Controversial statement; ಬಾಯಿ ತಪ್ಪಿ ಸಮಂತಾ ಬಗ್ಗೆ ಮಾತನಾಡಿದ್ದೆ: ಸುರೇಖಾ
Team Udayavani, Oct 4, 2024, 6:00 AM IST
ಹೈದರಾಬಾದ್: ನಟಿ ಸಮಂತಾ ರುತ್ಪ್ರಭು ಹಾಗೂ ನಾಗಚೈತನ್ಯ ವಿಚ್ಛೇದನದ ಕುರಿತು ವಿವಾದ ಸೃಷ್ಟಿಸಿದ್ದ ತೆಲಂಗಾಣ ಸಚಿವೆ ಕೊಂಡ ಸುರೇಖಾ ತಮ್ಮ ಹೇಳಿಕೆ ಯನ್ನು ಹಿಂಪಡೆದಿರುವುದಾಗಿ ಹೇಳಿ ದ್ದಾರೆ. ನಟರ ವೈಯಕ್ತಿಕ ಜೀವನದ ಬಗ್ಗೆ ಬಾಯಿ ತಪ್ಪಿ ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆ ಗಳಿಂದ ಅವರ ಕುಟುಂಬಕ್ಕೆ ನೋವುಂಟಾಗಿದೆ. ಅದರಿಂದ ನನಗೂ ಬೇಸರವಾಗಿದ್ದು, ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ ಎಂದು ಸಚಿವೆ ಹೇಳಿದ್ದಾರೆ.
ಆದರೆ ಕೆ.ಟಿ.ರಾಮರಾವ್ ಬಗ್ಗೆ ಹೇಳಿದ ಮಾತುಗಳನ್ನು ಹಿಂದಕ್ಕೆ ಪಡೆ ಯು ವುದಿಲ್ಲ, ಅವರು ಕ್ಷಮೆ ಕೇಳಬೇಕು, ಅವರು ನೀಡಿರುವ ಮಾನನಷ್ಟ ದೂರಿನ ಬಗ್ಗೆ ಕೂನೂನು ಪ್ರಕಾರವೇ ಉತ್ತರಿ ಸುತ್ತೇನೆ ಎಂದಿದ್ದಾರೆ.
ಸುರೇಖಾ ಹೇಳಿಕೆಗೆ ಅಕ್ಕಿನೇನಿ ನಾಗಾ ರ್ಜುನ ನಾಮಪಳ್ಳಿ ಕೋರ್ಟ್ನಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ. ಇಡೀ ತೆಲುಗು ಚಿತ್ರರಂಗ ಸುರೇಖಾ ಹೇಳಿಕೆಯನ್ನು ಖಂಡಿಸಿದೆ. ವಿವಾದದ ಕಾವು ಏರುತ್ತಿರುವಂತೆಯೇ ತೆಲಂಗಾಣ ಸರಕಾರ ವಿವಾದಿಂದ ದೂರ ಸರಿದಿದೆ. ಸಚಿವೆ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ ವಿವಾದ ಮುಂದುವರಿಸುವುದು ಬೇಡ ಎಂದು ತೆಲುಗು ಚಿತ್ರರಂಗಕ್ಕೆ ಸರಕಾರ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.