ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ತನ್ವಿತ್‌ಗೆ ಬಾಲ್ಯ ದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ.

Team Udayavani, Oct 2, 2024, 1:40 PM IST

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಬಂಟ್ವಾಳ: ಹುಲಿ ವೇಷದ ತಾಸೆಯ ಪೆಟ್ಟು ಕೇಳಿದರೆ ಸಾಕು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದೆರಡು ಸ್ಟೆಪ್‌ ಹಾಕಬೇಕು ಎಂಬಷ್ಟು ನಮ್ಮಲ್ಲಿ ಹುಚ್ಚು ಹಿಡಿಸುತ್ತದೆ. ನವರಾತ್ರಿ ಸಂದರ್ಭ ಸಾಕಷ್ಟು ಹುಲಿ ತಂಡಗಳು ಪ್ರದರ್ಶನ ನೀಡುತ್ತವೆ. ಇದಕ್ಕೆ ಅನುಭವಿಗಳೇ ಸಾರಥಿಗಳು. ಆದರೆ ಪೊಳಲಿಯಲ್ಲಿ 17 ವರ್ಷದ ಬಾಲಕನೋರ್ವ ಸ್ನೇಹಿತರನ್ನು ಕೂಡಿಕೊಂಡು ಹುಲಿವೇಷ ತಂಡ ಕಟ್ಟಿದ್ದಾನೆ. ಅದರ 2ನೇ ವರ್ಷದ ತಿರುಗಾಟಕ್ಕೆ ಈಗ ವೇದಿಕೆ ಅಣಿಯಾಗಿದೆ!

ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್‌ ಅವರು ಗರುಡ ಫ್ರೆಂಡ್ಸ್‌ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು
ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿಯೂ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪೊಳಲಿ ದೇವಾಲಯದಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದಾರೆ.

ಈ ಬಾರಿ ಡಬಲ್‌ ಹುಲಿಗಳು.!
ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್‌ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ! ಈಗಾಗಲೇ
ಮೂರು ರವಿವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು
ಸಂಪರ್ಕಿಸುವ ಟಾರ್ಗೆಟ್‌ ಹೊಂದಿದ್ದಾರೆ.

ಹುಲಿಗಳ ತಲೆ ತಯಾರಿಸುವ ತನ್ವಿತ್‌
ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಇದಕ್ಕೆ 15 ಸಾವಿರದಷ್ಟು
ಬಾಡಿಗೆ ಇರುತ್ತದೆ. ಈ ಮಕ್ಕಳ ಟೀಮ್‌ನಲ್ಲಿ ಅಷ್ಟು ಹಣವಿಲ್ಲದೆ ಇರುವುದರಿಂದ ತನ್ವಿತ್‌ ತಾನೇ ತಲೆಗಳನ್ನು ತಯಾರಿಸಿದ್ದಾನೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳ ಕೆಲಸವಿದೆ.ಈಗಾಗಲೇ ಬೇಕಾದಷ್ಟು ಹುಲಿಗಳ ತಲೆಗಳು ಸಿದ್ಧಗೊಂಡಿವೆ!

ಜಾತ್ರೆಯ ಸಂತೆ ಆದಾಯ ಹುಲಿ ವೇಷ ಕುಣಿತಕ್ಕೆ ಬಳಕೆ
ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ತನ್ವಿತ್‌ಗೆ ಬಾಲ್ಯ ದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ. ಹಲವು ವರ್ಷಗಳಿಂದ ಪೊಳಲಿ ಜಾತ್ರೆಯ ಸಂದರ್ಭ ಅಂಗಡಿ ಹಾಕಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಜತೆಗೆ ಕೃಷಿಕ ರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಈ ಸಂಪಾದನೆಯ ಹಣವನ್ನು ಹುಲಿ ಕುಣಿತಕ್ಕೆ ಬಳಸಿದ್ದಾನೆ. 2022ರಲ್ಲಿ ಕರಡಿ ತಂಡ ಕಟ್ಟಿದ್ದ ತನ್ವಿತ್‌. ಕಳೆದ ಪೊಳಲಿ ಜಾತ್ರೆಯಲ್ಲಿ ಅಂಗಡಿ ಹಾಕಿ ಅದರಲ್ಲಿ ಬಂದ ಸುಮಾರು 20 ಸಾವಿರ ರೂ. ಆದಾಯವನ್ನು ಬಳಸಿಕೊಂಡು ಮೊದಲ ವರ್ಷ ಹುಲಿ ತಂಡದ ಪ್ರದರ್ಶನ ನೀಡಿದ್ದ. ಕಳೆದ ವರ್ಷ ಒಟ್ಟು 1.50 ಲಕ್ಷ ರೂ. ನಷ್ಟು ಖರ್ಚಾಗಿದ್ದು, ಸಂಪಾದನೆ ಬರೀ 1.40 ಲಕ್ಷ ರೂ. ಅಂದರೆ ಸುಮಾರು 10 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ಮತ್ತೆ ಸಾಹಸಕ್ಕೆ ಕೈ ಹಾಕಿದ್ದಾರೆ.

