Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

ಒಂದೇ ದಿನ ಅಪ್ಪ, ಅಮ್ಮ, ಅಜ್ಜಿಯನ್ನು ಕಳೆದುಕೊಂಡು ಅನಾಥರಾದ ಸೂರಜ್..‌

Team Udayavani, Oct 7, 2024, 9:27 AM IST

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

ಮುಂಬಯಿ: ಬಿಗ್‌ ಬಾಸ್‌ ಮರಾಠಿ-5 (Bigg Boss Marathi 5) ಮುಕ್ತಾಯವಾಗಿದೆ. ಟಾಪ್‌ 3 ಫಿನಾಲೆ ಸ್ಪರ್ಧಿಗಳ ಪೈಕಿ ಒಬ್ಬರು ಟ್ರೋಫಿ ಹಾಗೂ ನಗದನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾನುವಾರ (ಅ.6ರಂದು) ಮರಾಠಿ ಬಿಗ್‌ ಬಾಸ್‌ ಸೀಸನ್‌ -5 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ರಿತೇಶ್ ದೇಶಮುಖ್ (Riteish Deshmukh) ನಡೆಸಿಕೊಡುವ ಮರಾಠಿ ಬಿಗ್‌ ಬಾಸ್‌ ಫಿನಾಲೆಯಲ್ಲಿ ಸೂರಜ್ ಚವಾಣ್, ಅಭಿಜೀತ್ ಸಾವಂತ್ ಮತ್ತು ನಿಕ್ಕಿ ತಾಂಬೋಲಿ ಟಾಪ್‌ 3 ಫೈನಾಲಿಸ್ಟ್‌ ಆಗಿದ್ದರು.

ಇದರಲ್ಲಿ ಪ್ರೇಕ್ಷಕರು ಅತೀ ಹೆಚ್ಚು ಮತವನ್ನು ಸೂರಜ್‌ ಚವಾಣ್‌ (Suraj Chavan) ಅವರಿಗೆ ಹಾಕಿದ್ದು ಆ ಮೂಲಕ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಅಭಿಜಿತ್‌ ಸಾವಂತ್‌ (Abhijeet Sawant) ಫಸ್ಟ್‌ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ.

ಸೂರಜ್‌ ಗೆದ್ದ ಮೊತ್ತವೆಷ್ಟು..? : ಬಿಗ್ ಬಾಸ್ ಮರಾಠಿ 5ರ ಟ್ರೋಫಿಯನ್ನು ಎತ್ತಿದ್ದ ಸೂರಜ್ 14.6 ಲಕ್ಷ ರೂ. ನಗದು ಬಹುಮಾನ ಹಾಗೂ ಇದರೊಂದಿಗೆ ಇವಿ ಬೈಕ್‌ ಕೂಡ ಬಹುಮಾನವಾಗಿ ಗೆದ್ದುಕೊಂಡಿದ್ದಾರೆ.

ಯಾರು ಈ ಸೂರಜ್‌..  ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿರುವ ಸೂರಜ್‌ ಕಂಟೆಂಟ್‌ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮೋಧವೆ ಗ್ರಾಮದವರಾದ ಸೂರಜ್‌ ತನ್ನ ಮನರಂಜನೆಯ ರೀಲ್ಸ್‌ ವಿಡಿಯೋಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರ ರೀಲ್ಸ್‌ ಗಳ ಜನಪ್ರಿಯತೆ ಅವರನ್ನು ಬಿಗ್‌ ಬಾಸ್‌ ವೇದಿಕೆ ಹತ್ತಿಸಿ ಟ್ರೋಫಿ ಗೆಲ್ಲುವಂತೆ ಮಾಡಿದೆ.

ಅಮ್ಮ- ಅಮ್ಮನ ಸಾವು.. ಅನಾಥನಾಗಿ ಬೆಳೆದ ಹುಡುಗ..: ಸೂರಜ್‌ ವಿಡಿಯೋಗಳ ಮೂಲಕ ಸಾವಿರಾರು ಮಂದಿಯನ್ನು ರಂಜಿಸುತ್ತಾರೆ. ಆದರೆ ಅವರ ಆರಂಭಿಕ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ, ಕಲ್ಲು ಹಾದಿಯಲ್ಲಿ ಸಾಗಿದಂತಿದೆ.

