Bantwala: ಹುಲಿ ಕುಟುಂಬದಲ್ಲಿ ಆಕೆ ಬ್ಲ್ಯಾಕ್‌ ಟೈಗರ್‌!

16 ವರ್ಷಗಳಿಂದ ವೇಷ ಹಾಕುವ ಬಂಟ್ವಾಳದ ಪೂಜಾ; ಅವರ ಮನೆಯಲ್ಲಿ ಎಲ್ಲರೂ ಹುಲಿಗಳೇ!

Team Udayavani, Oct 4, 2024, 12:50 PM IST

2(2)

ಬಂಟ್ವಾಳ: ಬಂಟ್ವಾಳದ ಕುಟುಂಬವೊಂದು ಕಳೆದ ಆರೇಳು ದಶಕಗಳಿಂದ ನವರಾತ್ರಿಯ ಸಂದರ್ಭದಲ್ಲಿ ಹುಲಿ ವೇಷದ ಸೇವೆ ನೀಡುತ್ತಾ ಬಂದಿದೆ. ಆ ಕುಟುಂಬದ ಹೆಚ್ಚಿನವರು ವೇಷ ಹಾಕುತ್ತಾರೆ, ಅದರಲ್ಲಿ ಆ ಯುವತಿ ಬ್ಲ್ಯಾಕ್‌ ಟೈಗರ್‌ ಆಗಿ ಎಲ್ಲರ ಮನ ಗೆದ್ದಿದ್ದಾರೆ.

ಇದು ಬಂಟ್ವಾಳದ ಭಂಡಾರಿಬೆಟ್ಟಿನ ರತ್ನಾಕರ ಸಾಲ್ಯಾನ್‌ ಅವರ ಕುಟುಂಬದ ಕಥೆ. ಬ್ಲ್ಯಾಕ್‌ ಟೈಗರ್‌ ಆಗಿ ಮಿಂಚುತ್ತಿರುವುದು ಅವರ ಪುತ್ರಿ 22 ವರ್ಷದ ಪೂಜಾ. ತನ್ನ 6ನೇ ವಯಸ್ಸಿನಲ್ಲೇ ಹುಲಿ ವೇಷ ಹಾಕಲು ಶುರು ಮಾಡಿದ ಪೂಜಾ ಈಗ ಹೊಸತನದಿಂದ ಸೈ ಅನಿಸಿಕೊಂಡಿದ್ದಾರೆ.

ಹುಲಿ ವೇಷದಲ್ಲಿ ತೊಡಗಿರುವ ಕುಟುಂಬ
ರತ್ನಾಕರ ಸಾಲ್ಯಾನ್‌ ಅವರ ತಂದೆ ಮಾಂಕು ಅವರ ಶಾರ್ದೂಲ ವೇಷ ಭಾರಿ ಪ್ರಸಿದ್ಧ. ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅವರು ಸೇವೆ ನೀಡುತ್ತಿದ್ದರು. ಅವರ ಬಳಿಕ ಪುತ್ರ ರತ್ನಾಕರ ಸಾಲ್ಯಾನ್‌ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಾರಂಭದ ಮೂರು ರತ್ನಾಕರ್‌ ತಂದೆಯ ಹೆಸರಿನಲ್ಲಿ ಶಾರ್ದೂಲ ವೇಷವನ್ನೇ ಇಳಿಸಿದ್ದರು. ಬಳಿಕ ಕಳೆದ 43 ವರ್ಷಗಳಿಂದ ಹುಲಿ ವೇಷದ ಸೇವೆ ನೀಡುತ್ತಿದ್ದಾರೆ.

ಈ ಸೇವೆಯಲ್ಲಿ ಅವರ ಕುಟುಂಬವಿಡೀ ಸೇರಿಕೊಳ್ಳುತ್ತಿದೆ. ರತ್ನಾಕರ್‌ ಅವರ ಅಣ್ಣ ಮತ್ತು ತಮ್ಮ ಹುಲಿ ವೇಷ ಹಾಕುತ್ತಾರೆ. ಹಿರಿಯ ಪುತ್ರಿ ಪೂರ್ಣಿಮಾ ಸಣ್ಣ ವಯಸ್ಸಿನಲ್ಲಿ ವೇಷ ಹಾಕಿದ್ದರು. ಈಗ 16 ವರ್ಷಗಳಿಂದ ಪೂಜಾ ಜತೆಯಲ್ಲಿದ್ದಾರೆ. ಅಣ್ಣನ ಮಗ ಧೀರಜ್‌, ತಮ್ಮನ ಮಕ್ಕಳಾದ ಅಖೀಲ್‌, ನಿಖೀಲ್‌ ಕೂಡಾ ವೇಷ ಹಾಕುತ್ತಾರೆ. ಪುತ್ರ ಪುನೀತ್‌ ಅವರದು ತಾಸೆಯ ಸಹಕಾರ. ಸಾಲ್ಯಾನ್‌ ಅವರು ಹುಲಿಯ ಮುಖದ ತಯಾರಿಯ ಕೆಲಸವನ್ನೂ ಮಾಡುತ್ತಾರೆ.

