Udupi: ನವರಾತ್ರಿಗೆ ವಿಶೇಷ ಅತಿಥಿ ಸಿ/2023 ಎ3 ಧೂಮಕೇತು


Team Udayavani, Oct 3, 2024, 7:20 AM IST

Udupi: ನವರಾತ್ರಿಗೆ ವಿಶೇಷ ಅತಿಥಿ ಸಿ/2023 ಎ3 ಧೂಮಕೇತು

ಉಡುಪಿ: ಈ ಬಾರಿಯ ನವರಾತ್ರಿಗೆ ಆಕಾಶದಲ್ಲಿ ಅತಿಥಿಯ ದರ್ಶನವಾಗಲಿದೆ. ಅದುವೇ ಇ/2023 ಅ3 ಹೆಸರಿನಿಂದ ಗುರುತಿಸಲ್ಪಟ್ಟ ಧೂಮಕೇತು.

ಒಂದು ಧೂಳು ಹಾಗೂ ಹಿಮ-ಕಲ್ಲಿನ ಉಂಡೆಯು, ಸೌರಮಂಡಲದ ಅಂಚಿನಿಂದ ಸುಮಾರು ಲಕ್ಷ ವರ್ಷಗಳ ಹಿಂದೆ ತನ್ನ ಸ್ಥಾನದಿಂದ ಸೂರ್ಯನ ಸುತ್ತ ಒಂದು ಕಕ್ಷೆಯಲ್ಲಿ ಹೊರಟಿತ್ತು. ಇದನ್ನು ಹಿಂದಿನ ವರ್ಷ ಚೀನದ ತ್ಸುಚಿನ್ಶಾನ್‌ ಒಬ್ಸರ್ವೆಟರಿ ಮತ್ತು ದಕ್ಷಿಣ ಆಫ್ರಿಕಾದ ಅಟ್ಲಾಸ್‌ ಒಬ್ಸರ್ವೆಟರಿಯ ಖಗೋಳಶಾಸ್ತ್ರಜ್ಞರು 2023ರ ಜ. 9ರಂದು ಸೆರೆಹಿಡಿದರು. ಇದು ಆವರ್ತಕವಲ್ಲದ ಧೂಮಕೇತು. ಇದು ಜನವರಿ ತಿಂಗಳ ಮೊದಲಾರ್ಧದಲ್ಲಿ ಮೊದಲನೇ ಬಾರಿ ವೀಕ್ಷಿಸಿರುವ 3ನೇ ಧೂಮಕೇತು.

ಆವರ್ತಕವಲ್ಲದ ಧೂಮಕೇತುಗಳೆಲ್ಲ ಸೌರಮಂಡಲ ಹೊರಭಾಗದಲ್ಲಿ ಊರ್ಟ್‌ ಕ್ಲೌಡ್ ನಿಂದ ಬರುತ್ತವೆ. ಈ ಊರ್ಟ್‌ ಕ್ಲೌಡ್ ಸೂರ್ಯನಿಂದ ಸುಮಾರು 2000 ಖಗೋಳಮಾನ(1 ಖಗೋಳ ಮಾನ = 150 ಮಿಲಿಯ ಕಿ.ಮೀ.: ಭೂಮಿ-ಸೂರ್ಯನ ಮಧ್ಯದ ಅಂತರ)ದಿಂದ ಪ್ರಾರಂಭವಾಗಿ ಸುಮಾರು 2 ಲಕ್ಷ ಖಗೋಳಮಾನದ ವರೆಗೆ ವಿಸ್ತರಿಸುತ್ತದೆ. ಇಲ್ಲಿ ಕೋಟ್ಯಂತರ ಹಿಮ-ಕಲ್ಲಿನ ಉಂಡೆಗಳು ಉಂಟಾಗಿವೆ. ಇ/2023 ಅ3 ಕೂಡ ಈ ಸ್ಥಳದಿಂದಲೇ ಹೊರಟು ಸೂರ್ಯನೆಡೆ ಸಾಗಿದೆ.

