Muscut ವಿಶ್ವಬ್ರಾಹ್ಮಣ ಒಕ್ಕೂಟ; ಸ್ವಯಂಪ್ರೇರಿತ ರಕ್ತದಾನ
Team Udayavani, Oct 2, 2024, 10:09 AM IST
ಶಿರ್ವ: ಮಸ್ಕತ್ನ ವಿಶ್ವಬ್ರಾಹ್ಮಣ ಒಕ್ಕೂಟದ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಒಕ್ಕೂಟದ ಅಧ್ಯಕ್ಷ ರವೀಂದ್ರ ಆಚಾರ್ಯ ಕಳತ್ತೂರು ಅವರ ಅಧ್ಯಕ್ಷತೆಯಲ್ಲಿ ಮಸ್ಕತ್ನ ಸೆಂಟ್ರಲ್ ಬ್ಲಿಡ್ ಬ್ಯಾಂಕ್ನ ಆವರಣದಲ್ಲಿ ನಡೆಯಿತು.
ಡಾ| ರಾಜೇಶ್ ಆಚಾರ್ಯ ಪೆರ್ಡೂರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನವು ಮಹಾದಾನವಾಗಿದ್ದು, ಅಶಕ್ತ ರೋಗಿಗಳ ಜೀವವನ್ನು ಉಳಿಸುವಲ್ಲಿ ಸಹಕಾರಿಯಾಗಿದೆ. ಪರವೂರಿನಲ್ಲಿದ್ದರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಒಕ್ಕೂಟದ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ವಿಶ್ವಬ್ರಾಹ್ಮಣ ಒಕ್ಕೂಟದ ಸ್ಥಾಪಕ ಸದಸ್ಯ ಸೀತಾರಾಮ ಆಚಾರ್ಯ ರಕ್ತದಾನದ ಮಹತ್ವ ತಿಳಿಸಿದರು.
ಓಮಾನ್ ತುಳುವೆರ್ ತಂಡದ ರಮಾನಂದ ಶೆಟ್ಟಿ,ಇಸ್ಸಾಕೋ ಗ್ರೂಪ್ನ ಲೀಮಾ, ಓಮಾನ್ ಬಿಲ್ಲವಾಸ್ನ ಅಧ್ಯಕ್ಷ ಸುಜಿತ್ ಅಂಚನ್,ಮಸ್ಕತ್ ಮೊಗವೀರ ಕೂಟದ ಅಧ್ಯಕ್ಷ ಪದ್ಮಾಕರ ಮೆಂಡನ್, ಕನ್ನಡ ಸಂಘದ ಹಿತೇಶ್ ಮಂಗಳೂರು,ಬಿರುವ ಜವನೆರ್ ಗ್ರೂಪ್ನ ಗುರುಪ್ರಸಾದ್ ಪಾಲ್ಗೊಂಡು ಶುಭ ಹಾರೈಸಿದರು.
ವಿಶ್ವಬ್ರಾಹ್ಮಣ ಒಕ್ಕೂಟದ ಸದಸ್ಯರು, ಶಿಬಿರದ ಸಂಘಟನಾ ಸಮಿತಿಯ ಸದಸ್ಯರು,ಸ್ವಯಂಸೇವಕರು, ಮಹಿಳಾ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ 70ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.ರಕ್ತದಾನಿಗಳಿಗೆ ಒಕ್ಕೂಟದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva: ಅಂದು ಕಸತ್ಯಾಜ್ಯದ ಕೊಂಪೆ; ಇಂದು ಸೆಲ್ಪಿ ಕಾರ್ನರ್..!
Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್
Udupi: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ
Udayavani: ಈ ಎಲ್ಲ ಸಾಧಕಿಯರ ಯಶಸ್ಸಿನ ವರ್ಣ ನವರೂಪ
Hebri: ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸರಕಾರಿ ಬಸ್ ಸಿಬಂದಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shirva: ಅಂದು ಕಸತ್ಯಾಜ್ಯದ ಕೊಂಪೆ; ಇಂದು ಸೆಲ್ಪಿ ಕಾರ್ನರ್..!
ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್
Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!
Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್
ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.