕಾರದ ಬಳಿ ಪ್ರಯೋಗಿಸಲು ಅಸ್ತ್ರಗಳೇ ಇಲ್ಲ.

ದ್ರೌಪದಿಯ ಚಿತೆಯ ಬೆಂಕಿಯಲ್ಲಿ ಹಲವು ಮೇಣದಬತ್ತಿಗಳು ಉರಿದು ಮುಗಿದವು. ಕಾವಿರದ ಕಿಚ್ಚು ಹೆಚ್ಚು ಹೊತ್ತು ಉಳಿಯಲಿಲ್ಲ.

ಮತ್ತೆ ಒಂದು ಹೊಸ ದಿನ ಹೊಸ ಅಧ್ಯಾಯ ದುಶ್ಯಾಸನನ ಮರು ಜನ್ಮ ಪ್ರತಿದಿನದ ಮಹಾಭಾರತ; ಇದು ಮಹಾ ‘ಭಾರತʼ ಭಾಗ ನೂರು ಮತ್ತೆ ಹತ್ತು ….

ತೇಜಸ್ವಿನಿ.ವಿ.ಎನ್

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟಿದ್ದ ಆರ್‌ಜೆಡಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟಿದ್ದ ಆರ್‌ಜೆಡಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

Kudroli: ಶಾರದೆ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಗೆ ವಿದ್ಯುಕ್ತ ಚಾಲನೆ

Kudroli: ಶಾರದೆ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಗೆ ವಿದ್ಯುಕ್ತ ಚಾಲನೆ

Isha Foundation: ಈಶ ಫೌಂಡೇಶನ್‌ ವಿರುದ್ಧ ತನಿಖೆ-ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

Isha Foundation: ಈಶ ಫೌಂಡೇಶನ್‌ ವಿರುದ್ಧ ತನಿಖೆ-ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್‌ಬಾಸ್‌ನಿಂದ ಹೊರ ಹೋಗ್ತೇನೆ – ಜಗದೀಶ್

BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್‌ಬಾಸ್‌ನಿಂದ ಹೊರ ಹೋಗ್ತೇನೆ – ಜಗದೀಶ್

Raichur: ಬೆಟ್ಟದ ಪರಮೇಶ್ವರ ದೇವಸ್ಥಾನದ ಅರ್ಚಕಿ ನೇಣು ಬಿಗಿದು ಆತ್ಮಹತ್ಯೆ

Raichur: ಬೆಟ್ಟದ ಪರಮೇಶ್ವರ ದೇವಸ್ಥಾನದ ಅರ್ಚಕಿ ನೇಣು ಬಿಗಿದು ಆತ್ಮಹತ್ಯೆ

Iran-Israel Clash: ಯುದ್ದದ ಪರಿಣಾಮ- ಷೇರುಪೇಟೆ ಸೂಚ್ಯಂಕ ಭಾರೀ ಕುಸಿತ, ತೈಲ ಬೆಲೆ ಏರಿಕೆ

Iran-Israel Clash: ಯುದ್ದದ ಪರಿಣಾಮ- ಷೇರುಪೇಟೆ ಸೂಚ್ಯಂಕ ಭಾರೀ ಕುಸಿತ, ತೈಲ ಬೆಲೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟಿದ್ದ ಆರ್‌ಜೆಡಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟಿದ್ದ ಆರ್‌ಜೆಡಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

1

Mangaluru: ಬರೊಂದುಲ್ಲ.. ಮಾರ್ನೆಮಿದ ಪಿಲಿಕುಲು!

6-ಗಾನಗಾವಾತಹಿ

ಮಾಜಿ ಮಂತ್ರಿ ಅನ್ಸಾರಿ ಆಪ್ತರ ಮೇಲುಗೈ; ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಇಲಿಯಾಸ್ ಖಾದ್ರಿ

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

Kudroli: ಶಾರದೆ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಗೆ ವಿದ್ಯುಕ್ತ ಚಾಲನೆ

Kudroli: ಶಾರದೆ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಗೆ ವಿದ್ಯುಕ್ತ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.