ಪ್ರಕಾಶಮಾನ
ಈ ಧೂಮಕೇತುವು ಸೂರ್ಯನ ಸುತ್ತ ಒಂದು ಸುಧೀರ್ಘ‌ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತಿದೆ. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪವಾಗಿ ಈ ವರ್ಷದ ಸೆ. 27ರಂದು 5.8 ಕೋಟಿ ಕಿ.ಮೀ. ದೂರದಲ್ಲಿತ್ತು. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತಿ ಸಮೀಪಕ್ಕೆ ಬಂದು ತನ್ನ ಕಕ್ಷೆಯಲ್ಲಿ ಹಾದುಹೋಗುತ್ತಾ ಭೂಮಿಗೆ ಸಮೀಪವಾಗಿ ಈ ಧೂಮಕೇತುವು ಅ.12ರಂದು ಸುಮಾರು 70,67,200ಕಿ. ಮೀ. ದೂರದಲ್ಲಿ 80.5 ಕಿ. ಮೀ. ಪ್ರತಿ ಸೆಕೆಂಡ್‌ನ‌ಷ್ಟು ವೇಗದಲ್ಲಿ ಹಾದು ಹೋಗುತ್ತದೆ. ಈ ಸಮಯವು ಈ ಧೂಮಕೇತು ಗೋಚರಿಸಲು ಪ್ರಕಾಶಮಾನವಾಗಿರುತ್ತದೆ.

ನಕ್ಷತ್ರಗಳ ಗೋಚರ
ಪ್ರಸ್ತುತ ಈ ಧೂಮಕೇತುವು ಮುಂಜಾನೆ 5ರಿಂದ 5.45ರ ನಡುವೆ ಪೂರ್ವ ಕ್ಷಿತಿಜದ ಕಡೆ ಗೋಚರಿಸುತ್ತದೆ. ಮುಂಜಾನೆ ಪೂರ್ವದಲ್ಲಿ ಕ್ಷಿತಿಜದಿಂದ ಸುಮಾರು 25 ಡಿಗ್ರಿ ಎತ್ತರದಲ್ಲಿ ಸಿಂಹ ರಾಶಿಯ ಮಖಾ ನಕ್ಷತ್ರ (ರೆಗ್ಯುಲಸ್‌) ಹಾಗು ಅಜಗರ ನಕ್ಷತ್ರಪುಂಜದ ಅಲ್ಫಾರ್ಡ್‌ ನಕ್ಷತ್ರಗಳು ಗೋಚರಿಸುತ್ತಿವೆ.

