Kollywood: ಮೂವರು ಗಂಡಂದಿರಿಗೆ ವಿಚ್ಚೇದನ ಕೊಟ್ಟು 4ನೇ ಮದುವೆಗೆ ಸಜ್ಜಾದ ಖ್ಯಾತ ನಟಿ
ಬ್ರೇಕ್ ಅಪ್ ಮಾಡಿಕೊಂಡ ಹುಡುಗನ ಜತೆಯೇ ಮದುವೆ
Team Udayavani, Oct 2, 2024, 1:09 PM IST
ಚೆನ್ನೈ: ಇತ್ತೀಚೆಗಿನ ವರ್ಷಗಳಲ್ಲಿ ಸೆಲೆಬ್ರಿಟಿಗಳ ವಿವಾಹ ಬಂಧ ಅಷ್ಟು ಗಟ್ಟಿಯಾಗಿ ಉಳಿಯುತ್ತಿಲ್ಲ. ಪರಸ್ಪರ ಒಪ್ಪಿಗೆ ಮೇರೆಗೆ ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನದಿಂದ ದೂರವಾಗುತ್ತಿದ್ದಾರೆ.
ಸೆಲೆಬ್ರಿಟಿಗಳು ಪತಿ – ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಕೆಲ ಸಮಯದ ಬಳಿಕ ಮತ್ತೊಂದು ಸಂಬಂಧಕ್ಕೆ ಹೊಂದಿಕೊಂಡು ಪ್ರೀತಿ ಬಂಧನಕ್ಕೆ ಒಳಗಾಗಿ ವಿವಾಹವಾಗುತ್ತಾರೆ. ಇದೇ ರೀತಿ ಬಹುಭಾಷಾ ನಟಿಯೊಬ್ಬರು ನಾಲ್ಕನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಹಿರಿಯ ನಟ ವಿಜಯ್ ಕುಮಾರ್ (Veteran Actor Vijayakumar) ಅವರ ಪುತ್ರಿ ವನಿತಾ (Vanitha) 4ನೇ ಮದುವೆಗೆ ಮುಂದಾಗಿದ್ದಾರೆ.
ಈ ಕುರಿತು ತನ್ನ ಭಾವಿ ಪತಿಯ ಜತೆ ಫೋಟೋವನ್ನು ಹಂಚಿಕೊಂಡು ವನಿತಾ ಮಾಹಿತಿ ನೀಡಿದ್ದಾರೆ. ನಟಿ ವನಿತಾ ಡ್ಯಾನ್ಸ್ ಕೊರಿಯೋಗ್ರಫರ್ ರಾಬರ್ಟ್ ರಾಜ್ (Robert Raj) ಅವರೊಂದಿಗೆ ಮದುವೆ ಆಗಲಿದ್ದಾರೆ. ಸೇವ್ ದಿ ಡೇಟ್ ಎಂದು ಮದುವೆ ದಿನಾಂಕವನ್ನು ಫೋಟೋವೊಂದಿಗೆ ಹಂಚಿಕೊಂಡಿದ್ದಾರೆ.
ಮೂರು ಮದುವೆ, ಮೂವರಿಗೂ ವಿಚ್ಛೇದನ ನೀಡಿರುವ ವನಿತಾ: ವನಿತಾ ಅವರಿಗಿದು 4ನೇ ಮದುವೆ. 2002ರಲ್ಲಿ ಮೊದಲ ಬಾರಿಗೆ ವನಿತಾ ಆಕಾಶ್ ಎಂಬುವವರ ಕೈ ಹಿಡಿದಿದ್ದರು. 7 ವರ್ಷಗಳ ಬಳಿಕ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು.
ಇದಾದ ಬಳಿಕ ಉದ್ಯಮಿ ಆನಂದ್ ಜಯರಾಜನ್ ಜೊತೆ ಹಸೆಮಣೆ ಏರಿದ್ದರು. ಆದರೆ ಈ ಸಂಬಂಧ ಕೂಡ 5 ವರ್ಷದಲ್ಲೇ ಮುರಿದು ಬಿತ್ತು. ಇವರಿಗೆ ಒಂದು ಹೆಣ್ಣು ಮಗುವಿತ್ತು.
