MUDA Case: ಯಾವುದೇ ಕ್ಷಣ ಇ.ಡಿ. ದಾಳಿ?

ಪಿಎಂಎಲ್‌ಎಯಡಿ ಹೇಗೆ ತನಿಖೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

Team Udayavani, Oct 2, 2024, 7:05 AM IST

MUDA Case: ಯಾವುದೇ ಕ್ಷಣ ಇ.ಡಿ. ದಾಳಿ? ಪಿಎಂಎಲ್‌ಎಯಡಿ ಹೇಗೆ ತನಿಖೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಮೀನಿನ ಬದಲಿಗೆ ನಿವೇಶನ ಹಂಚಿಕೆ ಮಾಡಿರುವುದು ನನ್ನ ಪ್ರಕಾರ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್‌) ಆಗುವುದಿಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರವೇನು? ಇದಕ್ಕೆ ಹಣ ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯಿಸುವುದು ಹೇಗೆ? ಇದರಲ್ಲಿ ಇ.ಡಿ. ಹೇಗೆ ಬಂತು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಕರಣಕ್ಕೂ ಹಾಗೂ ನನ್ನದಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ.

ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ನಾನು ಡಿನೋಟಿಫೈ ಮಾಡಿಲ್ಲ, ಮನಿ ಲಾಂಡರಿಂಗ್‌ ಮಾಡಿಲ್ಲ. ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ, ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

ಪತ್ನಿ ಪತ್ರದ ಬಗ್ಗೆ ಮಾಹಿತಿ ಇಲ್ಲ:ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ನನ್ನೊಂದಿಗೆ ಚರ್ಚೆಯನ್ನೂ ಮಾಡಿಲ್ಲ. ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಜಮೀನಿನ ಮಾಲಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3.16 ಎಕರೆ ಜಮೀನು ನೀಡಿದ್ದರು. ಅದನ್ನು ಮುಡಾದವರು ಒತ್ತುವರಿ ಮಾಡಿಕೊಂಡು ನಿವೇಶನ ರಚಿಸಿ ಮಾರಾಟ ಮಾಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ನನ್ನ ಪತ್ನಿ ವಿಜಯನಗರದಲ್ಲೇ ನೀಡುವಂತೆ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಡಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಈ ಬಾರಿ ಬಚಾವಾಗುವ ಲಕ್ಷಣಗಳಿಲ್ಲ. ರಾಜೀನಾಮೆ ನೀಡದೆ ಗತ್ಯಂತರವಿಲ್ಲ. ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಇ.ಡಿ. ಇಸಿಐಆರ್‌ ದಾಖಲಿಸಿದೆ. ಹೀಗಾಗಿ ಅವರು ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡಬಹುದು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಯಾವುದೇ ಕ್ಷಣ ಇ.ಡಿ. ದಾಳಿ?
ಬೆಂಗಳೂರು: ಮುಡಾ ಹಗರಣದ ತನಿಖೆಗೆ ಜಾರಿ ನಿರ್ದೇಶ ನಾಲಯ (ಇ.ಡಿ.) ಕಾಲಿರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರದಲ್ಲೇ ಆಘಾತ ನೀಡುವ ಎಲ್ಲ ಲಕ್ಷಣಗಳಿವೆ. ಯಾವುದೇ ಕ್ಷಣದಲ್ಲಾದರೂ ಸಿದ್ದರಾಮಯ್ಯ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಕಲೆಹಾಕುವ ಸಾಧ್ಯತೆಗಳಿವೆ.

ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಈಗಾಗಲೇ ತನಿಖೆ ಪ್ರಾರಂಭಿಸಿರುವ ಲೋಕಾ ಯುಕ್ತ ಪೊಲೀಸರಿಂದ ಇ.ಡಿ. ಅಧಿಕಾರಿ ಗಳು ಪ್ರಕರಣದ ಪ್ರಾಥಮಿಕ ಮಾಹಿತಿ ಕೋರಿದ್ದಾರೆ ಎನ್ನಲಾಗಿದೆ. ಜತೆಗೆ ಮುಡಾ ಅಕ್ರಮ ನಡೆದಿದೆ ಎನ್ನಲಾದ ಅವಧಿಯಲ್ಲಿ ಅದರಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಿದೆ.

ಇ.ಡಿ. ಮುಂದಿನ ನಡೆಯೇನು?
ಯಾವುದೇ ಪ್ರಕರಣದಲ್ಲಾದರೂ ಇಸಿಐಆರ್‌ ದಾಖಲಾಗುತ್ತಿದ್ದಂತೆ ಮೊದಲಿಗೆ ದಾಖಲೆಗಳನ್ನು ಇ.ಡಿ. ಕಲೆಹಾಕುತ್ತದೆ. ಅನಂತರ ದಾಖಲೆ ಪರಿಶೀಲಿಸಿ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುತ್ತದೆ. ಆರೋಪಿ ಗಳ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದರೆ, ವಿಚಾರಣೆಗೆ ಆರೋಪಿಗಳು ಸಹಕರಿಸದಿದ್ದರೆ ಅಥವಾ ಸೂಕ್ತ ಮಾಹಿತಿ ನೀಡದಿದ್ದರೆ ತನಿಖಾಧಿಕಾರಿಗಳು ಆರೋಪಿಗಳನ್ನು ಬಂಧಿಸಬಹುದಾಗಿದೆ.

