ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

ಮಹಾತ್ಮನ ನೆನಪಿಗೆ ಸಂಗ್ರಹದ ಉಡುಗೊರೆ , ಪ್ರತಿ ಜಯಂತಿ, ರಾಷ್ಟ್ರೀಯ ಹಬ್ಬಗಳಂದು ಶಾಲಾ-ಕಾಲೇಜಿಗೆ ತೆರಳಿ ವಿದ್ಯಾರ್ಥಿ, ಯುವಜನರಿಗೆ ಪ್ರದರ್ಶನ

Team Udayavani, Oct 2, 2024, 5:40 PM IST

14-koppala

ಗಂಗಾವತಿ: ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಕಾಲ ಬದಲಾದಂತೆ ಜನರೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಅವರವರ ಹವ್ಯಾಸಗಳೂ ಬದಲಾಗುತ್ತಿವೆ.

ಇಂದಿನ ಯುವ ಪೀಳಿಗೆ ಸಿನೆಮಾ, ಕ್ರಿಕೆಟ್ ತಾರೆಯರ ಭಾವಚಿತ್ರ ಸಂಗ್ರಹಿಸುವ ಹವ್ಯಾಸ ಇಟ್ಟುಕೊಳ್ಳುತ್ತಾರೆಯೇ ಹೊರತು, ಐತಿಹಾಸಿಕ ಚಿತ್ರಗಳನ್ನಲ್ಲ. ಅವುಗಳನ್ನು ಸಂಗ್ರಹಿಸುವ, ಜೋಪಾನವಾಗಿ ಎತ್ತಿಡುವ ಕೆಲಸ ಮಾಡುವ ಯುವಕರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ.

ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಕ್ರೀಡಾಪಟು ಜಯಂತ್ ಕುಮಾರ್ ಶಾಲಾ ದಿನಗಳಲ್ಲಿ ರಾಷ್ಟ್ರಪೀತ ಮಹಾತ್ಮ ಗಾಂಧೀಜಿಯವರ ಭಾಷಣದ ಪ್ರೇರಣೆಯಿಂದ ಪ್ರೇರೆಪಿತರಾಗಿ ಮಹಾತ್ಮ ಗಾಂಧೀಜಿಯವರ ಅಮೂಲ್ಯವಾದ ನಾಣ್ಯ, ನೋಟ್, ಸ್ಟ್ಯಾಂಪ್‌ಗಳು ಹಾಗೂ ವಿಶೇಷವಾದ ಲೇಖನಗಳ ಸಂಗ್ರಹ ಅವರಲ್ಲಿ ಭದ್ರವಾಗಿ ಸಂರಕ್ಷಿಸಿ ಇಟ್ಟಿರುವುದು ಇಂದಿನ ಪೀಳಿಗೆಗೆ ಒಂದು ಮಾದರಿ ಎಂದು ಹೇಳಬಹುದು.

ಅವರ ಸಂಗ್ರಹದ ಒಂದು ನೋಟ

ನಾಣ್ಯಗಳು: ಗಾಂಧೀಜಿ ಶತಮಾನೋತ್ಸವ ಅಂಗಾವಾಗಿ 1969ರಲ್ಲಿ ಆರ್.ಬಿ.ಐ. ಬಿಡುಗಡೆ ಮಾಡಿರುವ ಅಪರೂಪದ 20 ಪೈಸೆ, 50 ಪೈಸೆ, 1 ರೂಪಾಯಿ, 10 ರೂಪಾಯಿ ಬೆಳ್ಳಿ ನಾಣ್ಯ ಹಾಗೂ ಇತ್ತೀಚೆಗೆ ದಂಡಿ ಯಾತ್ರೆಯ 75 ವರ್ಷದ ನೆನಪಿನ ಅಂಗವಾಗಿ ಬಿಡುಗಡೆಯಾದ 5 ರೂಪಾಯಿಯ ನಾಣ್ಯ, 50 ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬಿಡುಗಡೆಗೊಂಡ 50 ಪೈಸೆಯ ನಾಣ್ಯಗಳ ಸಂಗ್ರಹ.

ನೋಟ್‌ಗಳು: ಅತ್ಯಂತ ಅಮೂಲ್ಯವಾದ ಗಾಂಧೀಜೀ ಅವರ ಶತಮಾನೋತ್ಸವದಲ್ಲಿ ಬಿಡುಗಡೆಗೊಂಡ ಕುಳಿತುಕೊಂಡು ಭಗವದ್ಗೀತೆ ಓದುತ್ತಿರುವ ಗಾಂಧೀಜಿಯ 2, 5 , 10 ರೂಪಾಯಿ ಮತ್ತು 1 ರೂಪಾಯಿ ನೋಟ್‌ಗಳು ಹಾಗೂ 1996ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿರುವ 5, 10, 20, 50, 100, 500, 1000 ಮುಖ ಬೆಲೆಯ ರೂಪಾಯಿ ಚಿತ್ರಗಳು ಇರುವ ನೋಟ್ ಗುಚ್ಚಗಳ ಸಂಗ್ರಹ.

