Theft: ಓಎಲ್ಎಕ್ಸ್ ನಲ್ಸಿ ಕದ್ದ ಬೈಕ್ ಮಾರಾಟ!
Team Udayavani, Oct 2, 2024, 11:35 AM IST
ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳವು, ಮಾಡಿ, ಓಎಲ್ಎಕ್ಸ್ನಲ್ಲಿ ಹಾಕಿ ಮಾರುತ್ತಿದ್ದ ಇಬ್ಬ ರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಶಿವಾಜಿನಗರ ನಿವಾಸಿ ಶಹಬಾಜ್ (26) ಮತ್ತು ದೊಡ್ಡನಾಗಮಂಗಲ ನಿವಾಸಿ ಓಂ(19) ಬಂಧಿತರು.
12.75 ಲಕ್ಷ ರೂ. ಮೌಲ್ಯದ 13 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಎಇಸಿಎಸ್ ಲೇಔಟ್ನ ಸಿಂಗಸಂದ್ರ ನಿವಾಸಿಯೊºಬರು ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್ ಕಳವು ಮಾಡಿದ್ದರು. ಆರೋಪಿಗಳ ಪೈಕಿ ಶಹಬಾಜ್, ಮನೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು, ವೈಯರ್ ಡೈರೆಕ್ಟ್ ಮಾಡಿ ಕಳವು ಮಾಡುತ್ತಿದ್ದ.
ಇನ್ನು ಓಂ ಯಾವ ಸ್ಥಳಗಳಲ್ಲಿ ಹೆಚ್ಚು ಬೈಕ್ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಶಹಬಾಜ್ಗೆ ನೀಡುತ್ತಿದ್ದ. ಹೀಗಾಗಿ ಇಬ್ಬರು ಸೇರಿ ಬೈಕ್ಗಳ ಕಳವು ಮಾಡುತ್ತಿದ್ದರು. ಕಳವು ಬೈಕ್ಗಳ ಪೋಟೋಗಳನ್ನು ಓಂ ತನ್ನ ಓಎಲ್ಎಕ್ಸ್ ಖಾತೆಯಲ್ಲಿ ಹಾಕಿ, ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಕಡಿಮೆ ಮೊತ್ತಕ್ಕೆ ಮಾರುತ್ತಿದ್ದರು. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ, ಪರಪ್ಪನ ಅಗ್ರಹಾರ, ಆರ್ .ಟಿ.ನಗರ, ಕೆ.ಆರ್.ಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ದಾಖಲಾಗಿದ್ದ 9 ಪ್ರಕರಣಗಳು ಪತ್ತೆಯಾಗಿವೆ. ಠಾಣಾಧಿಕಾರಿ ಬಿ.ಎಸ್.ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shirva: ಅಂದು ಕಸತ್ಯಾಜ್ಯದ ಕೊಂಪೆ; ಇಂದು ಸೆಲ್ಪಿ ಕಾರ್ನರ್..!
ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್
Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!
Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್
ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.