ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!


Team Udayavani, Oct 4, 2024, 4:45 PM IST

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಉದಯವಾಣಿ ಸಮಾಚಾರ
ಕಲಬುರಗಿ: ಇಲ್ಲಿನ ಕಲಬುರಗಿ-ಬೀದರ್‌ -ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಲು ಗುಣಮಟ್ಟದಲ್ಲಿ ಹೆಚ್ಚಳದ ಸಾಧನೆ ಮಾಡಿದ್ದು, ಒಕ್ಕೂಟದ ಹಾಲಿಗೆ ನೆರೆಯ ಮಹಾರಾಷ್ಟ್ರದಲ್ಲೂ ಬೇಡಿಕೆ ಬಂದಿದೆ. ಕಳೆದ ಒಂದೂವರೆ ದಶಕದಿಂದ ಕಲಬುರಗಿಗೆ ಮಹಾರಾಷ್ಟ್ರದ ಹಾಲು ಎಗ್ಗಿಲ್ಲದೆ ಪೂರೈಕೆ ಯಾಗುತ್ತಿತ್ತು. ಹತ್ತಾರು ಖಾಸಗಿ ಕಂಪನಿಗಳು
ತಮ್ಮ ಉತ್ಪನ್ನಗಳಿಗೆ ಕಲಬುರಗಿಯನ್ನೇ ಪ್ರಮುಖ ಮಾರುಕಟ್ಟೆಯಾಗಿಸಿಕೊಂಡಿದ್ದವು. ಈಗಲೂ ಹಾಲು ಬರುತ್ತದೆಯಾದರೂ ಮೊದಲಿನಷ್ಟಿಲ್ಲ.

ಈಗ ಗ್ರಾಹಕರು “ನಂದಿನಿ’ ಹಾಲಿಗೆ ಹೆಚ್ಚಾಗಿ ಮೊರೆ ಹೋಗುತ್ತಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ಕಲಬುರಗಿ-ಬೀದರ್‌-ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಗುಣಮ ಟ್ಟದಲ್ಲಿ ಶ್ರೇಷ್ಠತೆ ಹೆಚ್ಚಿಸಿಕೊಂಡ ಪರಿಣಾಮ ಇದೇ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಸರಬರಾಜು ಆಗುತ್ತಿದೆ. ಒಕ್ಕೂಟದ ಎಮ್ಮೆಯ ಹಾಲು ದಿನಾಲು 15 ಸಾವಿರ ಲೀಟರ್‌ನಷ್ಟು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸರಬರಾಜು ಆಗುತ್ತಿದೆ.

ಕೊಲ್ಹಾಪುರದ ಶರದ್‌ ಮಲ್ಟಿ ಕೋ-ಆಪರೇಟಿವ್‌ ಸೊಸೈಟಿಗೆ ಕಲಬುರಗಿ ಯಿಂದ ದಿನಾಲೂ ಹಾಲು ಪೂರೈಕೆಯಾಗುತ್ತಿದೆ. ಇದು ಒಕ್ಕೂಟಕ್ಕೆ ಲಾಭ ತರುವಂತಾಗಿದೆ.  ಮಾರುಕಟ್ಟೆಯಲ್ಲಿ ಹಾಲಿನ ಪೌಡರ್‌ ಹಾಗೂ ತುಪ್ಪದ ದರ ಕಡಿಮೆಯಾಗಿರುವಾಗ ಈ ಹಾಲು ಪೂರೈಕೆ ಒಕ್ಕೂಟಕ್ಕೆ ಬಲ ತುಂಬಿದಂತಾಗಿದೆ.

