BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್
ಬಿಗ್ ಬಾಸ್ ಕಾರ್ಯಕ್ರಮವನ್ನೇ ಹಾಳು ಮಾಡುತ್ತೇನೆ ಎಂದ ಜಗದೀಶ್..
Team Udayavani, Oct 2, 2024, 11:07 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada) ದ ಆಟ ರಂಗೇರಿದೆ. ಸ್ಪರ್ಧಿಗಳ ನಡುವೆ ರಿಯಲ್ ಗೇಮ್ ಶುರುವಾಗಿದೆ.
ಎರಡು ದಿನ ಸ್ನೇಹಿತರಂತಿದ್ದ ಸ್ಪರ್ಧಿಗಳ ನಡುವೆಯೂ ಕಿತ್ತಾಟ ಶುರುವಾಗಿದೆ. ವಕೀಲ ಜಗದೀಶ್ ಅವರು ಸ್ವರ್ಗದ ನಿವಾಸಿಯಾಗಿದ್ದರೂ ನರಕದ ನಿವಾಸಿಗಳ ಜತೆ ಆತ್ಮೀಯವಾಗಿದ್ದಾರೆ.
ಜಗದೀಶ್ ನರಕ ನಿವಾಸಿಗಳಿಗೆ ಕದ್ದುಮುಚ್ಚಿ ಆಹಾರವನ್ನು ನೀಡಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಮನೆಯ ಆಹಾರ ಸಾಮಾಗ್ರಿಗಳನ್ನು ಕಿತ್ತುಕೊಂಡಿದ್ದಾರೆ.
ಟಾಸ್ಕ್ ವೊಂದನ್ನು ಸ್ವರ್ಗದ ನಿವಾಸಿಗಳಿಗೆ ನೀಡಿದ್ದು, ಟಾಸ್ಕ್ ವೇಳೆ ಜಗದೀಶ್ ಅವರ ಮೈ ತಾಗಿ ಯಮುನಾ ಕೆಳಗೆ ಬಿದ್ದಿದ್ದಾರೆ. ಇದಕ್ಕೆ ಟಾಸ್ಕ್ ಉಸ್ತುವಾರಿ ವಹಿಸಿದ್ದ ಧನರಾಜದ ಅವರು ಜಗದೀಶ್ ಅವರನ್ನು ಗೇಮ್ ನಿಂದ ಹೊರ ಹಾಕಿದ್ದಾರೆ.
ಇದಕ್ಕೆ ಜಗದೀಶ್ ಅವರು ನಾನು ರೆಫ್ರಿಯನ್ನು ನಂಬಲ್ಲ. We Want Justice ಎಂದು ಕೂಗಿದ್ದಾರೆ. ಇದಾದ ಬಳಿಕ ಧನರಾಜ್ ಅವರು ಕನ್ಫೆಷನ್ ರೂಮ್ ಗೆ ಕಣ್ಣೀರು ಹಾಕಿದ್ದಾರೆ. ಬಿಗ್ ಧನರಾಜ್ ಅವರಿಗೆ ಧೈರ್ಯ ತುಂಬಿ ಟಾಸ್ಕ್ ಮುಂದುವರೆಸುವಂತೆ ಹೇಳಿದ್ದಾರೆ.
ಧನರಾಜ್ ಹಾಗೂ ಜಗದೀಶ್ ಅವರ ನಡುವೆ ಮಾತಿನ ಚಕಮಕಿ ನಡೆದು ತಾರರಕ್ಕೇರಿದ ಪ್ರಸಂಗ ನಡೆಯಿತು. ಉಗ್ರಂ ಮಂಜು ಅವರು ತಕ್ಕಡಿ ಭಾಗ್ಯ ಟಾಸ್ಕ್ ನಲ್ಲಿ ಗೆದ್ದು ನಾಮಿನೇಟ್ ನಿಂದ ಪಾರಾಗಿದ್ದಾರೆ.
ಜಗದೀಶ್ ಅವರು ಮಾನಸ ಅವರಿಗೆ ಯಾವ ಸೀಮೆಯ ಹೆಂಗಸು ಇವಳು ಎಂದು ಹೇಳಿದ್ದು ಮನೆಯ ಎಲ್ಲಾ ಸ್ಪರ್ಧಿಗಳು ಜಗದೀಶ್ ಅವರ ಮೇಲೆ ಗರಂ ಆಗುವ ಪ್ರಸಂಗ ನಡೆಯಿತು.
ನಾನು ಆಚೆ ಹೋಗಲಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್ ಕ್ಯಾಮರಾ ಮುಂದೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gandhi Jayanthi: ಬಿಜೆಪಿ ಷಡ್ಯಂತ್ರ ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿ: ಸಿಎಂ
Department of School Education: ಶಾಲೆಗಳ ಉಚಿತ ವಿದ್ಯುತ್: ಅನುಷ್ಠಾನಕ್ಕೆ ಸೂಚನೆ
Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ
Rani Chennamma: ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
Karkala: ಕಾರು ಹರಿದು ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.