ಕುಷ್ಟಗಿ: ಹೆಚ್ಚಿದ ಕಾರ್ಯಭಾರ-ಒತ್ತಡದಲ್ಲಿ ಪೊಲೀಸ್‌ ಸಿಬ್ಬಂದಿ


Team Udayavani, Oct 4, 2024, 2:22 PM IST

ಕುಷ್ಟಗಿ: ಹೆಚ್ಚಿದ ಕಾರ್ಯಭಾರ-ಒತ್ತಡದಲ್ಲಿ ಪೊಲೀಸ್‌ ಸಿಬ್ಬಂದಿ

ಉದಯವಾಣಿ ಸಮಾಚಾರ
ಕುಷ್ಟಗಿ: ಪಟ್ಟಣ ವಿಸ್ತಾರವಾಗುತ್ತಿದೆ. ಅದೇ ರೀತಿ ಅಪರಾಧಗಳ ಸಂಖ್ಯೆ ಹಾಗೂ ಅದರ ಜಾಲವು ವಿಸ್ತರಣೆಯಾಗುತ್ತಿದೆ. ಹೀಗಾಗಿ ಜನಸಂಖ್ಯೆ, ಅಪರಾಧಗಳ ಸಂಖ್ಯೆಗಳಾನುಸಾರವಾಗಿ ಕುಷ್ಟಗಿ ಪಟ್ಟಣಕ್ಕೆ ಗ್ರಾಮೀಣ ಪೊಲೀಸ್‌ ಠಾಣೆ ಪ್ರಸ್ತುತವೆನಿಸಿದೆ. ಇದನ್ನು ಅಪರಾಧ ಪ್ರಕರಣಗಳ ಸಂಖ್ಯೆಗಳು ಗ್ರಾಮೀಣ ಠಾಣೆಯ ಅಗತ್ಯತೆಯನ್ನು ಪುಷ್ಟಿಕರಿಸುತ್ತವೆ.

ತಾಲೂಕಿನಲ್ಲಿ ಕಳೆದ 2020ರಿಂದ 2024ರವರೆಗೆ ಒಟ್ಟು 2,714 ಪ್ರಕರಣಗಳಾಗಿದ್ದವು. ಈ ಮೂರು ಠಾಣಾ ವ್ಯಾಪ್ತಿಗಳ ಪೈಕಿ ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ಹೆಚ್ಚು. ಈ 5 ವರ್ಷಗಳಲ್ಲಿ ಹನುಮಸಾಗರ 749, ತಾವರಗೇರಾ 728 ಪ್ರಕರಣಗಳಾಗಿದ್ದು, ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ 1,237 ಪ್ರಕರಣಗಾಗಿವೆ.

ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ವರ್ಷ 200ರಿಂದ 300 ಸರಾಸರಿ ಸಂಖ್ಯೆಯಲ್ಲಿ ಪ್ರಕರಣಗಳಾಗುತ್ತಿವೆ. ಪ್ರಕರಣಗಳ ಸಂಖ್ಯೆಗೆ
ಅನುಗುಣವಾಗಿ ಪೊಲೀಸ್‌ ಬಲ ಹೆಚ್ಚಿಸಲು ಸದರಿ ಠಾಣೆಗೆ ಪಿಐ ಹುದ್ದೆ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪೊಲೀಸ್‌
ಠಾಣೆ ಅವಶ್ಯ ವ್ಯಕ್ತವಾಗಿದೆ.

ಕುಷ್ಟಗಿ ಪೊಲೀಸ್‌ ಠಾಣೆಗೆ ಕುಷ್ಟಗಿ ಪಟ್ಟಣ ಸೇರಿದಂತೆ 53 ಗ್ರಾಮಗಳ ವ್ಯಾಪ್ತಿ ಇದೆ. ಪುಣೆ-ಬೆಂಗಳೂರು ಚತುಷ್ಪಥ ರಾಷ್ಟ್ರೀಯ
ಹೆದ್ದಾರಿ ಈ ಪಟ್ಟಣದ ಮೂಲಕ ಹಾದು ಹೋಗಿದೆ. ಜನದಟ್ಟನೆ, ವಾಹನ ಜೊತೆಗೆ ಅಪರಾಧ ಸಂಖ್ಯೆ ಹೆಚ್ಚಿದೆ.