ಈ ಬಾರಿಸುಮಾರು 100 ಮನೆಗೆ ಹೋಗುತ್ತೇವೆ
ಸುಮಾರು 30 ಮಂದಿ ಹುಲಿ ವೇಷಧಾರಿಗಳ ತಂಡ ಈ ಬಾರಿ 2 ದಿನಗಳ ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಈಗಾಗಲೇ ಪ್ರಾಕ್ಟಿಸ್‌ ಪೂರ್ತಿಗೊಳಿಸಿದ್ದೇವೆ. ಪೊಳಲಿ ಸುತ್ತಮುತ್ತಲ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಅ. 11ರಂದು ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದೇವೆ. ಇದು 2ನೇ ವರ್ಷದ ಹುಲಿ ಹುಣಿತವಾಗಿದ್ದು, 2022ರಲ್ಲಿ ಕರಡಿ ವೇಷದ ತಂಡವನ್ನು ಇಳಿಸಿದ್ದೆ.
* ತನ್ವಿತ್‌, ಗರುಡ ಫ್ರೆಂಡ್ಸ್‌ ಹುಲಿ ತಂಡದ ಮುಖ್ಯಸ್ಥ

*ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಕಿಟ್ ಒದಗಿಸಲು ಬಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ

Miracle: ಲಿಂಗದ ಮೇಲಿನ ಕಲ್ಲು‌ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು: ಕಡಣಿಯಲ್ಲೊಂದು ಅಚ್ಚರಿ

Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Fact Check: ಇರಾನ್‌ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್‌ ಬಂಕರ್‌ ನತ್ತ ಓಡಿದ್ದರೇ?

Niraj Chopra

Javelin; ನೀರಜ್ ಚೋಪ್ರಾರಿಂದ ಬೇರೆಯಾಗಲು ಮುಂದಾದ ಕೋಚ್ ಬಾರ್ಟೋನಿಟ್ಜ್: ಕಾರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಉಚ್ಚಿಲ ದಸರಾ 2024: ಅ.3 -12ರ ವರೆಗೆ ಸಾಂಸ್ಕೃತಿಕ ರಸದೌತಣ, ಲೇಸರ್‌ ಶೋ

“ಉಚ್ಚಿಲ ದಸರಾ 2024: ಅ.3 -12ರ ವರೆಗೆ ಸಾಂಸ್ಕೃತಿಕ ರಸದೌತಣ, ಲೇಸರ್‌ ಶೋ

7-mng

ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ

Bus Ticket: ಸಾಲು ಸಾಲು ರಜೆ; ನವರಾತ್ರಿಗೆ ಬಸ್‌ ಟಿಕೆಟ್‌ ದರ ಬಲು ದುಬಾರಿ !

Bus Ticket: ಸಾಲು ಸಾಲು ರಜೆ; ನವರಾತ್ರಿಗೆ ಬಸ್‌ ಟಿಕೆಟ್‌ ದರ ಬಲು ದುಬಾರಿ !

Legislative Council: ಇಂದು ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟ ?

Legislative Council: ಇಂದು ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟ ?

Mangaluru: ಉಗ್ರರಂತೆ ಕಳ್ಳರಿಗೂ ತರಬೇತಿ ಕೇಂದ್ರ! ಚಡ್ಡಿ ಗ್ಯಾಂಗ್‌ಗೆ ದರೋಡೆಯೇ ದೇವರು

Mangaluru: ಉಗ್ರರಂತೆ ಕಳ್ಳರಿಗೂ ತರಬೇತಿ ಕೇಂದ್ರ! ಚಡ್ಡಿ ಗ್ಯಾಂಗ್‌ಗೆ ದರೋಡೆಯೇ ದೇವರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಕಿಟ್ ಒದಗಿಸಲು ಬಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಸಿಂಧನೂರಲ್ಲಿ ಅಪಹರಿಸಲ್ಪಟ್ಟ ಮಹಾರಾಷ್ಟ್ರದ ನಾಲ್ವರು ವಿದ್ಯಾರ್ಥಿಗಳ ರಕ್ಷ ಣೆ; ಇಬ್ಬರ ಬಂಧನ

ಸಿಂಧನೂರಲ್ಲಿ ಅಪಹರಿಸಲ್ಪಟ್ಟ ಮಹಾರಾಷ್ಟ್ರದ ನಾಲ್ವರು ವಿದ್ಯಾರ್ಥಿಗಳ ರಕ್ಷ ಣೆ; ಇಬ್ಬರ ಬಂಧನ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.