ಎರಡು ಮದುವೆ ಮುರಿದು ಬಿದ್ದ ಬಳಿಕ ಕೆಲ ಸಮಯ ವಿನಿತಾ ಒಂಟಿಯಾಗಿಯೇ ಇದ್ದರು. 2020ರಲ್ಲಿ ವನಿತಾ ಪೀಟರ್ ಪೌಲ್ ಎನ್ನುವವರ ಜತೆ ವಿವಾಹವಾಗಿದ್ದರು. ಆದರೆ ಅದೇ ವರ್ಷ ಆ ಸಂಬಂಧ ಕೂಡ ಮುರಿದು ಬಿದ್ದಿತ್ತು. ಪೀಟರ್ ಗೆ ಆದಾಗಲೇ ಮದುವೆಯಾಗಿ ಎರಡು ಮಕ್ಕಳಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆ ಆಗಿದ್ದಾರೆ ಎನ್ನುವ ಆರೋಪ ಪೀಟರ್ ಮೇಲೆ ಕೇಳಿ ಬಂದಿತ್ತು.
ಇದೀಗ ವನಿತಾ ರಾಬರ್ಟ್ ಜತೆ ವಿವಾಹವಾಗಲು ಸಿದ್ದರಾಗಿದ್ದಾರೆ. 2013ರಲ್ಲೇ ರಾಬರ್ಟ್ ಹಾಗೂ ವನಿತಾ ಪರಸ್ಪರ ಸ್ನೇಹಿತರಾಗಿ ಪ್ರೀತಿಸಲು ಶುರು ಮಾಡಿದ್ದರು. ಆದರೆ 2017ರಲ್ಲಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ಇದೀಗ ವನಿತಾ ರಾಬರ್ಟ್ ಅವರೊಂದಿಗೆಯೇ ವಿವಾಹವಾಗುತ್ತಿದ್ದಾರೆ. ಇದೇ ಅಕ್ಟೋಬರ್ 5 ಇಬ್ಬರ ಮದುವೆ ನೆರವೇರಲಿದೆ.
ʼಚಂದ್ರಲೇಖಾʼ, ‘ಮಾಣಿಕ್ಕಂ’, ‘ಮಳ್ಳಿ ಪೆಳ್ಳಿ’, ‘ಅನೀತಿ’, ‘ಹಾರ’ಎಂಜಿಆರ್ ಶಿವಾಜಿ ರಜಿನಿ ಕಮಲ್ ಸೇರಿದಂತೆ ಹಲವು ಸಿನಿಮಾದಲ್ಲಿ ವನಿತಾ ನಟಿಸಿದ್ದಾರೆ.
ತಮಿಳು ಬಿಗ್ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ವನಿತಾ ದೊಡ್ಮನೆ ಒಳಗೆ ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thalapathy 69: ದಳಪತಿ ವಿಜಯ್ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!
Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್ ತಂದೆ ಪಾತ್ರದಲ್ಲಿ ಮೋಹನ್ ಲಾಲ್?
GOAT OTT Release: ದಳಪತಿ ವಿಜಯ್ ʼಗೋಟ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Rajinikanth: ಸೂಪರ್ ಸ್ಟಾರ್ ರಜಿನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಸಿಂಧನೂರಲ್ಲಿ ಅಪಹರಿಸಲ್ಪಟ್ಟ ಮಹಾರಾಷ್ಟ್ರದ ನಾಲ್ವರು ವಿದ್ಯಾರ್ಥಿಗಳ ರಕ್ಷ ಣೆ; ಇಬ್ಬರ ಬಂಧನ
ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ
ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!
Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್ ಬರಹಗಾರ ಎಂಟ್ರಿ
Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.