Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

ಕೃಷಿ ಬದುಕಿನ ಭಾಗ ಹೊಸತು ಹಬ್ಬ-ಕದಿರು ಕಟ್ಟುವ ಹಬ್ಬ ಸಾಂಪ್ರದಾಯಿಕ ಆಚರಣೆ

Team Udayavani, Oct 4, 2024, 1:20 PM IST

4(1)

ತೆಕ್ಕಟ್ಟೆ: ನಿಸರ್ಗದೊಂದಿಗೆ ಬೆರೆತಿರುವ ಗ್ರಾಮೀಣ ಕೃಷಿಕರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಹೊಸತು ಹಬ್ಬ (ಕದಿರು ಕಟ್ಟುವ ಹಬ್ಬ)ವನ್ನು ನವರಾತ್ರಿಯ ಎರಡನೇ ದಿನವಾದ ಗುರುವಾರ ಹೆಚ್ಚಿನ ಕಡೆ ಆಚರಿಸಲಾಯಿತು. ನವರಾತ್ರಿಯ ಬೇರೆ ಬೇರೆ ದಿನಗಳಲ್ಲಿ ಇದರ ಆಚರಣೆ ನಡೆಯುತ್ತದೆ. ತಾವು ಬೆಳೆದ ಭತ್ತದ ಪೈರಿನ ಹೊಸ ಫ‌ಲವನ್ನು ಗ್ರಾಮಸ್ಥರು ಒಂದಾಗಿ ದೇವರಿಗೆ ಸಮರ್ಪಿಸಿ ಅಲ್ಲಿಂದ ಎಲ್ಲರೂ ತಮ್ಮ ಮನೆಗಳಿಗೆ ಕದಿರು ಒಯ್ಯುವ ಸಂಪ್ರದಾಯ ಒಂದಾದರೆ, ಕೆಲವು ಕೃಷಿಕರು ನೇರವಾಗಿ ಮನೆಗೆ ಹೊಸ ಪೈರನ್ನು ತೆಗೆದುಕೊಂಡು ಹೋಗಿ ಅಲ್ಲೇ ಪೂಜೆ ಮಾಡಿ ಕಟ್ಟುವುದು ಇನ್ನೊಂದು ವಿಧಾನ.

ಮನೆಗಳಲ್ಲಿ ಆಚರಣೆ ಹೇಗೆ?
ಹೊಸತು ಹಬ್ಬ (ಕದಿರು ಹಬ್ಬ)ದಂದು ಲಕ್ಷ್ಮೀ ಮನೆಗೆ ಪ್ರವೇಶಿಸುತ್ತಿದ್ದಾಳೆ ಎನ್ನುವ ಭಕ್ತಿ ಭಾವದಿಂದ ಇಡೀ ಮನೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಮನೆಯ ಪ್ರಧಾನ ದ್ವಾರ ಸೇರಿದಂತೆ ಹೊಸ್ತಿಲುಗಳಿಗೆ ಶೇಡಿಯಿಂದ ಅಲಂಕಾರ ಮಾಡಲಾಗುತ್ತದೆ.
ಸಂಪ್ರದಾಯದಂತೆ ಕೃಷಿಕರು ತಮ್ಮದೇ ಗದ್ದೆಯಿಂದ ತಮ್ಮ ಮನೆಗೆ ತೆನೆ ಕೊಂಡೊಯ್ಯಬಾರದು ಎಂಬ ನಿಯಮವಿದೆ. ಹೀಗಾಗಿ ಹೊಸ್ತು ಹಬ್ಬ ಆಚರಿಸುವ ಮುನ್ನಾ ದಿನ ರಾತ್ರಿ ಇಲ್ಲವೇ ಅದೇ ದಿನ ಮುಂಜಾನೆ ವೇಳೆ ಯಾರಿಗೂ ತಿಳಿಯದಂತೆ ಬೇರೆಯವರ ಕೃಷಿ ಭೂಮಿಯಿಂದ ತೆನೆಯನ್ನು ತೆಗೆಯಲಾಗುತ್ತದೆ!

ಹಾಗೆ ಗದ್ದೆಯಿಂದ ತಂದ ತೆನೆಯನ್ನು ತುಳಸಿಕಟ್ಟೆಯ ಮುಂದೆ ಇರಿಸಿ, ವಿಶೇಷ ಅಲಂಕಾರಗಳೊಂದಿಗೆ ಪೂಜಿಸಲಾಗುತ್ತದೆ. ಪೂಜೆಗೊಂಡ ಭತ್ತದ ತೆನೆಯನ್ನು ಮನೆಯ ಹಿರಿಯರು ತಲೆಯಲ್ಲಿ ಹೊತ್ತು ಮನೆಯೊಳಗೆ ಪ್ರವೇಶಿಸುತ್ತಾರೆ. ಈ ಹಂತದಲ್ಲಿ ಮನೆಯೊಡತಿ ಯಜಮಾನನ ಪಾದ ತೊಳೆದು, ಆರತಿ ಮಾಡುತ್ತಾರೆ. ನಂತರ ಕದಿರನ್ನು ಮನೆಯ ಪ್ರಧಾನ ದ್ವಾರ ಮತ್ತು ಎಲ್ಲ ಕೃಷಿ ಪರಿಕರಗಳಿಗೆ ಕಟ್ಟಲಾಗುತ್ತದೆ.

