ಲಂಡನ್: ಬಸವೇಶ್ವರ ಪ್ರತಿಮೆಗೆ ನಮನ
Team Udayavani, Oct 5, 2024, 10:05 AM IST
ಲಂಡನ್:ಪರಮಪೂಜ್ಯ ಜಗದ್ಗುರು ಶ್ರೀ ಡಿ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಲಂಡನ್ನಲ್ಲಿರುವ ಬಸವೇಶ್ವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬ್ರಿಟನ್ನ ಹಿಂದೂ ವೇದಿಕೆಯ ಮುಖ್ಯಸ್ಥೆ ತೃಪ್ತಿ ಪಟೇಲ್, ಶಾಸಕ ಸತೀಶ ರೆಡ್ಡಿ, ಕರ್ನಾಟಕ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷರಾದ ರಮೇಶ್, ಜಿಲ್ಲಾಧಿಕಾರಿ ಜಿಎಸ್ಟಿ ಮೊಹಮ್ಮದ್ ಪಾಷಾ, ದಿವ್ಯ ರಂಗೇನಹಳ್ಳಿ, ಹರೀಶ್ ರಾಮಯ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಸ್ವಾಮೀಜಿಯವರನ್ನು ಸಮ್ಮಾನಿಸಲಾಯಿತು.
ಯುನೈಟೆಡ್ ಕಿಂಗ್ಡಂ ನಾ ಬಸವ ಸಮಿತಿ ಮತ್ತು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗ್ರೇಟ್ ಬ್ರಿಟನ್ನ ಮೂರು ಕನ್ನಡ ಕೌನ್ಸಿಲರ್ಗಳಾದ ಕ| ರವಿ ವೆಂಕಟೇಶ್, ಕ| ಸುರೇಶ್ ಗಟ್ಟಾಪುರ ಮತ್ತು ಕ| ರಾಜೀವ್ ಮೆಟ್ರಿಯವರು ಇದರಲ್ಲಿ ಭಾಗಿಯಾಗಿದ್ದರು.
ಲಂಡನ್ ಬ್ಯುರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಡಾ| ನೀರಜ್ ಪಾಟೀಲ್, ಬಸವ ಸಮಿತಿಯ ಪಧಾದಿಕಾರಿಗಳಾದ ಅಭಿಜಿತ್ ಸಲಿಯಂತ್, ಅಜಿತ್ ಮೆನನ್ ದಾಸ್ ಮತ್ತು ರಂಗನಾಥ್ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯಗಳನ್ನು ಪ್ರತಿನಿಧಿಸುವ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.