![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 6, 2024, 8:30 PM IST
ಕುಂದಾಪುರ: ತಲ್ಲೂರು ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಟಾಟಾ ಏಸ್ ಗೂಡ್ಸ್ ವಾಹನದ ಪ್ಲಾಟ್ಫಾರ್ಮ್ ಕೆಳಗೆ ವಿಶೇಷ ಕಂಪಾರ್ಟ್ಮೆಂಟ್ ರಚಿಸಿ ಅಕ್ರಮವಾಗಿ 20.250 ಲೀ. ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿರುವುದನ್ನು ಕುಂದಾಪುರ ವಲಯ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ ಪತ್ತೆಹಚ್ಚಿ 3.26 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಆನಗಳ್ಳಿ ಗ್ರಾಮದ ಕಂಪನತಪ್ಪಲು ನೆಲ್ಸನ್ ಡಿ’ಸೋಜಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಕಾನ್ಸ್ಟೆಬಲ್ ರವಿಚಂದ್ರ ನಾಯ್ಕ, ಅಬಕಾರಿ ಹೆಡ್ ಕಾನ್ಸ್ಟೆಬಲ್ ಶಂಕ್ರಪ್ಪ, ವಾಹನ ಚಾಲಕ ಚಂದ್ರಶೇಖರ್ ಭಾಗವಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.