India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ
Team Udayavani, Oct 2, 2024, 3:25 PM IST
ಆಕ್ಲೆಂಡ್: ಭಾರತ ವಿರುದ್ಧದ ಮೂರು ಟೆಸ್ಟ್ಗಳ ಸರಣಿಗೆ ಮುನ್ನ ಟಿಮ್ ಸೌಥಿ ನ್ಯೂಜಿಲ್ಯಾಂಡ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನಕ್ಕೆ ಟಾಮ್ ಲ್ಯಾಥಮ್ ಅವರನ್ನು ನೇಮಿಸಲಾಗಿದೆ.
“ನಾನು ಯಾವಾಗಲೂ ನನ್ನ ವೃತ್ತಿಜೀವನದುದ್ದಕ್ಕೂ ತಂಡವನ್ನು ಮೊದಲ ಸ್ಥಾನದಲ್ಲಿ ಇರಿಸಲು ಪ್ರಯತ್ನಿಸಿದ್ದೇನೆ ಮತ್ತು ಈ ನಿರ್ಧಾರವು ತಂಡಕ್ಕೆ ಉತ್ತಮವಾಗಿದೆ ಎಂದು ನಾನು ನಂಬುತ್ತೇನೆ” ಎಂದು ಸೌಥಿ ಹೇಳಿಕೆ ನೀಡಿದ್ದಾರೆ.
“ನಮ್ಮ ತಂಡಕ್ಕೆ ನಾನು ಅತ್ಯುತ್ತಮ ಸೇವೆ ಸಲ್ಲಿಸುವ ವಿಧಾನವೆಂದರೆ ಮೈದಾನದಲ್ಲಿ ನನ್ನ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸುವುದಾಗಿದೆ. ಅತ್ಯುತ್ತಮ ಸ್ಥಿತಿಗೆ ಮರಳುವುದು, ವಿಕೆಟ್ಗಳನ್ನು ಪಡೆಯುವುದನ್ನು ಮುಂದುವರಿಸುವುದು ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ” ಎಂದು 35 ರ ಹರೆಯದ ಬಲಗೈ ವೇಗಿ ಹೇಳಿದ್ದಾರೆ.
ಸೌಥಿ 14 ಟೆಸ್ಟ್ಗಳಲ್ಲಿ ನಾಯಕರಾಗಿದ್ದರು, ಇದರಲ್ಲಿ ಕಿವೀಸ್ ಆರು ಗೆದ್ದಿದ್ದರೆ, ಆರು ಪಂದ್ಯಗಳಲ್ಲಿ ಸೋತಿತ್ತು. ಎರಡು ಪಂದ್ಯ ಡ್ರಾ ಮಾಡಿಕೊಂಡಿತ್ತು.
161 ಏಕದಿನ ಮತ್ತು 126 ಟಿ 20 ಜತೆಗೆ 102 ಟೆಸ್ಟ್ಗಳನ್ನು ಆಡಿದ ಹಿರಿಮೆ ಸೌಥಿ ಅವರದ್ದಾಗಿದೆ. 382 ವಿಕೆಟ್ಗಳೊಂದಿಗೆ, ಅವರು ದಂತಕಥೆ ರಿಚರ್ಡ್ ಹ್ಯಾಡ್ಲಿ (431) ನಂತರ ಕಿವೀಸ್ ನ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ನ್ಯೂಜಿ ಲ್ಯಾಂಡ್ ಮೂರು ಟೆಸ್ಟ್ಗಳ ಸರಣಿಯಲ್ಲಿ ಅಕ್ಟೋಬರ್ 16-20 ರವರೆಗೆ ಬೆಂಗಳೂರಿನಲ್ಲಿ ಮೊದಲ ಪಂದ್ಯ ಆಡಲಿದೆ. ಅಕ್ಟೋಬರ್ 24-28 ರವರೆಗೆ ಪುಣೆಯಲ್ಲಿ ಎರಡನೇ ಪಂದ್ಯ ಮತ್ತು ನವೆಂಬರ್ 1-5 ರವರೆಗೆ ಮುಂಬೈನಲ್ಲಿ ಮೂರನೇ ಪಂದ್ಯವನ್ನು ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Javelin; ನೀರಜ್ ಚೋಪ್ರಾರಿಂದ ಬೇರೆಯಾಗಲು ಮುಂದಾದ ಕೋಚ್ ಬಾರ್ಟೋನಿಟ್ಜ್: ಕಾರಣ?
ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್
Irani cup: ರಹಾನೆ, ಅಯ್ಯರ್, ಸರ್ಫರಾಜ್ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ
Ranji Trophy 2024-25: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ ಆಯ್ಕೆ
INDvsBAN; ವರುಣನ ಬತ್ತಳಿಕೆಯಿಂದ ಎರಡಂಕ ಕಸಿದ ಭಾರತ: ಸರಣಿ ಗೆಲುವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…
Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು
Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್ ಬಿಚ್ಚಿದ ಕಾರ್ಯಕರ್ತ!
Vettaiyan Trailer: ಪಾಪಿಗಳ ಎನ್ಕೌಂಟರ್ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ
Chincholi: ಬಟ್ಟೆ ಒಗೆಯುವ ವೇಳೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.