ಪುತ್ತೂರು: 33ರಲ್ಲಿ 29 ಗ್ರಾಮಾಡಳಿತ ಕಚೇರಿಗೆ ಸ್ವಂತ ಕಟ್ಟಡ ಇಲ್ಲ


Team Udayavani, Oct 2, 2024, 10:08 AM IST

ಪುತ್ತೂರು: 33ರಲ್ಲಿ 29 ಗ್ರಾಮಾಡಳಿತ ಕಚೇರಿಗೆ ಸ್ವಂತ ಕಟ್ಟಡ ಇಲ್ಲ

ಪುತ್ತೂರು: ಸಾರ್ವಜನಿಕ ಉದ್ದೇಶ ಗಳಿಗೆ, ವಿವಿಧ ಇಲಾಖೆಗಳ ಕಟ್ಟಡಗಳಿಗೆ ನಿವೇಶನ ಹಂಚುವ ಗ್ರಾಮಾಡಳಿತಧಿಕಾರಿಗಳಿಗೆ ತಾವು ಕರ್ತವ್ಯ ನಿರ್ವಹಿಸುವ ಗ್ರಾಮದಲ್ಲಿ ಕಚೇರಿಗೆ ಸ್ವಂತ ಜಾಗವೂ ಇಲ್ಲ, ಕಟ್ಟಡವೂ ಇಲ್ಲ, ಸಿಬಂದಿಯೂ ಇಲ್ಲದ ಸ್ಥಿತಿ ಈಗ ನಿರ್ಮಾಣವಾಗಿದೆ.

ಇದು ಪುತ್ತೂರು ತಾಲೂಕಿನ ಶೇ.95 ರಷ್ಟು ಗ್ರಾಮಾಡಳಿತಧಿಕಾರಿಗಳ ಸ್ಥಿತಿ. ಗ್ರಾಮದ ಕಂದಾಯ ವಿಭಾಗದ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಗ್ರಾಮಾಡಳಿತ ಅಧಿಕಾರಿ ಗಳು ಹತ್ತಾರು ಮೂಲ ಸೌಕರ್ಯಗಳ ಕೊರತೆಯ ಜತೆಗೆ ದಿನಂಪ್ರತಿ ಕರ್ತವ್ಯ ನಿರ್ವ
ಹಣೆಗೂ ಪರದಾಡಬೇಕಾದ ಸ್ಥಿತಿ ಇದೆ ಅನ್ನು ವುದನ್ನು ತೆರೆದಿಡುತ್ತಿದೆ ರಿಯಾಲಿಟಿ ಚೆಕ್‌.

14 ಗ್ರಾಮಗಳಲ್ಲಿ ಪೂರ್ಣಕಾಲಿಕ ವಿಎ ಇಲ್ಲ

ತಾಲೂಕಿನ 14 ಗ್ರಾಮಗಳಲ್ಲಿ ಪೂರ್ಣಕಾಲಿಕ ಗ್ರಾಮಾಡಳಿತ ಅಧಿಕಾರಿಗಳೇ ಇಲ್ಲ. ಪುತ್ತೂರು ಹೋಬಳಿಯ 22 ರಲ್ಲಿ 10,
ಉಪ್ಪಿನಂಗಡಿ ಹೋಬಳಿಯ 11 ರಲ್ಲಿ 5 ಮಾತ್ರ ಭರ್ತಿ ಆಗಿದೆ. ಮಂಜೂರಾತಿ ಹುದ್ದೆಗಳ ಪೈಕಿ ಗ್ರಾಮಾಡಳಿತ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ಭೂಮಿ ಶಾಖೆ-2, ತಾಲೂಕು ಕಚೇರಿ-2, ಸಹಾಯಕ ಆಯುಕ್ತರ ಕಚೇರಿ-1, ಜಿಲ್ಲಾಧಿಕಾರಿ ಕಚೇರಿ-1, ಕಡಬ, ಬೆಳ್ತಂಗಡಿ ತಾಲೂಕು ಕಚೇರಿಗಳಿಗೆ ತಲಾ 1 ರಂತೆ ನಿಯೋಜಿಸಲಾಗಿದೆ. ಒಟ್ಟು 33 ರಲ್ಲಿ 14 ಹುದ್ದೆ ಖಾಲಿ ಇದ್ದು ಲಭ್ಯ ಇರುವ ಗ್ರಾಮಾಡಳಿತಧಿಕಾರಿಗಳಿಗೆ ಹೆಚ್ಚುವರಿಯಾಗಿ ಇತರ ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ.

