Paddy: ಕುಸಿಯುತ್ತಿದೆ ಭತ್ತದ ದರ: ಕಟಾವು ಹತ್ತಿರವಾಗುತ್ತಿದ್ದಂತೆ ರೈತರಲ್ಲಿ ಆತಂಕ

ಜಿಲ್ಲಾಡಳಿತ ಮಧ್ಯ ಪ್ರವೇಶಕ್ಕೆ ಆಗ್ರಹ

Team Udayavani, Oct 3, 2024, 6:50 AM IST

Paddy: ಕುಸಿಯುತ್ತಿದೆ ಭತ್ತದ ದರ: ಕಟಾವು ಹತ್ತಿರವಾಗುತ್ತಿದ್ದಂತೆ ರೈತರಲ್ಲಿ ಆತಂಕ

ಕೋಟ: ಕಟಾವು ಹತ್ತಿರವಾಗುತ್ತಿದ್ದಂತೆ ಭತ್ತದ ದರ ಕುಸಿಯುವುದು ಪ್ರತಿವರ್ಷವೂ ಇದ್ದದ್ದೇ. ಆದರೆ ಈ ಬಾರಿ ಕುಸಿತದ ಪ್ರಮಾಣದ ಆತಂಕಕಾರಿಯಾಗಿದ್ದು, ರೈತರು ಕಂಗೆಡುವಂತೆ ಮಾಡಿದೆ.

ಕಳೆದ ವರ್ಷ 26ರಿಂದ 28 ರೂಪಾಯಿಗೆ ಮಾರಾಟವಾಗಿದ್ದ ಭತ್ತವನ್ನು ಈಗ 22-23 ರೂ.ಗೆ ಕೇಳುತ್ತಿದ್ದಾರೆ. ಪ್ರತಿವರ್ಷ ಭತ್ತದ ಕಟಾವು ಆರಂಭವಾದ ಕೂಡಲೇ ದರವನ್ನು ಇಳಿಸಲಾಗುತ್ತದೆ. ಕಟಾವು ಮುಗಿದು ಒಂದೆರಡು ತಿಂಗಳ ಬಳಿಕ ಏರಿಸಲಾಗುತ್ತದೆ. ಆದರೆ ಉಡುಪಿ, ದ.ಕ. ಜಿಲ್ಲೆಯಲ್ಲಿ ಭತ್ತವನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುವ ಕ್ರಮ ಇಲ್ಲ. ಆದ್ದರಿಂದ ರೈತರು ಆರಂಭದಲ್ಲೇ ಕಡಿಮೆ ಬೆಲೆಯಲ್ಲೇ ಮಾರುತ್ತಾರೆ. ಕಟಾವು ಸಂದರ್ಭದ ಅನಿರೀಕ್ಷಿತ ಬೆಲೆ ಕುಸಿತಕ್ಕೆ ಕಡಿವಾಣ ಹಾಕಬೇಕು ಎನ್ನುವುದು ರೈತರ ಆಗ್ರಹ.

ಆರಂಭದಲ್ಲಿ ನೀರಿನಾಂಶ ಹೆಚ್ಚು
ಉದ್ದೇಶ ಪೂರ್ವಕವಾಗಿ ಕಟಾವು ಆರಂಭದಲ್ಲಿ ಬೆಲೆ ಕುಸಿತ ಮಾಡುವುದಿಲ್ಲ. ಆರಂಭದಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಭತ್ತದಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಒಂದೆರಡು ತಿಂಗಳ ಬಳಿಕ ಭತ್ತ ಖರೀದಿಸಿದರೆ ನೀರಿನಾಂಶ ಇರುವುದಿಲ್ಲ ಹೀಗಾಗಿ ಆರಂಭದಲ್ಲಿ ಕಡಿಮೆ ದರ ನೀಡಿ, ಅನಂತರ ಹೆಚ್ಚು ದರ ನೀಡುತ್ತೇವೆ ಎನ್ನುವುದು ಅಕ್ಕಿ ಗಿರಿಣಿಗಳ ಮಾಲಕರ ಅಭಿಪ್ರಾಯ. ಇದನ್ನು ಒಪ್ಪದ ರೈತರು, ಆರಂಭದಲ್ಲಿ ಒದ್ದೆ ಭತ್ತ ಹಾಗೂ ಉತ್ತಮ ಗುಣಮಟ್ಟದ ಒಣ ಭತ್ತಕ್ಕೂ ಗಿರಣಿ ಮಾಲಕರು ಒಂದೇ ದರ ನೀಡುತ್ತಾರೆ ಎನ್ನುತ್ತಿದ್ದಾರೆ ರೈತರು.