ಹೆಚ್ಚುವರಿ ನಿಯೋಜನೆ: ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿನ ಖಜಾನೆ ಇಲಾಖೆ, ಕುಷ್ಟಗಿ ಪಟ್ಟಣದ ಸಂಚಾರ ನಿಯಂತ್ರಣ, ರಾತ್ರಿ ಗಸ್ತು ಇವೆಲ್ಲವೂ ನಿಯಮಿತವಾಗಿವೆ. ಇದರ ಜೊತೆ ಅನ್ಯ ಜಿಲ್ಲೆಗೆ ಹಾಗೂ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಗಣ್ಯರಿಗೆ ಬಂದೋಬಸ್ತ್, ಜಾತ್ರೆ, ಸಂತೆ ಇತ್ಯಾದಿ ಕಾರ್ಯಕ್ರಮ, ಬಂದೋಬಸ್ತ್ ಕರ್ತವ್ಯ ಕಾರ್ಯ ನಿರ್ವಹಿಸುವುದು ಇಲ್ಲಿನ
ಪೊಲೀಸರಿಗೆ ಮತ್ತೂಂದು ಸವಾಲಾಗಿದೆ.

ಇಚ್ಛಾಶಕ್ತಿ ಕೊರತೆ: ಚತುಷ್ಪಥ ರಾಷ್ಟ್ರೀಯ  ಹೆದ್ದಾರಿ ಅಪಘಾತ ನಿರ್ವಹಣೆಯು ಕಷ್ಟವಾಗಿದೆ. ಅಲ್ಲದೇ ಬೇವೂರು,
ಯಲಬುರ್ಗಾ, ಇಲಕಲ್‌, ಹನುಮಸಾಗರ, ತಾವರಗೇರಾ, ಗಜೇಂದ್ರಗಡ ಮೊದಲಾದ ಠಾಣಾ ವ್ಯಾಪ್ತಿಯ ಎಂಎಲ್‌ಸಿ ಪ್ರಕರಣಗಳಿಗೂ ಠಾಣೆಯ ಪೊಲೀಸರು ಹಾಜರಾಗಬೇಕಿದೆ.

ಠಾಣೆಯ ವ್ಯಾಪ್ತಿಯ ಕುಷ್ಟಗಿ ಪಟ್ಟಣ, ಹಿರೇಮನ್ನಾಪೂರ, ದೋಟಿಹಾಳ, ಕ್ಯಾದಿಗುಪ್ಪ, ಚಳಗೇರಾ, ತಳವಗೇರಾ, ಕಲಾಲಬಂಡಿ,
ಕೊರಡಕೇರಾ, ಹಿರೇಬನ್ನಿಗೋಳ ಮೊದಲಾದ ಗ್ರಾಮಗಳು ದೊಡ್ಡ ಗ್ರಾಮಗಳಾಗಿವೆ. ಈ ಹಿನ್ನೆಲೆಯಲ್ಲಿ ಕುಷ್ಟಗಿಗೆ ಗ್ರಾಮೀಣ ಪೊಲೀಸ್‌ ಠಾಣೆ ಅಗತ್ಯವಾಗಿದೆ. ಆದರೆ ಜನಪ್ರತಿನಿ ಧಿಇಚ್ಛಾಶಕ್ತಿ ಕೊರತೆ ಪ್ರಶ್ನಾರ್ಥವಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಪಿಐ ಕುಷ್ಟಗಿಗೆ ಯಾಕಿಲ್ಲ: ಕನಕಗಿರಿ, ಕಾರಟಗಿ, ಕುಕನೂರು ಹೊಸ ತಾಲೂಕು ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಪಿಐ ಹುದ್ದೆ ಸೃಜಿಸಲಾಗಿದೆ. ಆದರೆ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪಿಐ ಹುದ್ದೆ ಇಲ್ಲ. ಗ್ರಾಮೀಣ ಪೊಲೀಸ್‌ ಠಾಣೆ ಮಂಜೂರಾದರೆ 53 ಗ್ರಾಮಗಳಿಗೆ ಪ್ರತ್ಯೇಕ ಗ್ರಾಮೀಣ ಪೊಲೀಸ್‌ ಠಾಣೆಯಿಂದ ಇನ್ನಷ್ಟು ಗುಣಮಟ್ಟದ ಸೇವೆ ನಿರೀಕ್ಷಿಸಲು ಸಾಧ್ಯವಿದೆ.

ಕುಷ್ಟಗಿ ಠಾಣಾ ವ್ಯಾಪ್ತಿಯ ಸಿಬ್ಬಂದಿ ಅಂಕಿ ಮಾಹಿತಿ
ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿವೆ. ತಾಲೂಕಿನಲ್ಲಿ ಸಿಪಿಐ-1, ಪಿಎಸೈ 6, ಎಎಸೈ-16, ಮುಖ್ಯ ಪೇದೆ 32, ಪೇದೆ, ಮಹಿಳಾ ಪೇದೆ 74 ಸಿಬ್ಬಂದಿ ಸೇವೆಯಲ್ಲಿದ್ದಾರೆ. ಈ ಸೇವೆಯಲ್ಲಿ ಸದ್ಯ 2 ಎಎಸೆ„, 4 ಪೇದೆ ಸಿಬ್ಬಂದಿ ಕೊರತೆ ಇದೆ. ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕುಷ್ಟಗಿ ಪಟ್ಟಣ ಸೇರಿದಂತೆ 53 ಗ್ರಾಮ- ಹನುಮಸಾಗರ 60
ಗ್ರಾಮಗಳು, ತಾವರಗೇರಾ ಪಟ್ಟಣ ಪಂಚಾಯತಿ ಸೇರಿದಂತೆ 50 ಗ್ರಾಮಗಳ ವ್ಯಾಪ್ತಿ ಹೊಂದಿದೆ.

ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕುಷ್ಟಗಿಗೆ ಪ್ರತ್ಯೇಕವಾಗಿ ಗ್ರಾಮೀಣ ಪೊಲೀಸ್‌ ಠಾಣೆಯ ಬಗ್ಗೆ ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಈ ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದೀಗ ಕುಷ್ಟಗಿಗೆ ಗ್ರಾಮೀಣ ಪೊಲೀಸ್‌ ಠಾಣೆ ಅಗತ್ಯತೆ ಬಗ್ಗೆ ಇನ್ನೊಮ್ಮೆ ಬೇಡಿಕೆ ಸಲ್ಲಿಸುತ್ತೇನೆ.
●ದೊಡ್ಡನಗೌಡ ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

ಠಾಣಾ ವ್ಯಾಪ್ತಿಯಲ್ಲಿ ವಿಪರೀತ ಕೆಲಸದ ಒತ್ತಡವಿದೆ. ಈ ಠಾಣಾ ವ್ಯಾಪ್ತಿ ದೊಡ್ಡದಾಗಿದ್ದು ಪ್ರಕರಣಗಳ ಸಂಖ್ಯೆಯೂ ದ್ವಿಗುಣವಾಗಿದೆ. ಏನಿಲ್ಲವೆಂದರೂ ಪ್ರತಿ ದಿನ ಎರಡ್ಮೂರು ಎಫ್‌.ಐ.ಆರ್‌. ಪ್ರಕರಣಗಳಾಗುತ್ತಿವೆ. ಸಿಬ್ಬಂದಿ ಈ ಠಾಣೆಗೆ ವರ್ಗವಾಗಿ ಬರಲು ಹಿಂಜರಿಯುತ್ತಿದ್ದಾರೆ. ಇಲ್ಲಿಗೆ ಬಂದರೆ ಶಿಕ್ಷೆ ಎಂದು ಪರಿಗಣಿಸುತ್ತಾರೆ.
●ಹೆಸರು ಹೇಳಲಿಚ್ಚಸದ ಪೊಲೀಸ್‌

*ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Kharge (2)

Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

udupi1

Udupi: ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ತಬ್ಧ, ಕಚೇರಿಗಳು ಬಂದ್… ನೌಕರರ ಮುಷ್ಕರ

ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ: ಅಶೋಕ

R. Ashok: ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

CT-Ravi

MUDA Case: ಸಿದ್ದರಾಮಯ್ಯ ಕಳಂಕ ರಹಿತರೆಂದು ತನಿಖೆಯಲ್ಲಿ ಸಾಬೀತಾಗಲಿ: ಎಂಎಲ್‌ಸಿ ಸಿ.ಟಿ.ರವಿ

15-uv-fusion

UV Fusion: ಮೃಗಗಳ ಜಗತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM ಸಿದ್ದರಾಮಯ್ಯನವರಿಗೆ ಗಂಗಾವತಿಯಲ್ಲಿ ಅದ್ದೂರಿಯ ಸ್ವಾಗತ

CM ಸಿದ್ದರಾಮಯ್ಯನವರಿಗೆ ಗಂಗಾವತಿಯಲ್ಲಿ ಅದ್ದೂರಿಯ ಸ್ವಾಗತ

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಬಹಿರ್ದೆಸೆಗೆ ತೆರಳಿದ್ದ ಬಾಲಕನ ಮೇಲೆ ಬಿದ್ದ ವಿದ್ಯುತ್‌ ತಂತಿ!

Koppala: ಬಹಿರ್ದೆಸೆಗೆ ತೆರಳಿದ್ದ ಬಾಲಕನ ಮೇಲೆ ಬಿದ್ದ ವಿದ್ಯುತ್‌ ತಂತಿ!

6-ಗಾನಗಾವಾತಹಿ

ಮಾಜಿ ಮಂತ್ರಿ ಅನ್ಸಾರಿ ಆಪ್ತರ ಮೇಲುಗೈ; ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಇಲಿಯಾಸ್ ಖಾದ್ರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kharge (2)

Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ

1-reasad

Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ

7

Kollegala: ದೇವಾಲಯದ ಹಿಂಭಾಗದ ಕಾವೇರಿ ನದಿಯಲ್ಲಿ ಯುವಕನ ಶವ ಪತ್ತೆ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Manipur

Manipur ಹಿಂಸಾಚಾರ: ಪೊಲೀಸ್‌ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ಲೂಟಿಗೈದ ಗುಂಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.