ಬಡ ಕುಟುಂಬದಲ್ಲಿ ಬೆಳದ ಸೂರಜ್‌ ಕ್ಯಾನ್ಸರ್‌ ಕಾಯಿಲೆಯಿಂದ ತನ್ನ ಅಪ್ಪನನ್ನು ಕಳೆದುಕೊಳ್ಳುತ್ತಾರೆ. ಆದರೆ ವಿಧಿಯ ಆಟ ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತದೆ. ತನ್ನ ತಂದೆ ತೀರಿ ಹೋದ ಅದೇ ದಿನ ತನ್ನ ತಾಯಿ, ಅಜ್ಜಿಯನ್ನೂ ಸೂರಜ್‌ ಕಳೆದುಕೊಂಡು ಅನಾಥರಾಗುತ್ತಾರೆ.

ಸಣ್ಣ ವಯಸ್ಸಿನಲ್ಲೇ ಸೂರಜ್‌ ತನ್ನ ಐವರು ಸಹೋದರಿಯರನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಆರಂಭದಲ್ಲಿ ತೀರ ಕಷ್ಟಪಟ್ಟು ಸಹೋದರಿಯರನ್ನು ನೋಡಿಕೊಳ್ಳುತ್ತಾ, ದುಡಿಮೆಯ ಹಾದಿಯನ್ನು ಹಿಡಿಯುತ್ತಾರೆ.

 

View this post on Instagram

 

A post shared by Colors Marathi (@colorsmarathi)

ತನ್ನ ಮನೆ ಪಕ್ಕದ ಜಮೀನಿನಲ್ಲಿ ರೀಲ್ಸ್‌ ಮಾಡುತ್ತಾ, ಡೈಲಾಗ್ಸ್‌ ಗಳನ್ನು ಹೊಡೆಯುತ್ತಾ, ಡ್ಯಾನ್ಸ್‌ ಮಾಡುತ್ತಾ ಹೆಚ್ಚಿನ ಫಾಲೋವರ್ಸ್ ಗಳನ್ನು ಗಳಿಸಿರುವ ಸೂರಜ್‌ ಇಂದು ಸೋಶಿಯಲ್‌ ಮೀಡಿಯಾದಲ್ಲಿ ಪ್ರಭಾವಿ ಆಗಿ ಹೊರಹೊಮ್ಮಿದ್ದಾರೆ.

ತನ್ನ ವಿಭಿನ್ನ ಹಾಸ್ಯದ ಶೈಲಿಯ ವಿಡಿಯೋಗಳಿಂದ ಇಂಟರ್‌ ನೆಟ್‌ ನಲ್ಲಿ ಸದ್ದು ಮಾಡಿದ ಸೂರಜ್‌ ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ʼರಾಜಾ ರಾಣಿʼ , ʼಮುಸಂಡಿʼ ಚಿತ್ರಗಳಲ್ಲಿ ಅವರಿಗೆ ಇನ್ಸ್ಟಾಗ್ರಾಮ್‌ ನಲ್ಲಿ 2.1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ.

ವರದಿಗಳ ಪ್ರಕಾರ ಬಿಗ್‌ಬಾಸ್‌ ನಲ್ಲಿ ಸೂರಜ್‌ ವಾರಕ್ಕೆ 25 ಸಾವಿರ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.

ಟಾಪ್ ನ್ಯೂಸ್

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!

ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!

Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್‌ ಟಾಟಾ

Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್‌ ಟಾಟಾ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Maldives: ಮಾಲ್ಡೀವ್ಸ್‌ ಗೆ ಭಾರತದ ನೆರವು, ರಕ್ಷಣೆ ಬೇಕಾಗಿದೆ: ಮೊಹಮ್ಮದ್‌ ಮುಯಿಜ್ಜು

Maldives: ಮಾಲ್ಡೀವ್ಸ್‌ ಗೆ ಭಾರತದ ನೆರವು, ರಕ್ಷಣೆ ಬೇಕಾಗಿದೆ: ಮೊಹಮ್ಮದ್‌ ಮುಯಿಜ್ಜು

Vijayalakshmi arrived at Bellary Jail to meet Darshan

Bellary Jail: ದರ್ಶನ್‌ ಭೇಟಿಗೆಂದು ಬಳ್ಳಾರಿ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!

ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!

Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್‌ ಟಾಟಾ

Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್‌ ಟಾಟಾ

Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ

Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.