ತಾಸೆಯ ಪೆಟ್ಟಿಗೆ ಕುಣಿಯುವ ಹುಚ್ಚು
ಪ್ರಾರಂಭದಲ್ಲಿ ಮನೆಯವರು ವೇಷ ಹಾಕಿಸಿದ್ದು. ಬಳಿಕ ನನ್ನ ಆಸಕ್ತಿಯಿಂದಲೇ ಬೆಳೆದೆ. ಎಲ್ಲಾ ಕಡೆಯಲ್ಲೂ ಉತ್ತಮ ಗೌರವ ಸಿಗುತ್ತಿದ್ದು, ಈಗ ತಾಸೆಯ ಪೆಟ್ಟು ಕೇಳುವಾಗಲೇ ಕುಣಿಯಬೇಕು ಅನಿಸುವಷ್ಟು ಹುಚ್ಚು ಹಿಡಿಸಿದೆ.
-ಪೂಜಾ ಬ್ಲ್ಯಾಕ್‌ ಟೈಗರ್‌ ಖ್ಯಾತಿಯ ಯುವತಿ

ಯೋಗಪಟು, ನೃತ್ಯಗಾರ್ತಿ ಪೂಜಾ
ಪೂಜಾ 2ನೇ ಕ್ಲಾಸಿನಲ್ಲಿದ್ದಾಗ ಮೊದಲ ಬಾರಿ ಬಣ್ಣ ಹಚ್ಚಿದ್ದರು. ನವರಾತ್ರಿ ವೇಳೆ ತಂದೆಯ ತಂಡದಲ್ಲಿ ಕುಣಿಯುವ ಆಕೆ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯ ಸಂದರ್ಭ ಮಂಗಳೂರು, ಉಡುಪಿ, ಮೂಡುಬಿದಿರೆಯ ತಂಡಗಳಲ್ಲಿ ಪ್ರದ ರ್ಶನ ನೀಡುತ್ತಾರೆ. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಆಕೆ ಯೋಗ, ನೃತ್ಯಾಭ್ಯಾಸವನ್ನೂ ಮಾಡಿದ್ದಾರೆ. ಬಂಟ್ವಾಳ ಎಸ್‌ವಿಎಸ್‌ ದೇವಳ ಶಾಲೆಯಲ್ಲಿ ಯೋಗ ತರಬೇತಿ ನೀಡುವ ಜತೆಗೆ ವಿವಿಧ ಶಾಲೆಗಳಿಗೆ ಕೊರಿಯೊಗ್ರಾಫ‌ರ್‌ ಆಗಿ ಹೋಗುತ್ತಾರೆ. ಈ ಬಾರಿ ಅ. 13ರಂದು ಊದು ಪೂಜೆ ನಡೆದು ಅ. 14ರಂದು ಹುಲಿವೇಷ ಹಾಕಲಿದ್ದಾರೆ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

11-kukke

Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

10-sagara

Sagara: ಬಾಣಂತಿಗೆ ಕಪಾಳಮೋಕ್ಷ; ಪ್ರಸೂತಿ ವೈದ್ಯರ ವಿರುದ್ಧ ಪ್ರಕರಣ ದಾಖಲು

Retro style trends in social media

Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kukke

Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್

3

Bantwala ಬೈಪಾಸ್‌ ಜಂಕ್ಷನ್‌ ಅವ್ಯವಸ್ಥೆ; ಹೆಚ್ಚುತ್ತಿರುವ ಅಪಘಾತ 

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

8-bantwala-1

Bantwala: ದ್ವಿಚಕ್ರಗಳೆರಡರ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

Subramanya: ಇಂದಿನಿಂದ ಕುಮಾರ ಪರ್ವತ ಚಾರಣ

Subramanya: ಇಂದಿನಿಂದ ಕುಮಾರ ಪರ್ವತ ಚಾರಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

11-kukke

Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.