Urwa: ಪೊಲೀಸ್ ಕಾನ್ಸ್ಟೆಬಲ್ಗೆ ಜೀವಬೆದರಿಕೆ, ಕೊಲೆಗೆ ಯತ್ನ: ಪ್ರಕರಣ ದಾಖಲು
Team Udayavani, Oct 2, 2024, 6:40 AM IST
ಮಂಗಳೂರು: ಉರ್ವ ಠಾಣೆಯ ಕಾನ್ಸ್ಟೆಬಲ್ ವೆಂಕಟೇಶ್ ಅವರನ್ನು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯನ್ನೊಡ್ಡಿ ಕೊಲೆ ಮಾಡಲು ಪ್ರಯತ್ನಿಸಲಾಗಿದ್ದು, ಈ ಬಗ್ಗೆ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.
ಸೆ. 29ರಂದು ವೆಂಕಟೇಶ್ ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್ ಕಾನ್ಸ್ಟೆಬಲ್ ಪುಷ್ಪರಾಜ್ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರನ್ನು ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್ ಅವರು ಬೀಟ್ ಕರ್ತವ್ಯ ಸಿಬಂದಿಯವಾದ ಬಾಳೆಗೌಡ ಮೊಕಾಶಿ ಮತ್ತು ಎಚ್.ಜಿ. ರೋಹಿದಾಸ್ ಅವರಿಗೆ ಈ ವಿಚಾರ ತಿಳಿಸಿ, ತಾನು ಬೈಕ್ನಲ್ಲಿ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. 10.40ರ ವೇಳೆಗೆ ಸ್ಥಳಕ್ಕೆ ತಲುಪಿದಾಗ ಪಿಜಿಯ ಎದುರುಗಡೆ ಏಳೆಂಟು ಮಂದಿ ಯುವಕರು ಬೈದಾಡುತ್ತಾ ಪಿಜಿಯ ಕಿಟಕಿಯ ಗಾಜಿಗೆ ಕಲ್ಲು ಹೊಡೆಯುತ್ತಿದ್ದರು. ಸಮವಸ್ತ್ರದಲ್ಲಿದ್ದ ವೆಂಕಟೇಶ್ ಅವರು ಅಲ್ಲಿಗೆ ತಲುಪುತಿದ್ದಂತೆ ಆ ಯುವಕರ ಗುಂಪು ಅವರನ್ನು ನೋಡಿ ಅವಾಚ್ಯ ಶಬ್ಧಗಳಿಂದ ಬೈದು ಜೀವಂತ ವಾಪಸ್ ಹೋಗಲು ಬಿಡುವುದಿಲ್ಲ ಎಂದು ತುಳುವಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ.
ವೆಂಕಟೇಶ್ ಅವರಿಗೆ ನೋಡಿ ಪರಿಚಯವಿದ್ದ ಯುವಕರ ಗುಂಪಿನಲ್ಲಿದ್ದ ಅವಿನಾಶ್ ಎಂಬಾತ ಕಲ್ಲೊಂದನ್ನು ಬಲವಾಗಿ ಬಿಸಾಡಿದ್ದು, ಒಮ್ಮೆಲೆ ತಲೆಯನ್ನು ಹಿಂದಕ್ಕೆ ಸರಿಸಿದ ಪರಿಣಾಮ ಕಲ್ಲು ವೆಂಕಟೇಶ್ ಅವರು ಬಲಗಣ್ಣಿನ ಹಣೆಯ ಬಳಿ ಬಿದ್ದು ರಕ್ತ ಗಾಯವಾಗಿದೆ. ಅಲ್ಲಿದ್ದ ಇನ್ನಿಬ್ಬರಾದ ಸುಮನ್ ಮತ್ತು ರೋಹನ್ ಅವರು ಕೂಡಾ ಕಲ್ಲು ಹೊಡೆದಿದ್ದು, ವೆಂಕಟೇಶ್ ಅವರು ಒಮ್ಮೆಲೆ ಬಗ್ಗಿ ನೆಲದಲ್ಲಿ ಕುಳಿತ ಪರಿಣಾಮ ಕಲ್ಲುಗಳು ಅವರ ತಲೆಯ ಮೇಲಿಂದ ಹಾದುಹೋಗಿದೆ. ಅಲ್ಲಿದ್ದ ಇತರರು ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ವೇಳೆ ಸ್ಥಳಕ್ಕೆ ಬಂದ ಬಾಳೆಗೌಡ ಮೊಕಾಶಿ ಮತ್ತು ಎಚ್.ಜಿ. ರೋಹಿದಾಸ್ ಹಾಗೂ ಸ್ಥಳೀಯರಾದ ಚಂದ್ರು ಅವರನ್ನು ಕಂಡು ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ.
ಘಟನೆಗೆ ಸಂಬಂಧಿಸಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ
Bus Ticket: ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ !
Legislative Council: ಇಂದು ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟ ?
Mangaluru: ಉಗ್ರರಂತೆ ಕಳ್ಳರಿಗೂ ತರಬೇತಿ ಕೇಂದ್ರ! ಚಡ್ಡಿ ಗ್ಯಾಂಗ್ಗೆ ದರೋಡೆಯೇ ದೇವರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಬಿಗ್ಬಾಸ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಕಾಮಿಡಿಯನ್ ಧನರಾಜ್; ಅಂಥದ್ದೇನಾಯ್ತು
ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ
Muddebihal: ಗಾಂಧಿ ಜಯಂತಿಯಂದು ಪೊಲೀಸರಿಂದ ಮಾದರಿ ಕಾರ್ಯ
Kollywood: ಮೂವರು ಗಂಡಂದಿರಿಗೆ ವಿಚ್ಚೇದನ ಕೊಟ್ಟು 4ನೇ ಮದುವೆಗೆ ಸಜ್ಜಾದ ಖ್ಯಾತ ನಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.