ವೀಕ್ಷಣೆ ಸಾಧ್ಯ
ನಮ್ಮ ಕೈಯನ್ನು ನೇರವಾಗಿ, ಕಿರುಬೆರಳು ಹಾಗು ಹೆಬ್ಬೆರಳನ್ನು ಚಾಚಿ ಹಿಡಿದುಕೊಂಡರೆ ಇವೆರಡರ ಮಧ್ಯಾಂತರ 25 ಡಿಗ್ರಿ ಆಗಿರುತ್ತದೆ. ಹಾಗಾಗಿ ಈ ಎರಡು ನಕ್ಷತ್ರಗಳನ್ನು ಕ್ಷಿತಿಜದಿಂದ 25 ಡಿಗ್ರಿ ದೂರದಲ್ಲಿ ಗುರುತಿಸಬಹುದು. ಈ ಎರಡು ನಕ್ಷತ್ರಗಳನ್ನು ಉಪಯೋಗಿಸಿ ಕ್ಷಿತಿಜದ ಕಡೆ ಸಮಬಾಹು ತ್ರಿಕೋನವನ್ನು ಕಲ್ಪಿಸಿದರೆ, ಆ ತ್ರಿಕೋನದ ಮೂರನೆಯ ಶೃಂಗ ಇರುವಲ್ಲಿ ಈ ಧೂಮಕೇತುವನ್ನು ಗುರುತಿಸಬಹುದು. ಈ ಧೂಮಕೇತುವು ಅ.7ರ ವರೆಗೆ ಮ್ಯಾಗ್ನಿಟ್ಯೂಡ್‌ 2.0ರಷ್ಟು ಪ್ರಮಾಣದಲ್ಲಿ ಗೋಚರಿಸುತ್ತದೆ (ಮ್ಯಾಗ್ನಿಟ್ಯೂಡ್‌ ಕಿರಿದಾದಷ್ಟು ಕಾಯವು ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಬರಿಗಣ್ಣಿನಲ್ಲೂ ನೋಡಲು ಸಾಧ್ಯ. ಈ ಅವಧಿಯಲ್ಲಿ ಈ ಧೂಮಕೇತುವನ್ನು ಗೋಚರಿಸಲು ಸಾಧ್ಯವಾಗದಿದ್ದರೆ ಅ.15ರಿಂದ 30ರ ವರೆಗೆ ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ (ಉತ್ತರ ದಿಕ್ಕಿನಲ್ಲಿ) ಗುರುತಿಸಬಹುದು. ದೂರಬಿನ್‌ ಅಥವಾ ಸಣ್ಣ ದೂರದರ್ಶಕದ ಮೂಲಕ ಈ ಧೂಮಕೇತುವನ್ನು ಈ ಅವಧಿಯಲ್ಲಿ ನೋಡಿ ಆನಂದಿಸಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಮಣಿಪಾಲ್‌ ಸೆಂಟರ್‌ ಫಾರ್‌ ನ್ಯಾಚುರಲ್‌ ಸೈನ್ಸಸ್‌ನ ರಿಸರ್ಚ್‌ ಸ್ಕಾಲರ್‌ ಅತುಲ್‌ ಭಟ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

3-chitradurga

Chitradurga: ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು; ಓರ್ವ ಸಾವು

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರಿ ಸೊತ್ತುಗಳ ರಕ್ಷಣೆಗೆ ಸೂಕ್ತ ಕ್ರಮ; ಒತ್ತುವರಿ ಭೂಮಿಗೆ ಬೇಲಿ!

Land: ಸರಕಾರಿ ಸೊತ್ತುಗಳ ರಕ್ಷಣೆಗೆ ಸೂಕ್ತ ಕ್ರಮ; ಒತ್ತುವರಿ ಭೂಮಿಗೆ ಬೇಲಿ!

Udayavani: ನವರೂಪದಲ್ಲಿ ಪಾಲ್ಗೊಂಡು ಸಂಭ್ರಮಿಸಿ; ಇಂದಿನಿಂದ ನವರೂಪ -ನವರಾತ್ರಿ

Udayavani: ನವರೂಪದಲ್ಲಿ ಪಾಲ್ಗೊಂಡು ಸಂಭ್ರಮಿಸಿ; ಇಂದಿನಿಂದ ನವರೂಪ -ನವರಾತ್ರಿ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

Karkala: ಕಾರು ಹರಿದು ಪಾದಚಾರಿ ಸಾವು

Karkala: ಕಾರು ಹರಿದು ಪಾದಚಾರಿ ಸಾವು

Adiudupi: ಎಪಿಎಂಸಿ ಮಾರುಕಟ್ಟೆಗೆ ದಾಳಿ: 12 ಟನ್‌ ಚೀನ ಬೆಳ್ಳುಳ್ಳಿ ವಶಕ್ಕೆ

Adiudupi: ಎಪಿಎಂಸಿ ಮಾರುಕಟ್ಟೆಗೆ ದಾಳಿ: 12 ಟನ್‌ ಚೀನ ಬೆಳ್ಳುಳ್ಳಿ ವಶಕ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-sirawara

Sirawara ಬಂದ್ ಗೆ ಕರೆ: ಪಟ್ಟಣ ಸ್ತಬ್ಧ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

4

Bengaluru: ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ 6 ಸುತ್ತು ಗುಂಡು; ಉದ್ಯಮಿ ಬಂಧನ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Bengaluru: ಮ್ಯಾನೇಜರ್‌ಗೆ ಇರಿಯಲು ಬಂದು ಕಂಡಕ್ಟರ್‌ಗೆ ಇರಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.