ಇ.ಡಿ. ಪ್ರವೇಶ ಏಕೆ?
-ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ಮೇರೆಗೆ ಇ.ಡಿ.ಯಿಂದ ಎಫ್ಐಆರ್‌ ದಾಖಲು
-ಪಿಎಂಎಲ್‌ಎ ಕಾಯ್ದೆಯಡಿ ಇಸಿಐಆರ್‌ ದಾಖಲು
-ಮುಡಾ ಹಗರಣದಲ್ಲಿ ಬೇನಾಮಿ ಅವ್ಯವ ಹಾರ, ಅಕ್ರಮ ಹಣ ವರ್ಗಾವಣೆ ಕುರಿತು ಮಾಹಿತಿ ಸಂಗ್ರಹ ಆರಂಭ
-ಶ್ರೀರಂಗಪಟ್ಟಣ ಕ್ಷೇತ್ರದ ಅಭಿ  ವೃದ್ಧಿಗೆ ಕಾನೂನುಬಾಹಿರ ವಾಗಿ ಮುಡಾ ಹಣ ಬಳಸಿದ ಆರೋಪದ ಹಿನ್ನೆಲೆ ಯಲ್ಲೂ ಇ.ಡಿ. ಪ್ರವೇಶ

ಮುಡಾದಿಂದ ಪಡೆಯಲಾಗಿದ್ದ ನಿವೇಶನಗಳನ್ನು ಏಕಾಏಕಿ ಹಿಂದಿರುಗಿಸಲು ಹೇಳಿಕೊಟ್ಟವರು ಯಾರು? ಇಷ್ಟೆಲ್ಲ ಕಸರತ್ತು ಏಕೆ ಬೇಕಿತ್ತು? ಕಳ್ಳತನ ಮಾಡಿ ತಪ್ಪಾಯಿತು ಎಂದರೆ ಬಿಡಲು ಸಾಧ್ಯವೇ? ನನ್ನನ್ನು ಹಿಟ್‌ ಆ್ಯಂಡ್‌ ರನ್‌ ಎನ್ನುವ ನೀವು ಯೂಟರ್ನ್ ಸಿದ್ದರಾಮಯ್ಯನಾ?
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಟಾಪ್ ನ್ಯೂಸ್

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

BJP FLAG

Maharashtra; ಚುನಾವಣ ಅಖಾಡ ಸಿದ್ದ: ಬಿಜೆಪಿ ಪಾಲಿಗೆ ಈ ಬಾರಿ ಭಾರೀ ಸವಾಲಿನ ಸ್ಥಿತಿ!

muniratna

Munirathna ಮನೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಖಾಸಗಿ ವಿಡಿಯೋ ಪತ್ತೆ?

3-hunsur

Hunsur: ವಿಚಿತ್ರ ಕರು ಜನನ

1-reee

India-US;ಆ್ಯಂಟೋನಿ ಬ್ಲಿಂಕೆನ್ ಜತೆ ಜೈಶಂಕರ್ ಮಹತ್ವದ ಮಾತುಕತೆ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

police

Renukaswamy ಪ್ರಕರಣ; ಜಾಮೀನು ಪಡೆದ ಮೂವರು ಜೈಲಿನಿಂದ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muniratna

Munirathna ಮನೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಖಾಸಗಿ ವಿಡಿಯೋ ಪತ್ತೆ?

police

Renukaswamy ಪ್ರಕರಣ; ಜಾಮೀನು ಪಡೆದ ಮೂವರು ಜೈಲಿನಿಂದ ಬಿಡುಗಡೆ

Police

Recruitment Test: ಪಿಎಸ್‌ಐ ಪರೀಕ್ಷೆ ಅಕ್ರಮ ತಡೆಗೆ ಇಎನ್‌ಟಿ ವೈದ್ಯರ ನಿಯೋಜನೆ!

Temprature

Heat Wave: ರಾಜ್ಯ ರಾಜಧಾನಿ ಸೇರಿ ಹಲವು ಜಿಲ್ಲೆಗಳಲ್ಲಿ ಅಧಿಕ ತಾಪಮಾನ!

HD-Kumaraswamy

D Notification: ಮುಡಾಕ್ಕಿಂತ ದೊಡ್ಡ ಅಕ್ರಮ ಎಸಗಿದ್ದಾರೆ ಸಿಎಂ: ಕೇಂದ್ರ ಸಚಿವ ಎಚ್‌ಡಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

Agriculture School: ಮೊದಲ ಕೃಷಿ ಶಾಲೆ ಜಾಗದಲ್ಲಿ ಪಾನೀಯ ನಿಗಮ

Agriculture School: ಮೊದಲ ಕೃಷಿ ಶಾಲೆ ಜಾಗದಲ್ಲಿ ಪಾನೀಯ ನಿಗಮ

4

Theft Case: ಕೆಲಸಕ್ಕಿದ್ದ ಕಚೇರಿಯಲ್ಲೇ 11 ಲಕ್ಷ ಕದ್ದ ಸೆಕ್ಯುರಿಟಿ

Theft: ಓಎಲ್‌ಎಕ್ಸ್ ನಲ್ಸಿ ಕದ್ದ ಬೈಕ್‌ ಮಾರಾಟ!

Theft: ಓಎಲ್‌ಎಕ್ಸ್ ನಲ್ಸಿ ಕದ್ದ ಬೈಕ್‌ ಮಾರಾಟ!

Theft: ಮಂತ್ರಾಲಯಕ್ಕೆ ಹೋಗಿದ್ದಾಗ 1 ಕೋಟಿ ಚಿನ್ನ ಕನ್ನ !

Theft: ಮಂತ್ರಾಲಯಕ್ಕೆ ಹೋಗಿದ್ದಾಗ 1 ಕೋಟಿ ಚಿನ್ನ ಕನ್ನ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.