Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ
Team Udayavani, Oct 1, 2024, 11:46 PM IST
ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿಯ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಈ ಪ್ರದೇಶದ ಐಟಿ ಉದ್ದಿಮೆಯ ಪ್ರಮುಖರಿರುವ ಐಟಿ ಕಾರ್ಯಪಡೆಯೊಂದನ್ನು ರಚಿಸುವುದು, ಈ ಭಾಗದ ಆವಶ್ಯಕತೆಗಳ ಬಗ್ಗೆ ನಿರಂತರ ಸಮಾಲೋಚನೆ ನಡೆಸಿ, ಮುಂದಿನ ಹೆಜ್ಜೆಗಳನ್ನಿರಿಸುವುದು ಅತ್ಯವಶ್ಯಕ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ನಗರದ ಐಟಿ ಉದ್ದಿಮೆಗಳು, ಐಟಿ ವೃತ್ತಿಪರರೊಂದಿಗೆ ಮಂಗಳವಾರ ಆಯೋಜಿಸ ಲಾಗಿದ್ದ “ಮಂಗಳೂರ್ ಐಟಿ ವೇವ್-ಸರ್ಚಿಂಗ್ ಟುವರ್ಡ್ಸ್ ಸಿಲಿಕಾನ್ ಬೀಚ್ ಆಫ್ ಇಂಡಿಯಾ’ ಎಂಬ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ಐಟಿ ಹಬ್ಗ ಪ್ರಸ್ತಾವನೆ: ಮಂಗಳೂರಿನಲ್ಲಿ 50 ಎಕರೆಯಷ್ಟು ಜಾಗ ಸಿಕ್ಕಿದರೆ ಐಟಿ ಹಬ್ ಸ್ಥಾಪಿಸಿ ಆ ಮೂಲಕ ಐಟಿ ಕ್ಷೇತ್ರಕ್ಕೆ ಉತ್ತೇಜನ ಕೊಡಬಹುದು ಎಂಬ ಅಭಿಪ್ರಾಯ ಕೇಳಿಬಂದಿದ್ದು, ಅದಕ್ಕೆ ಉತ್ತರಿಸಿದ ಕ್ಯಾ| ಚೌಟ, ಈ ಕುರಿತು ಕಾರ್ಯಪಡೆ ಮೂಲಕ ಚರ್ಚಿಸಿ ಪ್ರಸ್ತಾವನೆ ಸಿದ್ಧಪಡಿಸೋಣ ಎಂದರು.
ನೊವಿಗೂ ಸೊಲ್ಯೂಷನ್ಸ್ನ ಪ್ರವೀಣ್ ಕಲಾºವಿ ಸಂವಾದ ನಿರ್ವಹಿಸಿದರು. ಶಶಿರ್ ಶೆಟ್ಟಿ ಸಂಯೋಜಿಸಿದರು. ರೋಬೋಸಾಫ್ಟ್ನ ರೋಹಿತ್ ಭಟ್, ಕೆನರಾ ಚೇಂಬರ್ಸ್ ಅಧ್ಯಕ್ಷ ಆನಂದ್ ಜಿ. ಪೈ ಮುಂತಾದವರು ಪ್ರತಿಕ್ರಿಯಿಸಿದರು.
ಶಿರಾಡಿಘಾಟಿಯಲ್ಲಿ ರೈಲ್ವೇ-ಹೆದ್ದಾರಿ ಜತೆ ಜತೆಗೆ: ಶಿರಾಡಿಘಾಟಿಯಲ್ಲಿ ಈಗಿರುವ ಹೆದ್ದಾರಿಗೆ ಸಮಾಂತರವಾಗಿ ವಯಡಕ್ಟ್(ದೀರ್ಘ ಸೇತುವೆ) ರೀತಿಯಲ್ಲಿ ಇನ್ನೆರಡು ಲೇನ್ ಹೆದ್ದಾರಿ ನಿರ್ಮಿಸುವ ಬಗ್ಗೆ ಯೋಜನೆಗಳು ಚರ್ಚೆ ಹಂತದಲ್ಲಿವೆ, ಇದರ ಜತೆಗೆ ರೈಲ್ವೇ ಮಾರ್ಗವನ್ನೂ ಸೇರಿಸುವಂತೆ ಸಲಹೆ ನೀಡಿದ್ದೇನೆ, ಆ ಮೂಲಕ ಘಾಟಿ ಸೆಕ್ಷನ್ನಲ್ಲಿ ಹೆಚ್ಚು ಸಮಯ ರೈಲ್ವೇಯಲ್ಲಿ ವ್ಯರ್ಥವಾಗುವುದಕ್ಕೆ ಕೂಡ ಪರಿಹಾರ ಸಿಗಬಹುದು ಎಂದು ಚೌಟ ಹೇಳಿದರು.
ಮಂಗಳೂರು-ಬೆಂಗಳೂರು ಮಧ್ಯೆ ಸಂಪರ್ಕ ಸುಧಾರಣೆವಾಗಿ ಮುಖ್ಯಮಂತ್ರಿಯವರಿಗೂ ವಿವರಿಸಿದ್ದೇನೆ, ಈ ಭಾಗದಲ್ಲಿ ಬಂದರು, ಕೈಗಾರಿಕೆಗಳ ಸುಧಾರಣೆ ಸಾಧ್ಯ, ಆ ಮೂಲಕ ರಾಜ್ಯದ ಜಿಡಿಪಿಗೆ ದೊಡ್ಡ ಕೊಡುಗೆ ಸಿಗಲಿದೆ ಎನ್ನುವುದನ್ನು ಅವರಿಗೂ ತಿಳಿಸಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Ladakh; ಪೂರ್ವ ಲಡಾಕ್ನಲ್ಲಿ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿಲ್ಲ: ಸೇನೆ
Illegal immigrants: ಅಕ್ರಮ ವಲಸಿಗರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ
Jairam Ramesh; ಇ.ಡಿ. ಬಳಸಿ ಕೇಂದ್ರದಿಂದ ದಾಳಿ: ಕಾಂಗ್ರೆಸ್ ಆಕ್ರೋಶ
Nigeria: ಸಿಂಹಕ್ಕೆ ಊಟ ಕೊಡಲು ಹೋಗಿ ಆಹಾರವಾದ!
Ram Rahim; ಡೇರಾ ಮುಖ್ಯಸ್ಥನಿಗೆ ಪರೋಲ್ ಪ್ರಶ್ನಿಸಿ ಚು. ಆಯೋಗಕ್ಕೆ “ಕೈ’ ಪತ್ರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.