Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?


Team Udayavani, Oct 5, 2024, 10:58 AM IST

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

ಹೆಣ್ಣು ಅಬಲೆ ಅವಳ ರಕ್ಷಣೆಗಾಗಿ ಗಂಡು ಜೊತೆಗಿರಲಿ ಎಂಬ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗಿನ್ನೂ ಅರ್ಥ ಆಗಲಿಲ್ಲ. ಪುರಾಣದ ಪುಟಗಳನ್ನು ತೆರೆದಂತೆ ಜಗತ್ತಿನ ಬಲಶಾಲಿ ಯೋಧರ ಸಾಲಿನಲ್ಲಿ ನನಗೆ ಹೆಚ್ಚಾಗಿ ಕಾಣುವುದು ಹೆಣ್ಣೇ. ಅದೆಷ್ಟೋ ಧರ್ಮ ಯುದ್ಧಗಳಿಗೆ ಪಾಂಚಜನ್ಯ ಆಗಿರುವುದು ಕೂಡ ಹೆಣ್ಣೇ.

ಧರ್ಮ ಕಾರ್ಯದ ಆರಂಭ ಕೊನೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣೇ. ಮಂಥರೆಯ ಕುತಂತ್ರಕ್ಕೆ ರಾಮಾಯಣ ಶುರುವಾದರೆ, ಶೂರ್ಪನಖಿಯ ಸೇಡು, ಕೈಕೇಯಿಯ ಕೇಡು, ಸೀತೆಯ ಪಾಡು, ಇದುವೇ ಅಲ್ವಾ ರಾಮಾಯಣದ ಯುದ್ಧಕ್ಕೆ ಜಾಡು.

ಇನ್ನು ಮಹಾಭಾರತ ನಡೆದದ್ದೇ ಜಾರಿದ ಹೆಣ್ಣಿನ ಸೆರಗಿನಿಂದ ಅಂದರೆ ತಪ್ಪಲ್ಲ. ಮಹಾಭಾರತದಲ್ಲೂ ಹೆಣ್ಣಿನದ್ದೇ ಮೇಲುಗೈ. ಕುಂತಿಯ ಕುತೂಹಲ, ದ್ರೌಪದಿಯ ಸೇಡು, ಗಾಂಧಾರಿಯ ಕಣ್ಕಟ್ಟು, ಇವೆಲ್ಲಾ ಧರ್ಮಕಾರ್ಯಕ್ಕೆ ಹೆಣ್ಣುತೆತ್ತ ಬೆಲೆ, ತ್ಯಾಗ ಇರಬಹುದೇನೋ.

ಧರ್ಮ ರಕ್ಷಣೆಯ ಅದೆಷ್ಟೋ ಸಂದರ್ಭದಲ್ಲಿ, ಸಾವನ್ನು ಗೆದ್ದೇ ಎಂದು ಮೆರೆಯುತ್ತಿದ್ದ ಅದೆಷ್ಟೋ ರಾಕ್ಷಸ ಸಂಹಾರ ಹೆಣ್ಣಿನಿಂದಲೇ ಆಗಿದೆ. ಹುಟ್ಟಿಸಿ ಜೀವ ನೀಡುವ ತಾಯಿ ಒಡಲ ಬಸಿದು ಕೊಲ್ಲುವ ಧರ್ಮ ರಕ್ಷಕಿ ಕೂಡ ಹೌದು.

ರಾಕ್ಷಸ ಸಂಹಾರ ಕಷ್ಟ ಆದಾಗ ಆದಿಮಾಯೆಯ ಮೊರೆ ಹೋಗುವ ದೇವತೆಗಳು, ಭಸ್ಮಾಸುರನನ್ನು ಹಿಡಿ ಭಸ್ಮದಲ್ಲಿ ಸುಟ್ಟ ಮೋಹಿನಿ, ಮಹಿಷಾಸುರನ ಸೀಳಿದ ಮಹಿಷ ಮರ್ದಿನಿ, ರಕ್ತಬೀಜರ ಹುಟ್ಟಡಗಿಸಿದ ಚಂಡ ಮುಂಡರ ರುಂಡವ ಚೆಂಡಾಡಿದವಳು ಹೆಣ್ಣೇ…

ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ಮಾತು ಸತ್ಯ. ಹಾಗಾದರೆ ಅಂದಿನ ಆ ಶಕ್ತಿ ಈಗ ಎಲ್ಲಿ ಅಡಗಿದೆ. ಗರ್ಭಗುಡಿಯನ್ನೇ ಹೊತ್ತು ತಿರುಗುವ ಆಕೆ ಯಾವ ದಿಗ್ಬಂಧನದ ಭಯದಲ್ಲಿದ್ದಾಳೆ?

ಬೆಳಕ ರೂವಾರಿ ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

ಈಗ ರಾಕ್ಷಸರಿಗಿಂತ ಭಯ ಮಾನವನದ್ದೇ ಏನೋ, ಹಾಗಾದರೆ ಅಷ್ಟು ಭಯಂಕರವಾಯಿತಾ ಬದುಕು. ಕಳೆದುಕೊಂಡದ್ದು ಶಕ್ತಿಯೊ? ನಂಬಿಕೆಯೋ? ಹಾಗಾದರೆ ಮತ್ತೆ ಹುಟ್ಟುಬಹುದೇ ನಮ್ಮ ಒಳಗೆ ಅವಿತಿರೋ ಆದಿಮಾಯೆ? ಮತ್ತೆ ಬರೆಯಬಲ್ಲೆವಾ ನಾವು ಒಂದು ಧರ್ಮ ಕಾರ್ಯದ ಹೊಸ ಅಧ್ಯಾಯ? ಮತ್ತೆ ಮರಳುವುದೇ ಒಡಲ ಕಡಲಲಿ ಧೈರ್ಯದ ಅಲೆ… ಗರ್ಭ-ಗುಡಿಯಲ್ಲಿ ಬೆಳಕ ಹೆರುವ ಹೆಣ್ಣು, ಅಧರ್ಮವಾದಾಗ ಊರ ಸುಡುವ ಬೆಂಕಿಯೂ ಆಗಬಹುದು ಎನ್ನುವ ಮಾತು ಹೆಣ್ಣು ಅರಿಯುವುದು ಯಾವಾಗ? ಯಾವಾಗ ಪ್ರಪಂಚ ಅರಿಯುವುದು?

ಯಾವಾಗ?!

ತೇಜಸ್ವಿನಿ

ಟಾಪ್ ನ್ಯೂಸ್

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.