ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ
Team Udayavani, Oct 5, 2024, 3:29 PM IST
ವಿಜಯಪುರ: ನಾನೊಬ್ಬ ಸಣ್ಣ ದಲಿತ. ಆದರೂ, ನನಗೆ ಮುಂದೆ ಗುರಿಗಳು ಇವೆ. ಹಿಂದೆ ಗುರುಗಳು ಇದ್ದಾರೆ. ನನ್ನ ಜೀವ ಇರುವವರಿಗೂ ಮತ್ತು ಆ ಗುರಿಗಳು ಈಡೇರುವವರೆಗೆ ನಾನು ನನ್ನ ಪ್ರಯತ್ನ ಬಿಡಲ್ಲ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಬಾವುಕರಾದರು.
ಜಿಲ್ಲೆಯ ಇಂಡಿ ತಾಲೂಕಿನ ಕ್ಯಾತನಕೇರಿ ಗ್ರಾಮದಲ್ಲಿ ಶನಿವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನನ್ನ ಪ್ರಯತ್ನ ಯಶಸ್ಸು ಆಗುತ್ತೋ, ಇಲ್ಲವೋ ಗೊತ್ತಿಲ್ಲ. ನನ್ನಂತಹ ದಲಿತರಿಗೆ ಒಳ್ಳೆಯದು ಆಗದಿದ್ದರೆ, ಮುಂದೆ ಯಾವ ದಲಿತರಿಗೂ ಒಳ್ಳೆಯದು ಆಗಲ್ಲ ಎಂಬುದು ಬಹಳ ಸ್ಪಷ್ಟ ಎಂದರು. ಈ ಮೂಲಕ ಮುಂದೆ ಬಿಜೆಪಿಗೆ ಬಹುಮತ ಬಂದರೆ ಮುಖ್ಯಮಂತ್ರಿ ಆಗುವ ಆಸೆಯನ್ನು ಜಿಗಜಿಣಗಿ ಬಿಚ್ಚಿಟ್ಟರು.
ನಾನು ಯಾರ ಮನ ನೋಯಿಸಿಲ್ಲ. ಯಾರ ಮನೆ ಮುರಿದಿಲ್ಲ. ಯಾರಿಗೂ ತೊಂದರೆಯನ್ನೂ ಮಾಡಿಲ್ಲ. ನನ್ನ ಜೀವನದಲ್ಲಿ ಕೆಲವು ಗುರಿಗಳು ಇವೆ. ನಮ್ಮಂತೋರು ಆಗದೇ ಇದ್ದರೆ, ಈ ದೇಶದಲ್ಲಿ ಮತ್ತ್ಯಾರು ಆಗುವವರು ಇದ್ದಾರೆ ಎಂದೂ ಪ್ರಶ್ನಿಸಿದರು.
ನಾನು 7 ಚುನಾವಣೆಗಳನ್ನು ಗೆದ್ದಿದ್ದೇನೆ. ಚಿಕ್ಕೋಡಿಯಲ್ಲಿ ಬೇರೆ-ಬೇರೆ ಪಕ್ಷದಿಂದ ಜನ ನನ್ನನ್ನು 3 ಸಲ ಗೆಲ್ಲಿಸಿದರು. ಮರಳಿ ಬಿಜಾಪುರಕ್ಕೆ ಬಂದೆ, ನೀವು 4 ಸಲ ಗೆಲ್ಲಿಸಿದಿರಿ. ಈ ಸಲ ನನ್ನನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದರು. ಕೋಟಿಗಟ್ಟಲೆ ಹಣ ಖರ್ಚು ಮಾಡಿದರು. ಆದರೆ, ನಾನು ‘ಪುಕ್ಕಟೆ ಗಿರಾಕಿ’ ಎಂದು ಹೇಳಿಕೊಂಡೇ ಪ್ರಚಾರ ಮಾಡಿದೆ ಎಂದರು.
ರಾಜಕಾರಣ ಮಾಡಲು ನಾವು ಹಣ ಎಲ್ಲಿಂದ ತರೋದು. ಹಣ ತರೋದು ಒಬ್ಬ ದಲಿತನಿಂದ ಸಾಧ್ಯ ಇದೆಯಾ?, ಮಕ್ಕಳು ದೊಡ್ಡೋರು ಆಗಿದ್ದಾರೆ. ಇರುವ ಆಸ್ತಿ ಮಾರಲು ಬಿಡಲ್ಲ. ನನ್ನದು ಒಣಗೈ ರಾಜಕಾರಣ. ಅದಕ್ಕೆ ನೀವು (ಜನ) ನನಗಾಗಿ ಒಂದು ದಿನ ಕೆಲಸ ಮಾಡಿ. ನಾನು ನಿಮಗಾಗಿ 5 ವರ್ಷ ಪುಕ್ಕಟೆ ಕೆಲಸ ಮಾಡುತ್ತೇನೆ ಅಂತಾ ಕೇಳಿಕೊಂಡೆ. ಅದಕ್ಕೆ ಜನರೂ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು.
ಜೀವನದಲ್ಲಿ ಹಣವಷ್ಟೇ ಮುಖ್ಯವಲ್ಲ, ನಡತೆಯೂ ಇರಬೇಕು. ಸಮಾಜ ಕೂಡ ಸೂಕ್ಷ್ಮವಾಗಿ ನೋಡುತ್ತದೆ. ಚುನಾವಣೆ ಬಂದರೆ ಎಲ್ಲ ರಾಜಕಾರಣಿಗಳು ತಮ್ಮ-ತಮ್ಮ ಸಮಾಜಗಳ ಹಿಂದೆ ಗಂಟು ಬೀಳುತ್ತಾರೆ. ನಾನು ಒಂದು ದಿನ ಸಹ ದಲಿತರ ಕೇರಿಗೆ ಹೋಗಿಲ್ಲ. ಹೋಗೋದು ಇಲ್ಲ. ಈ ಇಂತಹ ಧೈರ್ಯ ರಾಜಕಾರಣದಲ್ಲಿ ಯಾರಾದರೂ ಮಾಡ್ತಾರಾ?. ನಾನು 50 ವರ್ಷ ರಾಜಕಾರಣದಲ್ಲಿ ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.