Politics: ಸೈಟ್ ವಾಪಸ್ ನೀಡಿದ್ದು,ಪಾರ್ವತಿಯವರ ತ್ಯಾಗ ಮನೋಭಾವನೆ ತೋರಿಸುತ್ತೆ: ಡಿ. ಸುಧಾಕರ್
Team Udayavani, Oct 2, 2024, 1:00 PM IST
ಚಿತ್ರದುರ್ಗ: ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಅವರ ಅಧಿಕಾರಾವಧಿಯಲ್ಲಿ ಆಗಿದ್ದನ್ನು ಬಿಜೆಪಿಯವರು ಮರೆತಿದ್ದಾರೆ ಎಂದು ಸಚಿವ ಡಿ. ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮುಂದುವರೆದು ಮಾತನಾಡಿ, ಅವರ ಅಧಿಕಾರದಲ್ಲಿ ಎಷ್ಟೋ ಕಡೆ ಲಂಚಾವತಾರ ತಾಂಡವ ಆಡುತ್ತಿತ್ತು. ಪತಿಗೆ ಚ್ಯುತಿ ಬರಬಾರದು ಅಂತಾ ಪಾರ್ವತಮ್ಮ ಸೈಟ್ ಹಿಂದಿರುಗಿಸಿದ್ದಾರೆ. ಅವರ ಭಾವನೆಗೆ ಬೆಲೆ ಕೊಡುವ ಕೆಲಸ ಕಾಂಗ್ರೆಸ್ ನಾಯಕರು ಮಾಡ್ತೀವಿ ಎಂದರು.
ತಪ್ಪು ಮಾಡದ ಸಿದ್ದರಾಮಯ್ಯ ಸೈಟ್ ಯಾಕೆ ವಾಪಸ್ ಕೊಟ್ಟರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪಾದನೆ ಬಂದ ಹಿನ್ನೆಲೆ ಸೈಟ್ ಹಿಂದಿರುಗಿಸಿದ್ದಾರೆ. ಯಾರದ್ದೋ ಮಾತು ಕೇಳಿ ಸೀತಾ ಮಾತೆಯನ್ನು ವನವಾಸಕ್ಕೆ ಕಳಿಸಿದ್ದರು. ಆದರೆ ಸತ್ಯವನ್ನು ಯಾವತ್ತೂ ಮರೆಮಾಚಲು ಆಗಲ್ಲ ಎಂದು ಹೇಳಿದರು.
ಈಗ ಆಸ್ತಿ ಯಾವುದೂ ಬೇಡ ಎಂದು ಪಾರ್ವತಿಯವರೇ ಹೇಳಿದ್ದಾರೆ. ಮೂಡಾ ಕೇಸಲ್ಲಿ ಸಿದ್ದರಾಮಯ್ಯಮವರಿಗೆ ಏನೇನೂ ಆಗಲ್ಲ, ಸತ್ಯ ಯಾವತ್ತೂ ಬಾಳುತ್ತೆ, ಸತ್ಯ ಅಸತ್ಯವನ್ನು ಹೊಡೆದು ಹಾಕುತ್ತೆ. ಬಿಜೆಪಿಯವರು ದಿನಾಲೂ ಅಸತ್ಯ ಮಾತನಾಡ್ತಾರೆ, ಸತ್ಯ ಅದನ್ನೆಲ್ಲ ಹೊಡೆದು ಹಾಕುತ್ತೆ ಎಂದರು.
ಬಿಜೆಪಿಯವರು ಇಷ್ಟೆಲ್ಲ ಆಸ್ತಿ ಹೊಡೆದ್ರಲ್ಲ, ಒಂದು ದಿನ ವಾಪಸ್ ಕೊಟ್ರಾ..? ಜೈಲಿಗೆಲ್ಲಾ ಹೋದ್ರಲ್ಲ ಅಂತಾ ಮಾಜಿ ಸಿಎಂ ಯಡಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಡಿ. ಸುಧಾಕರ್ ಸೈಟ್ ವಾಪಸ್ ನೀಡಿದ್ದು, ಪಾರ್ವತಿಯವರ ತ್ಯಾಗ ಮನೋಭಾವನೆ ತೋರಿಸುತ್ತೆ ಎಂದು ಹೇಳಿದರು.
ದಸರಾ ಒಳಗೆ ಸಿಎಂ ರಾಜಿನಾಮೆ ನೀಡಿ, ಅರೆಸ್ಟ್ ಆಗ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅದು ಬಿಜೆಪಿ ನಾಯಕರ ತಿರುಕನ ಕನಸು ಎಂದರು.
ಮುಡಾದಲ್ಲಿ 4 ಸಾವಿರ ಸೈಟ್ ಅಕ್ರಮ ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಪೂರ್ಣ ತನಿಖೆಯಾಗಲಿ, ಸತ್ಯ ಹೊರ ಬರಲಿ ಎಂದು ಪಾರ್ವತಮ್ಮ ಹೇಳಿದ್ದಾರೆ. ಎಲ್ಲವೂ ಹೊರಬರಲಿ ಎಂದು ರೈಟಿಂಗ್ ನಲ್ಲಿ ಕೊಟ್ಟಿದ್ದಾರೆ ಎಂದು ಹೇಳಿದರು.
ದಲಿತ ಶಾಸಕರು ರಾತ್ರಿ ವೇಳೆ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ. ಸುಧಾಕರ್, ಯಾವುದೂ ಏನೂ ಆಗಲ್ಲ. ಕಾಂಗ್ರೆಸ್ ನಲ್ಲಿ ದಲಿತ, ಮೈನಾರಿಟಿ, ಜನರಲ್ ಎಲ್ಲಾ ಒಂದೇ. ದಲಿತ ಸಿಎಂ ವಿಚಾರ ಸತ್ಯಕ್ಕೆ ದೂರವಾಗಿದ್ದು, ಹೈ ಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!
Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ
Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ
Police; ಹೃದಯಾಘಾತದಿಂದ ಕರ್ತವ್ಯನಿರತ 28 ವರ್ಷದ ಪೊಲೀಸ್ ಪೇದೆ ಸಾ*ವು
ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ
ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!
Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್ ಬರಹಗಾರ ಎಂಟ್ರಿ
Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ
Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.