U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ


Team Udayavani, Oct 2, 2024, 11:23 PM IST

U-19 Test: ಆಸೀಸ್‌ ವಿರುದ್ಧ ಭಾರತಕ್ಕೆ 2 ವಿಕೆಟ್‌ ಜಯ

ಚೆನ್ನೈ: ಮೊದಲ ಅ-19 ಚತುರ್ದಿನ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಗೆಲುವಿಗೆ 212 ರನ್ನುಗಳ ಗುರಿ ಪಡೆದ ಭಾರತ 3ನೇ ದಿನದಾಟದಲ್ಲೇ 61.1 ಓವರ್‌ಗಳಲ್ಲಿ 8 ವಿಕೆಟಿಗೆ 214 ರನ್‌ ಬಾರಿಸಿತು. ನಿತ್ಯ ಪಾಂಡ್ಯ 51 ರನ್‌, 7ನೇ ಕ್ರಮಾಂಕದಲ್ಲಿ ಆಡಲಿಳಿದ ಎಡಗೈ ಬ್ಯಾಟರ್‌ ನಿಖೀಲ್‌ ಕುಮಾರ್‌ ಅಜೇಯ 55 ರನ್‌ ಬಾರಿಸಿ ಭಾರತವನ್ನು ದಡ ಮುಟ್ಟಿಸಿದರು.

ಲೆಗ್‌ಸ್ಪಿನ್ನರ್‌ ಮೊಹಮ್ಮದ್‌ ಎನಾನ್‌ 79ಕ್ಕೆ 6 ವಿಕೆಟ್‌ ಉಡಾಯಿಸಿ ಆಸ್ಟ್ರೇಲಿಯಾದ ದ್ವಿತೀಯ ಸರದಿಗೆ ಕಡಿವಾಣ ಹಾಕಿದರು. ಆಸೀಸ್‌ 214ಕ್ಕೆ ಆಲೌಟ್‌ ಆಯಿತು. ಚೇಸಿಂಗ್‌ ವೇಳೆ, ಮೊದಲ ಸರದಿಯ ಶತಕವೀರ ವೈಭವ್‌ ಸೂರ್ಯವಂಶಿ ಅವರನ್ನು ಭಾರತ ಬೇಗನೇ ಕಳೆದುಕೊಂಡಿತು. ಸೂರ್ಯವಂಶಿ ಗಳಿಸಿದ್ದು ಒಂದೇ ರನ್‌.

ಬೌಲಿಂಗ್‌ ಆರಂಭಿಸಿದ ಆಫ್ಸ್ಪಿನ್ನರ್‌ ಥಾಮಸ್‌ ಬ್ರೌನ್‌ ಭರ್ಜರಿ ಯಶಸ್ಸು ಸಾಧಿಸಿದರು. ವಿಹಾನ್‌ ಮಲ್ಹೋತ್ರಾ 11 ರನ್ನಿಗೆ ಆಟ ಮುಗಿಸಿದರು. 25 ರನ್ನಿಗೆ 2 ವಿಕೆಟ್‌ ಬಿತ್ತು. ನಿತ್ಯ ಪಾಂಡ್ಯ ಮತ್ತು ಕೆ.ಪಿ. ಕಾರ್ತಿಕೇಯ (36) 3ನೇ ವಿಕೆಟಿಗೆ 71 ರನ್‌ ಪೇರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಭಾರತದ ಗೆಲುವಿಗೆ ಇನ್ನೂ 100ರಷ್ಟು ರನ್‌ ಅಗತ್ಯವಿದ್ದಾಗ ನಿಖೀಲ್‌ ಕುಮಾರ್‌ ಚಾರ್ಜ್‌ ತೆಗೆದುಕೊಂಡರು. ಆಸ್ಟ್ರೇಲಿಯದ ಗೆಲುವಿನ ಆಸೆ ಕಮರಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 293 ಮತ್ತು 214. ಭಾರತ 296 ಮತ್ತು 214/8.

ಟಾಪ್ ನ್ಯೂಸ್

CM-KPCC

Gandhi Jayanthi: ಬಿಜೆಪಿ ಷಡ್ಯಂತ್ರ ಸೋಲಿಸಲು ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜಾಗಿ: ಸಿಎಂ

vidhana-Soudha

Department of School Education: ಶಾಲೆಗಳ ಉಚಿತ ವಿದ್ಯುತ್‌: ಅನುಷ್ಠಾನಕ್ಕೆ ಸೂಚನೆ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

CM-Kitturu

Rani Chennamma: ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

Karkala: ಕಾರು ಹರಿದು ಪಾದಚಾರಿ ಸಾವು

Karkala: ಕಾರು ಹರಿದು ಪಾದಚಾರಿ ಸಾವು

Adiudupi: ಎಪಿಎಂಸಿ ಮಾರುಕಟ್ಟೆಗೆ ದಾಳಿ: 12 ಟನ್‌ ಚೀನ ಬೆಳ್ಳುಳ್ಳಿ ವಶಕ್ಕೆ

Adiudupi: ಎಪಿಎಂಸಿ ಮಾರುಕಟ್ಟೆಗೆ ದಾಳಿ: 12 ಟನ್‌ ಚೀನ ಬೆಳ್ಳುಳ್ಳಿ ವಶಕ್ಕೆ

Malpe: ಅಕ್ರಮ ಮರಳು ಸಾಗಾಟ; ಆರೋಪಿ, ವಾಹನ ಪೊಲೀಸ್ ವಶಕ್ಕೆ

Malpe: ಅಕ್ರಮ ಮರಳು ಸಾಗಾಟ; ಆರೋಪಿ, ವಾಹನ ಪೊಲೀಸ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

Trap Shooting: ಶಾಟ್‌ ಗನ್‌ ಟ್ರ್ಯಾಪ್ ಶೂಟಿಂಗ್‌… ಸ್ಯಾಮುಯೆಲ್‌ ಸಿಮ್ಸನ್‌ಗೆ ಚಿನ್ನ

ದ.ಕ. ಚೆಸ್‌ ಅಸೋಸಿಯೇಶನ್‌ ಮಂಗಳೂರು ರಾಷ್ಟ್ರೀಯ ಓಪನ್‌ ರಾಪಿಡ್ ಚೆಸ್ ಆರಂಭ

ದ.ಕ. ಚೆಸ್‌ ಅಸೋಸಿಯೇಶನ್‌ ಮಂಗಳೂರು ರಾಷ್ಟ್ರೀಯ ಓಪನ್‌ ರಾಪಿಡ್ ಚೆಸ್ ಆರಂಭ

Niraj Chopra

Javelin; ನೀರಜ್ ಚೋಪ್ರಾರಿಂದ ಬೇರೆಯಾಗಲು ಮುಂದಾದ ಕೋಚ್ ಬಾರ್ಟೋನಿಟ್ಜ್: ಕಾರಣ?

1-bbb

ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-KPCC

Gandhi Jayanthi: ಬಿಜೆಪಿ ಷಡ್ಯಂತ್ರ ಸೋಲಿಸಲು ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜಾಗಿ: ಸಿಎಂ

vidhana-Soudha

Department of School Education: ಶಾಲೆಗಳ ಉಚಿತ ವಿದ್ಯುತ್‌: ಅನುಷ್ಠಾನಕ್ಕೆ ಸೂಚನೆ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

CM-Kitturu

Rani Chennamma: ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

Karkala: ಕಾರು ಹರಿದು ಪಾದಚಾರಿ ಸಾವು

Karkala: ಕಾರು ಹರಿದು ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.