3 ಸ್ವಂತ ಉಳಿದವು ತಾತ್ಕಾಲಿಕ
ತಾಲೂಕಿನಲ್ಲಿ ಒಟ್ಟು 33 ಗ್ರಾಮ ಆಡಳಿತ ಅಧಿಕಾರಿಗಳ ವ್ಯಾಪ್ತಿ ಇದ್ದು ಇದರಲ್ಲಿ 29 ಗ್ರಾಮಗಳಲ್ಲಿ ಗ್ರಾ.ಪಂ. ಕಟ್ಟಡ, 1 ಕಡೆಗಳಲ್ಲಿ ಖಾಸಗಿ ಕಟ್ಟಡ, 3 ಕಡೆಗಳಲ್ಲಿ ಸ್ವಂತ ಕಟ್ಟಡ ಇದೆ. ಅಂದರೆ 33 ರಲ್ಲಿ 3 ಗ್ರಾಮಗಳಲ್ಲಿ ಮಾತ್ರ ಗ್ರಾಮಾಡಳಿತ ಅಧಿಕಾರಿಗಳಿಗೆ ಸ್ವಂತ ಕಚೇರಿ ಇದ್ದು ಉಳಿದೆಡೆ ಬೇರೆ ಇಲಾಖೆಗಳ ಅಥವಾ ಖಾಸಗಿ ಕಟ್ಟಡವನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.

ಶೌಚಾಲಯವೂ ಇಲ್ಲ ಸೋರುವ ಕಟ್ಟಡ..!
33 ಗ್ರಾಮಾಡಳಿತದ ಪೈಕಿ 8 ಗ್ರಾಮಾಡಳಿತ ಕಚೇರಿಗಳ ಸ್ಥಿತಿ ತೀರಾ ಶೋಚನೀಯ ಎಂದು ಗುರುತಿಸಲಾಗಿದೆ. ಅಂದರೆ ಶೌಚಾಲಯದ ಕೊರತೆ, ಮಳೆಗಾಲದಲ್ಲಿ ಸೋರುವಿಕೆ, ಶಿಥಿಲ ಕಟ್ಟಡ. ಕೆಮ್ಮಿಂಜೆ ಗ್ರಾಮಾಡಳಿತದ ಕಚೇರಿ ಕಟ್ಟಡದಲ್ಲಿ ಶೌಚಾಯ ಇಲ್ಲ, ನೀರಿನ ವ್ಯವಸ್ಥೆಯು ಇಲ್ಲ, ಆರ್ಯಾಪು ಕಚೇರಿ ಕಟ್ಟಡ ಪ್ರತೀ ಮಳೆಗಾಲದಲ್ಲಿ ಸೋರುತ್ತಿದೆ. ಮಳೆಗಾಲದಲ್ಲಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಬೇಸಗೆ ಸಮೀಪಿಸಿದರೂ ದುರಸ್ತಿ ಇನ್ನೂ ಆಗಿಲ್ಲ.

ಇಲ್ಲೂ ಶೌಚಾಲಯದ ಸಮಸ್ಯೆ ಇದೆ. 34ನೇ ನೆಕ್ಕಿಲಾಡಿಯಲ್ಲಿ ಗ್ರಾ.ಪಂ.ಸಭಾಂಗಣದ ಒಂದು ಮೂಲೆಯೇ ಗ್ರಾಮಾಡಳಿತದ
ಕಚೇರಿ. ಕಬಕ, ಕೊಡಿಪ್ಪಾಡಿಯಲ್ಲಿಯು ಮೂಲ ಸೌಕರ್ಯದ ಕೊರತೆ ಇದೆ. ಇನ್ನು ಕುರಿಯದಲ್ಲಿ ಹಳೆ ಅಂಗನವಾಡಿ ಕಟ್ಟಡವನ್ನು ನೀಡಲಾಗಿದ್ದು ಅದರಲ್ಲಿ ಶೌಚಾಲಯ ಇಲ್ಲ. ಬಾಗಿಲು, ಮಾಡು ಶಿಥಿಲವಾಗಿದೆ. ಪಟ್ನೂರು ವಿಎ ಕಚೇರಿಯ ಸ್ಥಿತಿಯು ಇಂತಹುದೆ.

ಉಳಿದ ಗ್ರಾಮಾಡಳಿತದ ಕಟ್ಟಡಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಂಕಿ-ಅಂಶದ ಪ್ರಕಾರ ಕೆಮ್ಮಿಂಜೆ, ಆರ್ಯಾಪು, ಬಜತ್ತೂರು, 34ನೇ ನೆಕ್ಕಿಲಾಡಿ, ಪಟ್ನೂರು, ಪಡವನ್ನೂರು, ಕುರಿಯ, ಮಾಟ್ನೂರು ಗ್ರಾಮಾಡಳಿತ ಕಚೇರಿಗಳು ಸುರಕ್ಷಿತವಾಗಿಲ್ಲ. ಅಲ್ಲಿ ಮೂಲ  ಸೌಕರ್ಯಗಳ ಕೊರತೆ ತೀವ್ರವಾಗಿದೆ ಎಂದು ಗುರುತಿಸಲಾಗಿದೆ.

