World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

ಭೀಕರ 3ನೇ ವಿಶ್ವ ಯುದ್ಧದ ಮುನ್ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.

Team Udayavani, Oct 2, 2024, 11:48 AM IST

World War 3?: ಭೂಮಿ ಮೇಲೆ ನಾವಿರಬೇಕು ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

ಟೆಲ್‌ ಅವಿಲ್(‌Middle East war): ಲೆಬನಾನ್‌ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸರಲ್ಲಾಹ್‌ ಹ*ತ್ಯೆ ನಡೆಸಿದ ಬೆನ್ನಲ್ಲೇ ಇಸ್ರೇಲ್‌ ಸೇನೆ ಇರಾನ್‌ ಮೇಲೆ ರಾಕೆಟ್‌ ಸುರಿಮಳೆಗೈದಿದೆ.

ಒಂದೋ ನಾವೀರಬೇಕು, ಇಲ್ಲವೇ ನೀವಿರಬೇಕು: ಇರಾನ್‌ ಗೆ ಇಸ್ರೇಲ್‌ ಸಂದೇಶ!

ಇರಾನ್‌ ಮೇಲಿನ ಪ್ರತೀಕಾರದ ದಾಳಿ ಯಾವ ಸಮಯದಲ್ಲಿ ಮಾಡಬೇಕು ಎಂಬುದು ನಮ್ಮ ಆಯ್ಕೆಯಾಗಿದೆ ಎಂದು ಇಸ್ರೇಲ್‌ ರಕ್ಷಣಾ ಪಡೆಯ ವಕ್ತಾರ ರಿಯರ್‌ ಅಡ್ಮಿರಲ್‌ ಡೇನಿಯಲ್‌ ಹಗಾರಿ ಎಚ್ಚರಿಕೆ ನೀಡಿದ್ದರೆ, ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌, ಇರಾನ್‌ ಅನ್ನು ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಯುದ್ಧದಲ್ಲಿ ಒಂದೋ ಇಸ್ರೇಲ್‌ ಅಥವಾ ಇರಾನ್‌ ಅಸ್ತಿತ್ವದಲ್ಲಿ ಇರಬೇಕು ಎಂದು ಹೇಳುವ ಮೂಲಕ ಭೀಕರ 3ನೇ ವಿಶ್ವ ಯುದ್ಧದ ಮುನ್ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.

ಇಸ್ರೇಲ್‌ ಸೇನೆ ಯುದ್ಧ ಆರಂಭಿಸಿದ್ದು, ಇರಾನ್‌ ಗೆ ಇನ್ನು ಯಾವುದೇ ಆಯ್ಕೆಗಳಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದರು. ಇಸ್ರೇಲ್‌ ಈಗಾಗಲೇ ಲೆಬನಾನ್‌, ಇರಾನ್‌ ನ ಪ್ರತಿ ನಗರವನ್ನು ಗುರಿಯಾಗಿರಿಸಿಕೊಂಡು ಮಿಸೈಲ್‌, ರಾಕೆಟ್‌ ದಾಳಿ ನಡೆಸುತ್ತಿದೆ.

ಇಸ್ರೇಲ್‌ ಮೇಲೆ ಇರಾನ್‌ 180ಕ್ಕೂ ಅಧಿಕ ಬ್ಯಾಲಿಸ್ಟಿಕ್‌ ಮಿಸೈಲ್‌ ದಾಳಿ:

ಇರಾನ್‌ ನಮ್ಮ ಮೇಲೆ 180ಕ್ಕೂ ಅಧಿಕ ಬ್ಯಾಲಿಸ್ಟಿಕ್‌ ಮಿಸೈಲ್‌ ದಾಳಿ ನಡೆಸಿದೆ ಎಂದು ಇಸ್ರೇಲ್‌ ರಕ್ಷಣಾ ಪಡೆಯ ವಕ್ತಾರ ಡೇನಿಯಲ್‌ ಹಗಾರಿ ತಿಳಿಸಿದ್ದಾರೆ. ಇರಾನ್‌ ದಾಳಿಯಿಂದ ಇಸ್ರೇಲ್‌ ಗೆ ಯಾವುದೇ ಗಂಭೀರವಾದ ಪರಿಣಾಮ ಬೀರಿಲ್ಲ. ಬಹುತೇಕ ಮಿಸೈಲ್‌ ಅನ್ನು ಇಸ್ರೇಲ್‌ ಹೊಡೆದುರುಳಿಸಿದೆ. ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಆದರೆ ನಾವು ಇರಾನ್‌ ಮೇಲೆ ಯಾವ ಸಂದರ್ಭದಲ್ಲೂ ದಾಳಿ ನಡೆಸಬಹುದಾಗಿದೆ ಎಂದು ಡೇನಿಯಲ್‌ ಸಂದೇಶ ರವಾನಿಸಿದ್ದಾರೆ.

ಇಸ್ರೇಲ್‌ ನಿಂದ ಇರಾನ್‌ ಮೇಲೆ ದಾಳಿ:

ಇಸ್ರೇಲ್‌ ಮತ್ತು ಇರಾನ್‌ ಕೂಡಲೇ ಕದನ ವಿರಾಮ ಘೋಷಿಸಬೇಕೆಂದು ವಿಶ್ವಸಂಸ್ಥೆ ಆಗ್ರಹಿಸಿದೆ. ಆದರೆ ವಿಶ್ವಸಂಸ್ಥೆಯ ಮನವಿಯನ್ನು ಲೆಕ್ಕಿಸದ ಇಸ್ರೇಲ್‌ ಪಡೆ ಇರಾನ್‌ ಮೇಲೆ ರಾಕೆಟ್‌ ದಾಳಿ ಮುಂದುವರಿಸಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

1-pawan-kalyana

Andhra DCM 11 ದಿನಗಳ ವ್ರತ; ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪವನ್ ಕಲ್ಯಾಣ್

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

India-US;ಆ್ಯಂಟೋನಿ ಬ್ಲಿಂಕೆನ್ ಜತೆ ಜೈಶಂಕರ್ ಮಹತ್ವದ ಮಾತುಕತೆ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

ಮಾಜಿ ಅಧ್ಯಕ್ಷ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್‌ ಗೆ 100ನೇ ವರ್ಷದ ಸಂಭ್ರಮ

joe-bidden

Israel vs Iran; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್‌ಗೆ ಅಮೆರಿಕ ಎಚ್ಚರಿಕೆ

White House: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿಗೆ ಇರಾನ್‌ ಸಿದ್ಧತೆ!

Attack on Israel: ಹೆಜ್ಬುಲ್ಲಾ ಬಾಸ್‌ ಹತ್ಯೆ ಬೆನ್ನಲ್ಲೇ ಇರಾನ್‌ 180 ಕ್ಷಿಪಣಿಗಳ ಮಳೆ

man went to feed the lion at Nigeria

Nigeria: ಸಿಂಹಕ್ಕೆ ಊಟ ಕೊಡಲು ಹೋಗಿ ಆಹಾರವಾದ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

10-shirva

Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್‌

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.