Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Team Udayavani, Oct 5, 2024, 6:24 PM IST
ಲಕ್ನೋ: ಆಲ್ ರೌಂಡರ್ ತನುಷ್ ಕೋಟ್ಯಾನ್ (Tanush Kotian) ಅವರ ದಿಟ್ಟ ಹೋರಾಟದ ಫಲವಾಗಿ ಮುಂಬೈ ತಂಡವು 27 ವರ್ಷಗಳ ಬಳಿಕ ಇರಾನಿ ಕಪ್ (Irani Cup) ಗೆದ್ದ ಸಾಧನೆ ಮಾಡಿದೆ. ಶೇಷ ಭಾರತ ವಿರುದ್ದದ ಪಂದ್ಯವು ಡ್ರಾ ಆದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಕಾರಣದಿಂದ ಮುಂಬೈ ವಿಜಯಿಯಾಯಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಮುಂಬೈ ಬ್ಯಾಟಿಂಗ್ ಕುಸಿತ ಕಂಡರೂ ಗಟ್ಟಿಯಾಗಿ ನಿಂತ ತನುಷ್ ಕೋಟ್ಯಾನ್ ಅಜೇಯ ಶತಕ ಬಾರಿಸಿ ಮಿಂಚಿದರು. 150 ಎಸೆತ ಎದುರಿಸಿದ ತನುಷ್ 114 ರನ್ ಬಾರಿಸಿ ಔಟಾಗದೆ ಉಳಿದರು.
ಅವರು ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕವನ್ನು ಹೊಡೆದು ಮುಂಬೈಗೆ ಅಂತಿಮ ದಿನದಂದು ಕಠಿಣ ಪರಿಸ್ಥಿತಿಯನ್ನು ತಪ್ಪಿಸಲು ಸಹಾಯ ಮಾಡಿದರು. ಕೋಟ್ಯಾನ್ ಮತ್ತು ಮೋಹಿತ್ ಅವಸ್ಥಿ ಒಂಬತ್ತನೇ ವಿಕೆಟ್ ಗೆ 158 ರನ್ ಕಲೆ ಹಾಕಿದರು.
ಮುಂಬೈ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಅಪಾಯವನ್ನು ತಂದುಕೊಳಲಿಲ್ಲ. ಇರಾನಿ ಕಪ್ ಅನ್ನು ಭದ್ರಪಡಿಸಿಕೊಳ್ಳಲು ಮೊದಲ ಇನ್ನಿಂಗ್ಸ್ ಮುನ್ನಡೆ ಸಾಕು ಎಂದು ಗೊತ್ತಿದ್ದ ಮುಂಬೈ ನಾಯಕ ರಹಾನೆ, ರೆಸ್ಟ್ ಆಫ್ ಇಂಡಿಯಾವನ್ನು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಿಲ್ಲ.
ಅಜಿಂಕ್ಯ ರಹಾನೆ ಅವರ ಮುಂಬೈ ತಂಡವು ರಣಜಿ ಟ್ರೋಫಿ-ಇರಾನಿ ಕಪ್ ಡಬಲ್ ಅನ್ನು ಪೂರ್ಣಗೊಳಿಸಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ 537 ಮತ್ತು 329ಕ್ಕೆ 8, ರೆಸ್ಟ್ ಆಫ್ ಇಂಡಿಯಾ: 416
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.