ಸ್ಟ್ಯಾಂಪ್‌ಗಳು: ಭಾರತ ಅಂಚೆ ಇಲಾಖೆ 2011 ನಾಸಿಕ್‌ನಲ್ಲಿ ಮುದ್ರಿಸಿದ ಪ್ರಂಪಚದ ಮೊಟ್ಟ ಮೊದಲ 100 ರೂಪಾಯಿ ಮುಖ ಬೆಲೆಯ ಅಪರೂಪದ ಖಾದಿ ಗಾಂಧೀಜಿ ಸ್ಟ್ಯಾಂಪ್‌ ಹಾಗೂ 25, 50, 100 (ಕೆಂಪು, ಹಸಿರು ಬಣ್ಣದ) ಪೈಸೆಯ ಸ್ಟ್ಯಾಂಪ್‌, 250, 500 (ಕೆಂಪು, ನೀಲಿ ಬಣ್ಣದ), ಸತ್ಯಾಗ್ರಹ ನೆನಪಿನ ಅಂಗವಾಗಿ ಬಿಡುಗಡೆಗೊಂಡ 500 ಪೈಸೆ, 60 ವರ್ಷದ ಮಾನವ ಹಕ್ಕು ಅಯೋಗ ಅಧಿಕಾರಕ್ಕೆ ಬಂದ ನೆನಪಿನ ಅಂಗವಾಗಿ 500 ಪೈಸೆ ಒಳಗೊಂಡ ವಿವಿಧ ರೀತಿಯ 9 ಗಾಂಧೀಜಿ ಸ್ಟ್ಯಾಂಪ್‌ಗಳು ಇವರು ಸಂಗ್ರಹದಲ್ಲಿವೆ.

ಲೇಖನ ಹಾಗೂ ವ್ಯಂಗ್ಯಚಿತ್ರ: ಕೂತೂಹಲಕರವಾದ ಕನ್ನಡ, ತೆಲುಗು, ಇಂಗ್ಲೀಷ್ ಮೊದಲಾದ ದಿನಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಬಂದಿರುವ ಅಪರೂಪದ ಅಂಕಣ, ವ್ಯಂಗ್ಯಚಿತ್ರ, ಛಾಯಾಚಿತ್ರ, ಲೇಖನಗಳಾದ ಗಾಂಧೀಗೂ ಒಬ್ಬ ಪ್ರೇಯಿಸಿ ಇದ್ದಳೂ!, ಪಂಚಕೋನ ಕ್ರಿಕೆಟ್ ನಿಲ್ಲಿಸಿದ ಗಾಂಧೀಜಿ, ಗಾಂಧೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಲು ಅವರ ಮಗ ನಿರಾಕರಿಸಿದ್ಧ!, ಗಾಂಧೀಜಿ ವಂಶ ವೃಕ್ಷ, ಹೆಂಗಿದ್ರು ಹೆಂಗಾದ್ರು ಗೊತ್ತಾ(ವ್ಯಂಗ್ಯಚಿತ್ರ), ಗಾಂಧಿ ಹತ್ಯೆಗೆ ಐದು ಬಾರಿ ಯತ್ನ, ಗಾಂಧೀಜಿಯವರ ಹನ್ನೊಂದು ವ್ರತಗಳು, ಪತ್ರಕರ್ತರಾಗಿ ಗಾಂಧೀಜಿ, ʼಬೀದಿ ನಾಯಿಗಳನ್ನು ಕೊಲ್ಲಿ’ ಎಂದ್ದಿದರು ಗಾಂಧೀಜಿ ಹಾಗೂ ವಿವಿಧ ಲೇಖನಗಳ ಪರಿವಿಡಿಯನ್ನು ಪುಸ್ತಕದ ರೂಪದಲ್ಲಿ ಅಚ್ಚು ಕಟ್ಟಾಗಿ ಇಟ್ಟಿರುವುದು ನೋಡುಗರಿಗೆ ಕೂತುಹಲ ಮೂಡಿಸುತ್ತದೆ.

ಚಿಕ್ಕ ಹುಡುಗನಾಗಿದ್ದಾಗಲೇ ಹವ್ಯಾಸವನ್ನು ರೂಢಿಸಿಕೊಂಡಿರುವುದರಿಂದ ತಮ್ಮಲ್ಲಿ ಈಗ ದೊಡ್ಡ ಸಂಗ್ರಹವೇ ಇರುವುದರಿಂದ ಆಸಕ್ತರಿಗೆ ಇವುಗಳನ್ನು ತೋರಿಸಿ ಖುಷಿ ಪಡುತ್ತಾರೆ ಕ್ರೀಡಾಪಟು ಜಯಂತ್ ಕುಮಾರ್.

ಒಟ್ಟಾರೆ ಇತಿಹಾಸವನ್ನೇ ಮರೆಯುತ್ತಿರುವ ಈ ಕಾಲದಲ್ಲಿ ಗಾಂಧಿ ಜಯಂತಿ ದಿನದಂದಾದರೂ ನಾವು ದಿನನಿತ್ಯ ಉಪಯೋಗಿಸುವ ರೂಪಾಯಿ ನೋಟ್‌ಗಳಲ್ಲದೆ ಅಪರೂಪದ ಸಂಗ್ರಹ ನೋಟ್, ನಾಣ್ಯ, ಸ್ಟ್ಯಾಂಪ್, ಲೇಖನಗಳನ್ನು ನೋಡಿ ಬಾಪೂಜಿಯವರನ್ನು  ಸ್ಮರಿಸೋಣ.

-ಕೆ.ನಿಂಗಜ್ಜ

 

ಟಾಪ್ ನ್ಯೂಸ್

Gangavath-Rain

Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

madikeri

Madikeri: ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾ ವಶ; 7 ಆರೋಪಿಗಳ ಬಂಧನ

MLC-elctin-Congress

Council By Polls: ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾದ ರಾಜು ಪೂಜಾರಿ

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

Miracle: ಲಿಂಗದ ಮೇಲಿನ ಕಲ್ಲು‌ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು: ಕಡಣಿಯಲ್ಲೊಂದು ಅಚ್ಚರಿ

Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ

Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ

Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gangavath-Rain

Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.