Wait And See…: ಪವನ್ ಕಲ್ಯಾಣ್ ‘ಸನಾತನ ಧರ್ಮ’ ಎಚ್ಚರಿಕೆಗೆ ಉದಯನಿಧಿ ಪ್ರತಿಕ್ರಿಯೆ
ನಗು ಬೀರಿ ನಾಲ್ಕೇ ಪದಗಳಲ್ಲಿ ಉತ್ತರಿಸಿದ ತಮಿಳುನಾಡು ಡಿಸಿಎಂ...!
Team Udayavani, Oct 4, 2024, 5:55 PM IST
ಚೆನ್ನೈ: ತಿರುಪತಿ ಲಡ್ಡು ಅಪವಿತ್ರ ವಿಚಾರದ ತೀವ್ರತೆ ತಣ್ಣಗಾದರೂ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್(Pawan Kalyan) ಮಾತ್ರ ತಮ್ಮ ವ್ರತ ಮತ್ತು ಹೇಳಿಕೆಗಳಿಂದ ನಿತ್ಯವೂ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಅವರು ಪರೋಕ್ಷವಾಗಿ ತಮಗೆ ನೀಡಿದ ಎಚ್ಚರಿಕೆಗೆ ತಮಿಳು ನಾಡು ಡಿಸಿಎಂ ಉದಯನಿಧಿ ಸ್ಟಾಲಿನ್(Udhayanidhi Stalin) ಶುಕ್ರವಾರ(ಅ4 ) ರಂದು ನಗು ಬೀರಿ ನಾಲ್ಕೇ ಪದಗಳ, ಕಾದು ನೋಡೋಣ…(Let’s wait and see…) ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಉದಯನಿಧಿ ಅವರು ನೀಡಿದ್ದ ‘ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ ಅದನ್ನು ನಾಶ ಮಾಡಬೇಕು” ಎಂಬ ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆಗೆ ಪವನ್ ಕಲ್ಯಾಣ್ ಅವರು ಗುರುವಾರ ತಿರುಪತಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಪರೋಕ್ಷವಾಗಿ ಹೆಸರು ಉಲ್ಲೇಖಿಸದೆ ಆಕ್ರೋಶ ಹೊರ ಹಾಕಿದ್ದರು.
‘ಸನಾತನ ಧರ್ಮ’ ಒಂದು ವೈರಸ್ನಂತೆ ಅದನ್ನು ನಾಶಪಡಿಸುತ್ತೇವೆ ಎಂದು ಹೇಳಬೇಡಿ. ಯಾರೇ ಹೇಳಿದರೂ ಹೇಳಲಿ.ನೀವು ಸನಾತನ ಧರ್ಮವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಯಾರಾದರೂ ಪ್ರಯತ್ನಿಸಿದರೆ ನೀವು ನಾಶವಾಗುತ್ತೀರಿ ”ಎಂದು ಕೇಸರಿ ವಸ್ತ್ರ ಧಾರಿಯಾಗಿದ್ದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದರು, ಮಾತ್ರವಲ್ಲದೆ ತಾನು ಎಲ್ಲ ಧರ್ಮಗಳನ್ನು ಗೌರವಿಸುವ ಕ್ಷಮೆಯಿಲ್ಲದ ಸನಾತನಿ ಹಿಂದೂ ಎಂದು ಘೋಷಿಸಿಕೊಂಡಿದ್ದರು.
ಡಿಎಂಕೆ ವಕ್ತಾರ ಡಾ.ಸೈಯದ್ ಹಫೀಜುಲ್ಲಾ ಪ್ರತಿಕ್ರಿಯಿಸಿ “ಡಿಎಂಕೆ ಯಾವುದೇ ಧರ್ಮ ಅಥವಾ ನಿರ್ದಿಷ್ಟವಾಗಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲ” ಆದರೆ ಜಾತಿ ದೌರ್ಜನ್ಯಗಳು, ಅಸ್ಪೃಶ್ಯತೆ ಮತ್ತು ಜಾತಿವಾದದ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತದೆ. ಬಿಜೆಪಿ, ಟಿಡಿಪಿ, ಮತ್ತು ಪವನ್ ಕಲ್ಯಾಣ್ ಅವರು ರಾಜಕೀಯ ಲಾಭಕ್ಕಾಗಿ ಧರ್ಮ ಮತ್ತು ಹಿಂದೂ ದೇವರುಗಳನ್ನು ಬಳಸುತ್ತಾರೆ. ಅವರೇ ನಿಜವಾದ ಶತ್ರುಗಳು. ಪವನ್ ಕಲ್ಯಾಣ್ ಹೇಳಿಕೆ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ
Isha Foundation; ಸನ್ಯಾಸ ತೆಗೆದುಕೊಳ್ಳಲು ನಾವು ಯಾರನ್ನೂ ಒತ್ತಾಯಿಸುವುದಿಲ್ಲ…
Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ
Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ
Manipur ಹಿಂಸಾಚಾರ: ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ಲೂಟಿಗೈದ ಗುಂಪು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.