Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು


Team Udayavani, Oct 2, 2024, 7:18 PM IST

023

ಒಂದು ಸಿನಿಮಾದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡುವ ಅನೇಕರು ಚಿತ್ರರಂಗದಲ್ಲಿ ಸಿಗುತ್ತಾರೆ. ಈ ಸಾಲಿಗೆ ಡಾ.ಎಸ್‌.ಮಹೇಶ್‌ ಬಾಬು ಕೂಡಾ ಸೇರುತ್ತಾರೆ. ಯಾರು ಈ ಮಹೇಶ್‌ ಬಾಬು ಎಂದರೆ “ಪ್ರಾಪ್ತಿ’ ಸಿನಿಮಾ ಬಗ್ಗೆ ಹೇಳಬೇಕು.

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಪ್ರಾಪ್ತಿ’ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ನಿರ್ದೇಶನ ಜತೆಗೆ ಸಿಸಿ ಕ್ರಿಯೇಶನ್ಸ್‌ ಅಡಿಯಲ್ಲಿ ನಿರ್ಮಾಣ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ವಿಧಿ ನಿಗದಿಯಾಗಿದೆ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. ಈಗಾಗಲೇ ಚಿತ್ರ ಸೆನ್ಸಾರ್‌ ಮುಗಿಸಿದ್ದು, “ಯು/ಎ’ ಪ್ರಮಾಣ ಪತ್ರ ದೊರಕಿದೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಹಾಗೂ ಮೂರು ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಚಿತ್ರತಂಡಕ್ಕೆ ಸಾಥ್‌ ನೀಡಿದರು.

ಈಗಿನ ಕಾಲಮಾನದಲ್ಲಿ ನಡೆಯುತ್ತಿರುವ ಮೂರು ಅಂಶಗಳನ್ನು ಬಳಸಿಕೊಂಡು, ಸಂದೇಶದ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಮೊದಲನೆಯದಾಗಿ ಮದುವೆ ಬಳಿಕದ ಅಕ್ರಮ ಸಂಬಂಧ, ಇದರಿಂದ ಪತಿ-ಪತ್ನಿ ನಡುವೆ ಬಿರುಕು ಬಂದು ವಿಚ್ಚೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಎರಡನೆಯದು ಆಕರ್ಷಣೆ. ಇದು ಹೆಚ್ಚಾಗಿ ಸಣ್ಣ ಹುಡುಗರು, ಹುಡುಗಿಯರಲ್ಲಿ ಕಂಡು ಬರುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಕೊನೆಯದಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವುದು. ಅಂದರೆ ನೃತ್ಯ ಅದರಲ್ಲೂ ಭರತನಾಟ್ಯ ವಿಶ್ವದೆಲ್ಲೆಡೆ ಪ್ರಚಲಿತವಾಗಿದೆ. ಇವೆಲ್ಲವು ಸಸ್ಪೆನ್ಸ್‌-ಥ್ರಿಲ್ಲರ್‌ನೊಂದಿಗೆ ಹೇಳಿದ್ದಾರಂತೆ.

ಜಯಸೂರ್ಯ ಈ ಚಿತ್ರದ ನಾಯಕ. ಗಾಯಕಿ ಮಂಜುಳಾ ಗುರುರಾಜ್‌ ಸೊಸೆ ಗೌರಿಸಾಗರ್‌ ವೃತ್ತಿಯಲ್ಲಿ ಡ್ಯಾನ್ಸರ್‌. ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಉಳಿದಂತೆ ನಿಖೀತಾರಾಂ, ಮೋನಿಷಾ ಥಾಮಸ್‌ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

Udupi: ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ| ಕೆ.ವಿದ್ಯಾಕುಮಾರಿ

Udupi: ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ| ಕೆ.ವಿದ್ಯಾಕುಮಾರಿ

Katapadi: ಆಯತಪ್ಪಿ ನೆಲಕ್ಕೆ ಬಿದ್ದು ವ್ಯಕ್ತಿ ಸಾವು

Katapadi: ಆಯತಪ್ಪಿ ನೆಲಕ್ಕೆ ಬಿದ್ದು ವ್ಯಕ್ತಿ ಸಾವು

U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ

U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

jaaa

BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್

Swachh Bharat Mission: “ಸ್ವಚ್ಛಭಾರತ’ 21ನೇ ಶತಮಾನದ ಯಶಸ್ವಿ ಜನಾಂದೋಲನ: ಮೋದಿ

Swachh Bharat Mission: “ಸ್ವಚ್ಛಭಾರತ’ 21ನೇ ಶತಮಾನದ ಯಶಸ್ವಿ ಜನಾಂದೋಲನ: ಮೋದಿ

Beldale

Bidar: ನಿವೇಶನಗಳ ವಾಪಸ್ ಕೊಟ್ರೂ ಸಿದ್ದರಾಮಯ್ಯ ಕುಟುಂಬಕ್ಕೆ ಕಂಟಕ ತಪ್ಪಲ್ಲ: ಶಾಸಕ ಬೆಲ್ದಾಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jaaa

BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

Madhyantara Short Movie: ಮಧ್ಯಂತರ ತಂದ ಖುಷಿ

Madhyantara Short Movie: ಮಧ್ಯಂತರ ತಂದ ಖುಷಿ

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

0622

Ranav Kshirsagr: ಪಾಸಿಟಿವ್‌ ಹುಡುಗನ ನೆಗೆಟಿವ್‌ ಕನಸು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ| ಕೆ.ವಿದ್ಯಾಕುಮಾರಿ

Udupi: ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ| ಕೆ.ವಿದ್ಯಾಕುಮಾರಿ

Katapadi: ಆಯತಪ್ಪಿ ನೆಲಕ್ಕೆ ಬಿದ್ದು ವ್ಯಕ್ತಿ ಸಾವು

Katapadi: ಆಯತಪ್ಪಿ ನೆಲಕ್ಕೆ ಬಿದ್ದು ವ್ಯಕ್ತಿ ಸಾವು

U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ

U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

jaaa

BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.