ಹಾಲಿನ ಗುಣಮಟ್ಟತೆ ಹೆಚ್ಚಿಸಲು ಹಾಗೂ ನಿಖರವಾಗಿ ಅಳೆಯಲು ಒಕ್ಕೂಟದಲ್ಲಿ 1.50 ಕೋಟಿ ರೂ. ಮೊತ್ತದ ಯಂತ್ರವನ್ನು
ಅಳವಡಿಸಲಾಗಿದೆ. ಅಲ್ಲದೇ ಹಾಲಿನ ಉತ್ಪಾದನೆ ಹೆಚ್ಚಿಸಲು ಹೊಸದಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ರಚನೆ, ಸಂಘಗಳ ಸದಸ್ಯರಿಗೆ ಪರಿಣಾಮಕಾರಿ ತರಬೇತಿ, ಕೃತಕ ಗರ್ಭದಾರಣೆ ಕೇಂದ್ರಗಳ ಹೆಚ್ಚಳ ಸೇರಿ ಹತ್ತಾರು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 85 ಸಾವಿರ ಲೀಟರ್‌ ಹಾಲಿಗೆ ಬೇಡಿಕೆಯಿದ್ದು, ಈಗ 70 ಸಾವಿರ ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಇನ್ನುಳಿದ
15 ಸಾವಿರ ಲೀಟರ್‌ ಹಾಲನ್ನು ಶಿವಮೊಗ್ಗದಿಂದ ತರಿಸಲಾಗುತ್ತಿದೆ.

ಈಚೆಗೆ ನಡೆದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಕಾರ್ಯ ನಿರೂಪಣಾ ಸಮಿತಿ ಸಭೆಯಲ್ಲಿ ಪ್ರಥಮ ಬಾರಿಗೆ  ಶೇ.96ರಷ್ಟು ಗುಣಮಟ್ಟ ಸಾಧನೆಗೆ ಸಂಬಂಧಿಸಿದಂತೆ ಶ್ರೇಷ್ಠತೆ ಪ್ರಮಾಣ ದೊರೆತಿದೆ. 1985ರಲ್ಲಿ ಆರಂಭವಾದ ಈ ಒಕ್ಕೂಟ ನಾಲ್ಕು ದಶಕಗಳ ಅವಧಿದಲ್ಲಿ ಇಂತಹ ಪ್ರಶಂಸೆ ಪಡೆದಿರುವುದು ಇದೇ ಮೊದಲು. ಈ ಹಿಂದೆ ಅಗತ್ಯಕ್ಕೆ ತಕ್ಕ ಹಾಲು ಉತ್ಪಾದನೆ ಹಾಗೂ ಶೇಖರಣೆ ಒತ್ತಟ್ಟಿಗಿರಲಿ, ಬೇಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಬೇರೆ ಕಡೆಯಿಂದ ತರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

*ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-eedsadasd

Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

ಅ.25ಕ್ಕೆ ಎಸ್‌ಎಸ್‌ಎಲ್‌ಸಿ ಮಧ್ಯ ವಾರ್ಷಿಕ ಪರೀಕ್ಷಾ ಫ‌ಲಿತಾಂಶ

ಅ.25ಕ್ಕೆ ಎಸ್‌ಎಸ್‌ಎಲ್‌ಸಿ ಮಧ್ಯ ವಾರ್ಷಿಕ ಪರೀಕ್ಷಾ ಫ‌ಲಿತಾಂಶ

Rain: ನಾಳೆ ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

Rain: ನಾಳೆ ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

1-sadguru

Isha Foundation; ಸನ್ಯಾಸ ತೆಗೆದುಕೊಳ್ಳಲು ನಾವು ಯಾರನ್ನೂ ಒತ್ತಾಯಿಸುವುದಿಲ್ಲ…

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

TEACHER

Kalaburagi: 77 ಪರೀಕ್ಷೆ ಬರೆದ ಕನ್ನಡ ಶಿಕ್ಷಕನಿಂದ ವಿಶ್ವದಾಖಲೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Alnavar: ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

arest

BC Road: ಕಳವಾದ ಸ್ಕೂಟರ್‌ ಪತ್ತೆ; ಆರೋಪಿ ಬಂಧನ

1-eedsadasd

Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

1

Manipal: ಹೊಟೇಲ್‌ ಮ್ಯಾನೇಜರ್‌ಗೆ ವಂಚಿಸಿದ ವೈಟರ್‌

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.