ಹೊರ ಜಿಲ್ಲೆ ಭತ್ತ ಕಡಿಮೆ ದರಕ್ಕೆ

ಅಕ್ಕಿ ಗಿರಿಣಿಗಳಿಗೆ ಹೊರ ಜಿಲ್ಲೆಗಳಿಂದ ಹೇರಳ ಪ್ರಮಾಣದಲ್ಲಿ ಕಡಿಮೆ ದರದಲ್ಲಿ ಭತ್ತ ಪೂರೈಕೆಯಾಗುತ್ತದೆ. ಹೀಗಾಗಿ ಜಿಲ್ಲೆಯ ಭತ್ತದ ಕುರಿತು ಸ್ವಲ್ಪ ಮಟ್ಟಿನ ತಾತ್ಸಾರವಿದೆ. ಇದು ಸರಿಯಲ್ಲ. ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎನ್ನುವುದು ರೈತ ಕೋಟ ಶಿವಮೂರ್ತಿ ಉಪಾಧ್ಯರ ಅಭಿಪ್ರಾಯ.

ಜಿಲ್ಲಾಡಳಿತ ಕಡಿವಾಣ ಹಾಕಲಿ
ದರ ಇಳಿಕೆ ವಿಷಯದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅಕ್ಕಿಗಿರಣಿಗಳ ಮಾಲಕರ ಸಭೆ ಕರೆದು ರೈತರ ಹಿತ ಕಾಪಾಡಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.

ದ.ಕ. ಮನವಿ ಬಂದಿಲ್ಲ
ದ.ಕ. ಜಿಲ್ಲೆಯಲ್ಲಿ ಕಟಾವು ಸ್ವಲ್ಪ ತಡವಾಗಿ ನಡೆಯುವುದರಿಂದ ಬೆಲೆ ಸಮಸ್ಯೆ ಕುರಿತು ಯಾವುದೇ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಈ ಬಗ್ಗೆ ಪರಿಶೀಲಿಸುವುದಾಗಿ ಕೃಷಿ ಇಲಾಖೆ, ಜಿಲ್ಲಾಡಳಿತ ಮುಖ್ಯಸ್ಥರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕೃಷಿ ಇಲಾಖೆ, ಎ.ಪಿ.ಎಂ.ಸಿ. ಮಿಲ್‌ ಮಾಲಕರೊಂದಿಗೆ ಜಂಟಿ ಸಭೆ ನಡೆಸಿ ಈ ಬಗ್ಗೆ ಮಿಲ್‌ ಮಾಲಕರಿಗೆ ಮಾರ್ಗದರ್ಶನ ನೀಡುವ ಕೆಲಸ ಶೀಘ್ರದಲ್ಲೇ ನಡೆಯಲಿದೆ.
-ಪೂರ್ಣಿಮಾ,
ಜಂಟಿ ನಿರ್ದೇಶಕರು ಕೃಷಿ ಇಲಾಖೆ ಉಡುಪಿ

