Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Team Udayavani, Oct 4, 2024, 8:16 AM IST
ಜೆರುಸಲೇಂ: ಬೈರುತ್ ನಲ್ಲಿ ಇಸ್ರೇಲಿ ದಾಳಿ ಮುಂದುವರಿದಿದ್ದು, ಹಿರಿಯ ಹಿಜ್ಬುಲ್ಲಾ ಅಧಿಕಾರಿ ಹಶೆಮ್ ಸಫೀದ್ದೀನ್ (Hashem Safieddine) ನನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪಾದ ಹಿಜ್ಬುಲ್ಲಾ (Hezbollah) ಮುಂದಿನ ನಾಯಕ ಎಂದು ಹಶೆಮ್ ಸಫಿದ್ದೀನ್ ನನ್ನು ಕರೆಯಲಾಗುತ್ತಿದೆ. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ನನ್ನು ಇತ್ತೀಚೆಗೆ ಇಸ್ರೇಲ್ ಹತ್ಯೆ ಮಾಡಿದೆ.
ಆದರೆ, ಹಶೆಮ್ ಸಫೀದ್ದೀನ್ ಮೇಲಿನ ದಾಳಿಯ ಬಗ್ಗೆ ಇಸ್ರೇಲಿ ರಕ್ಷಣಾ ಪಡೆಗಳು (IDF) ಅಥವಾ ಲೆಬನಾನ್ ನಲ್ಲಿರುವ ಹಿಜ್ಬುಲ್ಲಾದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಭೂಗತ ಬಂಕರ್ ನಲ್ಲಿ ಹಿರಿಯ ಹಿಜ್ಬುಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಫೀದ್ದೀನ್ ಭಾಗವಹಿಸುತ್ತಿದ್ದಾಗ ಇಸ್ರೇಲ್ ಗುರುವಾರ ಮಧ್ಯರಾತ್ರಿ ವಾಯುದಾಳಿ ನಡೆಸಿದೆ. ಇಸ್ರೇಲ್ ನಸ್ರಲ್ಲಾನನ್ನು ಕೊಂದ ನಂತರ ಈ ಪ್ರದೇಶದಲ್ಲಿ ನಡೆದ ದೊಡ್ಡ ಬಾಂಬ್ ಸ್ಫೋಟವು ಇದಾಗಿದೆ.
ಲೆಬನಾನಿನ ಮಾಧ್ಯಮವನ್ನು ಉಲ್ಲೇಖಿಸಿದ ಸುದ್ದಿವಾಹಿನಿ ಆಕ್ಸಿಯೋಸ್ ಪ್ರಕಾರ, ಈ ಇಸ್ರೇಲಿ ದಾಳಿಯು ನಸ್ರಲ್ಲಾನನ್ನು ಕೊಂದ ದಾಳಿಗಿಂತ ದೊಡ್ಡದಾಗಿದೆ. ಮೃತಪಟ್ಟವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
2017 ರಲ್ಲಿ ಯುನೈಟೆಡ್ ಸ್ಟೇಟ್ಸ್ನಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಹಶೆಮ್ ಸಫಿದ್ದೀನ್, ಹಿಜ್ಬುಲ್ಲಾದ ರಾಜಕೀಯ ವ್ಯವಹಾರಗಳಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾನೆ. ಅದರ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಗುಂಪಿನ ಜಿಹಾದ್ ಕೌನ್ಸಿಲ್ ನ ಸದಸ್ಯನಾಗಿದ್ದಾನೆ. ನಸ್ರಲ್ಲಾನ ಸೋದರ ಸಂಬಂಧಿ, ಸಫಿದ್ದೀನ್ ನನ್ನು ಹಿಜ್ಬುಲ್ಲಾದಲ್ಲಿ ‘ಎರಡನೇ ನಾಯಕ’ ಎಂದು ಪರಿಗಣಿಸಲಾಗಿದೆ. ಈತ ಇರಾನ್ ಆಡಳಿತದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು
ಗ್ವಾಟೆಮಾಲಾ ಗಡಿಯಲ್ಲಿ ಮೆಕ್ಸಿಕೋ ಸೇನೆಯಿಂದ ಗುಂಡಿನ ದಾಳಿ-6 ವಲಸಿಗರು ಮೃತ್ಯು
Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್ ಈಗ ಸ್ಫೋಟ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kalaburagi: ಅಧಿಕಾರಿಗಳಿಗೆ ಕೊಬ್ಬು ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್
Darshan Bail: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ: ಕುತೂಹಲ
Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ
Bantwala: ಹುಲಿ ಕುಟುಂಬದಲ್ಲಿ ಆಕೆ ಬ್ಲ್ಯಾಕ್ ಟೈಗರ್!
Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.