ಕದಿರು ಕಟ್ಟುವುದು ಹೇಗೆ?
ಭತ್ತದ ತೆನೆಯನ್ನು ಮಾವು, ಹಲಸು ಮತ್ತು ಬಿದಿರಿನ ಎಲೆಗಳನ್ನು ಸೇರಿಸಿ ತೆಂಗಿನ ನಾರಿನಿಂದ ಮಾಡಿದ ಹಗ್ಗದಿಂದ ಕಟ್ಟಲಾ ಗುತ್ತದೆ. ಪೈರಿನಿಂದ ಭತ್ತ ಬಿದ್ದರೂ ಈ ಹೊರಾವರಣ ರಕ್ಷಾ ಕವಚವಾಗಿರುತ್ತದೆ. ಅದರ ಜತೆಗೆ ಈ ಎಲ್ಲ ವಸ್ತುಗಳ ಪರಸ್ಪರ ಜೋಡಣೆಯೂ ವಿಶೇಷವಾಗಿದೆ.ಮನೆಯ ಮೇಜು, ಕುರ್ಚಿ, ಕಂಪ್ಯೂಟರ್‌, ವಾಹನಗಳಿಗೆ, ತಿಜೋರಿ, ಬಾವಿ ಸೇರಿದಂತೆ ಎಲ್ಲ ಪರಿಕರಗಳಿಗೆ ಕದಿರು ಕಟ್ಟುವ ಕ್ರಮವಿದೆ. ಈ ಮೂಲಕ ಹೊಸತನಕ್ಕೆ ನಾಂದಿಯಾಗಲಿ ಎಂಬ ಆಶಯವಿದೆ.

ಮುಂದೆಯೂ ಉಳಿಯಬೇಕು
ಸಂಸ್ಕೃತಿಯ ರಕ್ಷಣೆ, ಪರಿಸರ ಜಾಗೃತಿ, ಮನೆ ಮನಗಳ ಸ್ವತ್ಛತೆ, ಸಂಬಂಧಗಳನ್ನು ಬೆಸೆಯುವುದು, ಎಲ್ಲದದರಲ್ಲೂ ಹೊಸತನ್ನು ಕಾಣುವ ವಿಶೇಷ ಆಶಯ ಈ ಗ್ರಾಮೀಣ ಕೃಷಿ ಆಚರಣೆಯಲ್ಲಿದೆ. ಈ ಆಚರಣೆಗಳು ಮುಂದಿನ ತಲೆಮಾರುಗಳಿಗೂ ಉಳಿಯಬೇಕು.
– ಪಾಂಡುರಂಗ ದೇವಾಡಿಗ ತೆಕ್ಕಟ್ಟೆ, ಕೃಷಿಕರು

ಹೊಸ ಅಕ್ಕಿ ಊಟ ವಿಶೇಷ
ಹೊಸತು ಹಬ್ಬ ಆಚರಣೆಯಂದು ಒಂಬತ್ತು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದಕ್ಕೆ ಹೊಸ ಅಕ್ಕಿಯನ್ನು ಬೆರೆಸಿದಾಗ ಅದು ಪರಿಪೂರ್ಣವಾಗುತ್ತದೆ. ಹೊಸ ಅಕ್ಕಿಯಿಂದ ತಯಾರಾದ ಅನ್ನ ಊಟ ಮಾಡುವ ಮೊದಲು ಕಿರಿಯರು ಹಿರಿಯರ ಆಶೀರ್ವಾದ ಪಡೆಯಬೇಕು.

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

1-kejri-aa

CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video 

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

Chhattisgarh: ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರ ಹತ್ಯೆ: ಅಪಾರ ಶಸ್ತ್ರಾಸ್ತ್ರ ವಶ

Chhattisgarh: ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರ ಹ*ತ್ಯೆ: ಅಪಾರ ಶಸ್ತ್ರಾಸ್ತ್ರ ವಶ

Bengalru-Bomb

Bomb Threat: ಬೆಂಗಳೂರು ನಗರದ ಪ್ರತಿಷ್ಠಿತ ಮೂರು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ!

12-bantwala

Sand Mining: ಬಂಟ್ವಾಳ ಅಕ್ರಮ ಮರಳು ಅಡ್ಡೆಗೆ ದಾಳಿ; 20 ದೋಣಿ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

Udupi: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

FRAUD

Karkala: ಬ್ಯಾಂಕ್‌ ಸಮಸ್ಯೆ ಪರಿಹಾರ ನೆಪದಲ್ಲಿ ಒಟಿಪಿ ಪಡೆದು ವಂಚನೆ

9

Kaup ಹೊಸ ಮಾರಿಗುಡಿ: ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

1-kejri-aa

CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video 

Shivalinge-Gowda

CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.