CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video
Team Udayavani, Oct 4, 2024, 5:26 PM IST
ಹೊಸದಿಲ್ಲಿ: ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ(ಅ4) ದೆಹಲಿ 6, ಫ್ಲಾಗ್ಸ್ಟಾಫ್ ರಸ್ತೆಯ ಸಿಎಂ ನಿವಾಸವನ್ನು ಕುಟುಂಬ ಸದಸ್ಯರೊಂದಿಗೆ ತೊರೆದರು. ಈ ವೇಳೆ ನಿವಾಸದ ಸಿಬಂದಿಗಳಿಗೆ ಧನ್ಯವಾದಗಳನ್ನು ಹೇಳಿದರು. ಕೆಲವರು ಭಾವುಕ ಕ್ಷಣಕ್ಕೆ ಸಾಕ್ಷಿ ಎಂಬಂತೆ ಕಣ್ಣೀರಿಟ್ಟರು. ಮಾಜಿ ಸಿಎಂ ಸಾಮಾನ್ಯ ಕೆಲಸಗಾರರೊಬ್ಬರನ್ನು ಅಪ್ಪಿಕೊಂಡು ನಿವಾಸ ತೊರೆದು ಗಮನ ಸೆಳೆದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಒಂಬತ್ತು ವರ್ಷಗಳಿಂದ ಇದ್ದ ಮನೆಯನ್ನು ಪತ್ನಿ, ಮಗ, ಮಗಳು ಮತ್ತು ತಂದೆ, ತಾಯಿಯೊಂದಿಗೆ ತೊರೆದು ಎರಡು ಕಾರುಗಳಲ್ಲಿ 5, ಫಿರೋಜ್ಶಾ ರಸ್ತೆ ಮಂಡಿ ಹೌಸ್ ಗೆ ಹೊರಟರು. ಮಂಡಿ ಹೌಸ್ ಬಂಗಲೆಯನ್ನು ಪಂಜಾಬ್ನ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿತ್ತು.
ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಆಸ್ತಿಯ ಕೀಗಳನ್ನು ಸರಕಾರಿ ಅಧಿಕಾರಿಗೆ ಹಸ್ತಾಂತರಿಸಿದರು.6, ಫ್ಲಾಗ್ಸ್ಟಾಫ್ ಬಂಗಲೆಯು ದೆಹಲಿ ಸರಕಾರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ. ಕೇಜ್ರಿವಾಲ್ ಕುಟುಂಬ ಈ ಮನೆಗೆ ‘ಗೃಹ ಪ್ರವೇಶ’ ಆಚರಣೆ ಮಾಡುವ ಮೂಲಕ ಪ್ರವೇಶಿಸಿದ್ದರು.
#WATCH | Delhi: Former Delhi CM and AAP National Convenor Arvind Kejriwal vacated the CM residence along with his family, earlier today.
(Source: AAP) pic.twitter.com/vQEy61Bjm8
— ANI (@ANI) October 4, 2024
ಎರಡು ಮಿನಿ ಟ್ರಕ್ಗಳಲ್ಲಿ ಕುಟುಂಬದ ಗೃಹೋಪಯೋಗಿ ವಸ್ತುಗಳನ್ನು 5, ಫಿರೋಜ್ಶಾ ರಸ್ತೆ ಬಂಗಲೆಗೆ ಸಾಗಿಸಲಾಗಿದೆ ಎಂದು ಎಎಪಿ ಮುಖಂಡರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜನರಿಂದ “ಪ್ರಾಮಾಣಿಕತೆಯ ಪ್ರಮಾಣಪತ್ರ” ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಕೇಜ್ರಿವಾಲ್ ಕಳೆದ ತಿಂಗಳು ಘೋಷಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ
Isha Foundation; ಸನ್ಯಾಸ ತೆಗೆದುಕೊಳ್ಳಲು ನಾವು ಯಾರನ್ನೂ ಒತ್ತಾಯಿಸುವುದಿಲ್ಲ…
Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ
Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ
Manipur ಹಿಂಸಾಚಾರ: ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ಲೂಟಿಗೈದ ಗುಂಪು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Belthangady: ಮರದಿಂದ ಬಿದ್ದು ವ್ಯಕ್ತಿ ಸಾವು
Bailhongal: ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ… ಸ್ಥಳದಲ್ಲಿಯೇ ಬೈಕ್ ಸವಾರ ಸಾವು
Cricketer: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ರಶೀದ್ ಖಾನ್
Kasaragod: ಸ್ಕೂಟರ್ನಿಂದ ರಸ್ತೆಗೆ ಬಿದ್ದ ಮಹಿಳೆಯ ಮೇಲೆ ಕಂಟೈನರ್ ಲಾರಿ ಹರಿದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.