BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್ಬಾಸ್ನಿಂದ ಹೊರ ಹೋಗ್ತೇನೆ – ಜಗದೀಶ್
ನಾನು ಮನಸ್ಸು ಮಾಡಿದ್ರೆ ಬಿಗ್ ಬಾಸ್ ಬಾಗಿಲನ್ನೇ ಉಡಾಯಿಸಿ ಬಿಡ್ತೇನೆ..
Team Udayavani, Oct 3, 2024, 1:13 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada)ದ ಆರಂಭಿಕ ವಾರದಲ್ಲೇ ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ.
ಶೋ ಶುರುವಾದ ಎರಡು – ಮೂರುದಿನದಲ್ಲೇ ʼಸ್ವರ್ಗ – ನರಕʼವಾಗಿದ್ದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಟಾಸ್ಕ್ , ನಿಯಮ ಎಲ್ಲವನ್ನೂ ಕೆಲ ಸ್ಪರ್ಧಿಗಳ ಉಲ್ಲಂಘಿಸುವ ಮೂಲಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಗಳವೇ ಹೈಲೈಟ್ ಆಗುವಂತೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗದು.
ಚೈತ್ರಾ ಕುಂದಾಪುರ, ಯುಮುನಾ ಅವರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ʼವಕೀಲ್ ಸಾಬ್ʼ ಜಗದೀಶ್(Lawyer Jagadish) ಅವರ ಡಾಮಿನೇಟ್ ಗೇಮ್ ಬಿಗ್ ಬಾಸ್ ಸಹ ಸ್ಪರ್ಧಿಗಳು ಗರಂ ಆಗುವಂತೆ ಮಾಡಿದೆ.
ಟಾಸ್ಕ್ ವಿಚಾರಕ್ಕೆ ಸಂಬಂಧಪಟ್ಟಂತೆ ಧನರಾಜ್ ಅವರನ್ನು ಒಂದು ರೀತಿ ವ್ಯಂಗ್ಯವಾಗಿಸಿಕೊಂಡು ಮಾತನಾಡಿದ ಜಗದೀಶ್ ಆ ಬಳಿಕ ಮಾನಸ ಅವರಿಗೆ ಯಾವ ಸೀಮೆ ಹೆಣ್ಣು ಎಂದು ಹೇಳಿದ್ದರು. ಇದಾದ ನಂತರ ಉಗ್ರಂ ಮಂಜು, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ ಅವರ ಜತೆಯೂ ಜಗದೀಶ್ ಮಾತಿನ ಮಲ್ಲಯುದ್ಧವನ್ನು ನಡೆಸಿದ್ದಾರೆ.
ನಾನು ಆಚೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್ ಕ್ಯಾಮೆರಾ ಮುಂದೆ ಹೇಳಿದ್ದಾರೆ.
ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/84xuWaEJVq
— Colors Kannada (@ColorsKannada) October 3, 2024
“ನಾನಿಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕಾರ್ಯಕ್ರಮದಿಂದ ಹೊರ ನಡೆಯುವುದಕ್ಕೆ ಇಷ್ಟಪಡುತ್ತೇನೆ. ನಾನು ಮನಸ್ಸು ಮಾಡಿದರೆ ಈಗ ಹೆಲಿಕಾಪ್ಟರ್ ಕೂಡ ತರಿಸುತ್ತೇನೆ. ಆ ಸಾಮರ್ಥ್ಯ ನನ್ನಲ್ಲಿದೆ. ಹೊರಗಡೆ ನೀವೆಲ್ಲಾ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರೋ ಅದೆಲ್ಲವನ್ನು ಬಯಲು ಮಾಡುತ್ತೇನೆ. ನಾನು ಸರ್ಕಾರವನ್ನೇ ನಿಲ್ಲಿಸಿದವನು. ಈ ಡೋರ್ ಅನ್ನೇ ಉಡಾಯಿಸಿ ಬಿಡ್ತೇನೆ. ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನೋಡು. ಯಾವನೂ ಕೂಡ ಇಲ್ಲಿಗೆ ಕಾಲಿಡಲ್ಲ ಹಾಗೆ ಮಾಡ್ತೇನೆ. ನನ್ನ ಹೆಸರು ಬರೆದಿಡು. ನಮ್ಮನ್ನು ಎದುರಿಸಿ ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ, ಓಡಿಸಿ..” ಎಂದು ಜಗದೀಶ್ ಅವರು ಓಪನ್ ಚಾಲೇಂಜ್ ಹಾಕಿರುವ ಪ್ರೋಮೊವನ್ನು ತೋರಿಸಲಾಗಿದೆ.
ಇಂದು ರಾತ್ರಿ(ಅ.3ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11:ಬಿಗ್ಬಾಸ್ ಸ್ಪರ್ಧಿ ಜಗದೀಶ್ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್ ಸಂಬರಗಿ
BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್
Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ
BBK11: ಬಿಗ್ಬಾಸ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಕಾಮಿಡಿಯನ್ ಧನರಾಜ್; ಅಂಥದ್ದೇನಾಯ್ತು
BBK11: ಹಸ್ತ ರೇಖೆ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ; ಮಧು ಬಂಗಾರಪ್ಪ ಭರವಸೆ
Paru Parvathy Movie: ಇನ್ಫಿನಿಟಿ ರೋಡ್ನಲ್ಲಿ ಪಾರ್ವತಿ!
Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ
Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ
Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್ ರೊಕ್ಸ್ ಬುಕ್ಕಿಂಗ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.