ವಿದ್ಯುತ್‌ ಬಿಲ್‌ ವಿಎಗಳೇ ಕಟ್ಟಬೇಕು
ಒಂದೆಡೆ ಸ್ವಂತ ಕಚೇರಿ ಇಲ್ಲದಿರುವ, ಕನಿಷ್ಠ ಮೂಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಾಡಳಿತಧಿಕಾರಿಗಳು ಅಳಲು ವ್ಯಕ್ತಪಡಿಸುತ್ತಿದ್ದರೆ ಪ್ರತೀ ತಿಂಗಳ ಕಚೇರಿ ವಿದ್ಯುತ್‌ ಬಿಲ್‌ ಅನ್ನು ಗ್ರಾಮಾಡಳಿತಧಿಕಾರಿಗಳು ತಮ್ಮ ಕೈಯಿಂದಲೇ ಭರಿಸುತ್ತಿದ್ದಾರೆ. ಇದಕ್ಕೆ ಯಾವುದೇ ಅನುದಾನ ಲಭ್ಯವಾಗುತ್ತಿಲ್ಲ. ಹೀಗಾಗಿ ಇಡೀ ಗ್ರಾಮದ ಕಂದಾಯ ಆಡಳಿತ ವ್ಯವಸ್ಥೆ ಹೊಣೆ ಹೊತ್ತಿರುವ ಸರಕಾರದ ಇಲಾಖೆ ನಿರ್ಲಕ್ಷéಕ್ಕೆ ಈಡಾಗಿರುವು ಕಂಡು ಬರುತ್ತಿದೆ.

17ಆ್ಯಪ್‌ ಗಳ ಹೆಚ್ಚುವರಿ ಹೊರೆ
ಗ್ರಾಮ ಆಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ಕೆಲಸಕ್ಕಿಂತ ಅನ್ಯ ಇಲಾಖೆ ಕಾರ್ಯದೊತ್ತಡವೇ ಹೆಚ್ಚಾಗಿದೆ. ಹೀಗಾಗಿ
ಒಂದೆಡೆ ಸರಕಾರದ ಭಾಗವೇ ಸರಕಾರದ ವಿರುದ್ಧ ಮುಷ್ಕರ ನಿರತವಾಗಿದೆ. ವಿವಿಧ ಉದ್ದೇಶಗಳಿಗೆ 17 ಆ್ಯಪ್‌ ಗಳನ್ನು ಸರಕಾರ
ತಂದಿದ್ದು ಈ ಕೆಲಸದ ಹೊರೆಯನ್ನು ವಿಎಗಳಿಗೆ ಹೊರಿಸಲಾಗಿದೆ. ಸರಕಾರಿ ಜಮೀನು ಒತ್ತುವರಿ ಗುರುತಿಸುವುದು, ಬೆಳೆ ಪರಿಹಾರ, ಬಗರ್‌ ಹುಕಂ, ಪಿಎಂ ಕಿಸಾನ್‌, ಮಳೆ ಹಾನಿ, ಬಿಎಲ್‌ಒ ಮೊದಲಾದ 17 ಆ್ಯಪ್‌ ಗಳ ನಿರ್ವಹಣೆಯ ಹೊರೆ ಇದ್ದು ಸಿಬಂದಿ ಕೊರತೆ ಕಾರಣದಿಂದ ಇರುವ ವಿಎಗಳಿಗೆ ಕೆಲಸದ ಒತ್ತಡದ ಸೃಷ್ಟಿಯಾಗಿದೆ ಅನ್ನುತ್ತಾರೆ ವಿಎಗಳು.

*ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ

Miracle: ಲಿಂಗದ ಮೇಲಿನ ಕಲ್ಲು‌ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು: ಕಡಣಿಯಲ್ಲೊಂದು ಅಚ್ಚರಿ

Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Niraj Chopra

Javelin; ನೀರಜ್ ಚೋಪ್ರಾರಿಂದ ಬೇರೆಯಾಗಲು ಮುಂದಾದ ಕೋಚ್ ಬಾರ್ಟೋನಿಟ್ಜ್: ಕಾರಣ?

Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು

Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

Bantwala: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕಪ್ಪು ಹೊಗೆ.!

Bantwala: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಪರಿಸರ ಮಾಲಿನ್ಯ!

Belthangady: ನದಿಗೆ ಇಳಿದಿದ್ದ ವೃದ್ಧೆಯ ಮೃತ ದೇಹ ಪತ್ತೆ

Belthangady: ನದಿಗೆ ಇಳಿದಿದ್ದ ವೃದ್ಧೆಯ ಮೃತ ದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಸಿಂಧನೂರಲ್ಲಿ ಅಪಹರಿಸಲ್ಪಟ್ಟ ಮಹಾರಾಷ್ಟ್ರದ ನಾಲ್ವರು ವಿದ್ಯಾರ್ಥಿಗಳ ರಕ್ಷ ಣೆ; ಇಬ್ಬರ ಬಂಧನ

ಸಿಂಧನೂರಲ್ಲಿ ಅಪಹರಿಸಲ್ಪಟ್ಟ ಮಹಾರಾಷ್ಟ್ರದ ನಾಲ್ವರು ವಿದ್ಯಾರ್ಥಿಗಳ ರಕ್ಷ ಣೆ; ಇಬ್ಬರ ಬಂಧನ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.