Areca nut; ಬಳಲಿರುವ ಅಡಿಕೆಗೆ ಚೀನ ವೈರಸ್ ಸಿಡಿಲು!
ಚೀನದಲ್ಲಿ ಮೊದಲು ಪತ್ತೆಯಾಗಿದ್ದ ಈ ವೈರಸ್ ಈಗ ದ.ಕ., ಉತ್ತರ ಕನ್ನಡದಲ್ಲೂ ಗೋಚರ
Team Udayavani, Oct 6, 2024, 7:00 AM IST
ಮಂಗಳೂರು: ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರಿಗೆ ಈಗ ಹೊಸ ರೋಗದ ಭೀತಿ ಮೂಡಿದೆ. ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ ಬರುತ್ತಿತ್ತು. ಇದೇ ಮೊದಲ ಬಾರಿ ವೈರಸ್ ಬಾಧಿಸಿದೆ. ಇದನ್ನು ತೋಟಗಾರಿಕೆ ವಿಜ್ಞಾನಿಗಳು “ರಿಂಗ್ ಸ್ಪಾಟ್ ಡಿಸೀಸ್’ ಎಂದು ಗುರುತಿಸಿದ್ದಾರೆ. 2023ರಲ್ಲೇ ಈ ರೋಗ ಲಕ್ಷಣ ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಕಾಣಿಸಿಕೊಂಡಿತ್ತು.
ಎಲೆ ಚುಕ್ಕಿ ರೋಗವೆಂದೇ ಕೃಷಿಕರೂ ಭಾವಿಸಿದ್ದರು. ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿದ ಸಿಪಿಸಿಆರ್ಐ ವಿಜ್ಞಾನಿಗಳು ಇದು ಅರೆಪಾ ವೈರಸ್ ವರ್ಗಕ್ಕೆ ಸೇರಿದ ಹೊಸ ನೆಕ್ರೋಟಿಕ್ ರಿಂಗ್ ಸ್ಪಾಟ್ ವೈರಸ್ 2 (ಎಎನ್ಆರ್ಎಸ್ವಿ2) ಎಂದು ಖಚಿತಪಡಿಸಿದ್ದಾರೆ.
ಚೀನದಲ್ಲಿ ಮೊದಲು ಗೋಚರ!
ಮನುಕುಲವನ್ನು ಕಂಗೆಡಿಸಿದ ಕೋವಿಡ್ ಕಾಣಿಸಿಕೊಂಡಿದ್ದ ಚೀನದಲ್ಲೇ ಅಡಿಕೆಗೆ ತಗಲಿರುವ ವೈರಸ್ ಕೂಡ 2018ರಲ್ಲಿ ಮೊದಲು ಕಾಣಿಸಿಕೊಂಡಿತ್ತು. ಅಲ್ಲಿನ ವಿಜ್ಞಾನಿಗಳು ವಿವರಿಸುವಂತಹ ಲಕ್ಷಣಗಳು ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ತೋಟಗಳಲ್ಲೂ ಕಾಣಿಸಿಕೊಂಡಿರುವುದಾಗಿ ಸಿಪಿಸಿಆರ್ಐ ತಜ್ಞರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕುಂಡಡ್ಕ, ನೇರಳಕಟ್ಟೆಯಿಂದ ಇದಕ್ಕೆ ಪೂರಕವಾದ ಮಾದರಿ ಸಂಗ್ರಹಿಸಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಎನ್ಆರ್ಎಸ್ವಿ 2 ಎಂದು ಖಚಿತಪಡಿಸಲಾಗಿದೆ. ಶಿರಸಿ, ಶಿವಮೊಗ್ಗ, ಮೈಸೂರಿನ ಕೆಲವು ತೋಟಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಿಪಿಸಿಆರ್ಐ ವಿಜ್ಞಾನಿ ಡಾ| ವಿನಾಯಕ ಹೆಗ್ಡೆ ತಿಳಿಸಿದ್ದಾರೆ.
ಎಚ್ಚರಿಕೆ ಬೇಕು: ಇದೊಂದು ಹೊಸ ಗಿಡವನ್ನು ಬಾಧಿಸುವ ವೈರಸ್ ಆಗಿದ್ದು, ಅದರ ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ವೈರಸ್ ತಗಲುವುದು ಎಂದರೆ ಗಿಡಕ್ಕೆ ಕ್ಯಾನ್ಸರ್ ಬಾಧಿಸಿದಂತೆಯೇ. ರೋಗಗ್ರಸ್ತ ಮರಗಳ ನಿರ್ಮೂಲನೆ ಮತ್ತು ರೋಗವಾಹಕ ಕೀಟಗಳ ನಿಯಂತ್ರಣವಷ್ಟೇ ಸದ್ಯಕ್ಕಿರುವ ಪರಿಹಾರ ಕ್ರಮ. ಹೆಚ್ಚಿನ ಸಂಶೋಧನೆ ಆಗಬೇಕಿದೆ ಎನ್ನುತ್ತಾರೆ ಡಾ| ವಿನಾಯಕ ಹೆಗ್ಡೆ.
ಲಕ್ಷಣಗಳೇನು?
ಹಸುರು ಸೋಗೆಗಳಲ್ಲಿ ಮಚ್ಚೆ ರೀತಿಯಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ವೈರಸ್ಗಳು ಹರಿತ್ತನ್ನು ತಿನ್ನುತ್ತಾ ಹೋಗುತ್ತವೆ. ಸೋಗೆ ಸೊರಗುತ್ತಾ ಹೋಗಿ ಮರ ಸಾಯುವ ಪರಿಸ್ಥಿತಿ ಎದುರಾಗಬಹುದು.
ಕೀಟ ಯಾವುದು?
ರೋಗ ತೋಟದಿಂದ ತೋಟಕ್ಕೆ ರೋಗ ಹರಡುತ್ತದೆ. ವೈರಸ್ ಹರಡಬೇಕಾದರೆ ವಾಹಕವಾಗಿ ಯಾವುದಾದರೂ ಕೀಟ ಬೇಕಾಗುತ್ತದೆ. ರಿಂಗ್ಸ್ಪಾಟ್ ವೈರಸ್ ಹರಡುವ ಕೀಟ ಯಾವುದು ಎನ್ನುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಮೀಲಿ ಬಗ್ ಎನ್ನುವ ಬಿಳಿ ಕೀಟವಿರಬಹುದು ಎನ್ನುವ ಸಂಶಯವಷ್ಟೇ ಇದೆ.
ರಿಂಗ್ ಸ್ಪಾಟ್ ರೋಗ ಹಲವು ಕಡೆ ವರದಿಯಾಗಿದೆ. ಕಳೆದ ವರ್ಷವೇ ನಿಗಾ ಇರಿಸಿದ್ದೆವು. ಈಗ ಅದು ವೈರಸ್ ಬಾಧಿತ ರೋಗ ಎನ್ನುವುದು ದೃಢಪಟ್ಟಿದೆ. ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ ಸ್ಥಳೀಯ ತೋಟಗಾರಿಕೆ ಇಲಾಖೆ ಅಥವಾ ಸಿಪಿಸಿಆರ್ಐ ಗಮನಕ್ಕೆ ತರಬಹುದು.
– ಡಾ| ಬಾಲಚಂದ್ರ ಹೆಬ್ಟಾರ್, ನಿರ್ದೇಶಕರು, ಸಿಪಿಸಿಆರ್ಐ ಕಾಸರಗೋಡು
*ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!
Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್ ಚೌಟ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.