ಹೋರಾಟ ಅನಿವಾರ್ಯ
ಅಕ್ಕಿಗಿರಣಿಗಳ ಮಾಲಕರು ಈ ಬಾರಿಯೂ ಕಡಿಮೆ ದರ ನೀಡಿದರೆ ಜಿಲ್ಲಾದ್ಯಂತ ರೈತ ಸಂಘಟನೆಗಳ ಮೂಲಕ ಹೋರಾಟಕ್ಕೆ ಕರೆ ನೀಡಲಾಗುವುದು. ರೈತರು ಎಷ್ಟೇ ಕಷ್ಟವಾದರೂ ಕನಿಷ್ಠ ಬೆಲೆಗೆ ಭತ್ತ ಮಾರಾಟ ಮಾಡಬಾರದು. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದು ಸಮಸ್ಯೆಗೆ ಪರಿಹಾರ ನೀಡಬಹುದು ಎನ್ನುವ ನಿರೀಕ್ಷೆ ಇದೆ.
-ಜಯರಾಮ್‌ ಶೆಟ್ಟಿ ಮಣೂರು,
ರೈತಧ್ವನಿ ಸಂಘಟನೆ ಅಧ್ಯಕ್ಷರು

ಸಭೆ ಕರೆದು ಮಾತನಾಡುವೆ
ಅಕ್ಕಿ ಗಿರಣಿ ಮಾಲಕರು ಭತ್ತವನ್ನು 22-23 ರೂ. ಗೆ ಕೇಳುತ್ತಿದ್ದಾರೆ. ಈ ರೀತಿಯ ದರ ಕುಸಿತ ಯಾವತ್ತೂ ಆಗಿಲ್ಲ ಎಂದು ಕೆಲವು ಸಂಘಟನೆಗಳು ತಿಳಿಸಿವೆ. ಈ ಬಗ್ಗೆ ಗಿರಣಿ ಮಾಲಕರು ಹಾಗೂ ರೈತರ ಸಭೆ ಕರೆದು ಚರ್ಚಿಸಿ ರೈತರ ಹಿತ ಕಾಪಾಡಲಾಗುವುದು.
-ಡಾ| ವಿದ್ಯಾ ಕುಮಾರಿ,
ಜಿಲ್ಲಾಧಿಕಾರಿಗಳು ಉಡುಪಿ

 

ಟಾಪ್ ನ್ಯೂಸ್

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

3-chitradurga

Chitradurga: ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು; ಓರ್ವ ಸಾವು

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರಿ ಸೊತ್ತುಗಳ ರಕ್ಷಣೆಗೆ ಸೂಕ್ತ ಕ್ರಮ; ಒತ್ತುವರಿ ಭೂಮಿಗೆ ಬೇಲಿ!

Land: ಸರಕಾರಿ ಸೊತ್ತುಗಳ ರಕ್ಷಣೆಗೆ ಸೂಕ್ತ ಕ್ರಮ; ಒತ್ತುವರಿ ಭೂಮಿಗೆ ಬೇಲಿ!

Udupi: ನವರಾತ್ರಿಗೆ ವಿಶೇಷ ಅತಿಥಿ ಸಿ/2023 ಎ3 ಧೂಮಕೇತು

Udupi: ನವರಾತ್ರಿಗೆ ವಿಶೇಷ ಅತಿಥಿ ಸಿ/2023 ಎ3 ಧೂಮಕೇತು

Udayavani: ನವರೂಪದಲ್ಲಿ ಪಾಲ್ಗೊಂಡು ಸಂಭ್ರಮಿಸಿ; ಇಂದಿನಿಂದ ನವರೂಪ -ನವರಾತ್ರಿ

Udayavani: ನವರೂಪದಲ್ಲಿ ಪಾಲ್ಗೊಂಡು ಸಂಭ್ರಮಿಸಿ; ಇಂದಿನಿಂದ ನವರೂಪ -ನವರಾತ್ರಿ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Karkala: ಕಾರು ಹರಿದು ಪಾದಚಾರಿ ಸಾವು

Karkala: ಕಾರು ಹರಿದು ಪಾದಚಾರಿ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-sirawara

Sirawara ಬಂದ್ ಗೆ ಕರೆ: ಪಟ್ಟಣ ಸ್ತಬ್ಧ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

4

Bengaluru: ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ 6 ಸುತ್ತು ಗುಂಡು; ಉದ್ಯಮಿ ಬಂಧನ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.