Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ


Team Udayavani, Oct 8, 2024, 8:00 AM IST

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

ರಾಕ್ಷಸೀಗುಣ ಎನ್ನುವುದು ಪೂರ್ತಿಯಾಗಿ ಕೆಟ್ಟದ್ದು ಅಂದರೆ ಸರಿನೋ ತಪ್ಪೋ ಗೊತ್ತಿಲ್ಲ. ಯಾಕೆಂದರೆ ಆ ರಾಕ್ಷಸೀಗುಣದ ಮೇಲೆ ಹಿಡಿತವನ್ನು ಸ್ಥಾಪಿಸಿದಾಗಲೇ ಅಲ್ಲವೇ, ಅದೆಷ್ಟೋ ಮಹಾ ಪುರುಷರು ಜನ್ಮತಾಳಿದ್ದು.

ದರೋಡೆಕೋರನ ಸುತ್ತ ವಲ್ಮೀಕ ಬೆಳೆದಾಗಲೇ ಅಲ್ಲವೇ ಅವನು ವಾಲ್ಮೀಕಿಯಾಗಿದ್ದು. ಸೀತೆಯನ್ನ ಅಪಹರಿಸಿದ ಆ ರಾವಣ ಕೂಡ ಪರಶಿವನ ಮಹಾ ಭಕ್ತನೇ. ಹೀಗೆ ಈ ರಾಕ್ಷಸ ಗುಣಗಳ ಬಗ್ಗೆ ಯೋಚಿಸ್ತಾ ಇದ್ದಾಗ ಹಿಡಿಂಬೆಯ ಕಥೆ ನೆನಪಾಯಿತು.

ಮಹಾಭಾರತದಲ್ಲಿ ಹುಡುಕಿದಷ್ಟು ಸಿಗುವ ಅಮೂಲ್ಯ ಪಾತ್ರಗಳಲ್ಲಿ ಹಿಡಿಂಬೆ ಕೂಡ ಒಬ್ಬಳು.

ಹಿಡಿಂಬ ರಕ್ಕಸನ ತಂಗಿಯಾದ ಹಿಡಿಂಬೆ, ನರ ಭಕ್ಷಕಿ ರಕ್ಕಸಿ ಆದರೂ, ಅಂದು ಭೀಮನನ್ನು ನೋಡಿದಾಗ ಅವಳಲ್ಲಿ ಅರಳಿದ ಪ್ರೀತಿ ನಿಜಕ್ಕೂ ಆಶ್ಚರ್ಯಕರ. ಹಾಗಾದರೆ ಪ್ರೀತಿ ಎನ್ನುವುದು ಯಾವ ಮುಳ್ಳಿನ ರಾಶಿಯನ್ನೂ ಹೂವಾಗಿಸಬಹುದಲ್ವ?

ರಕ್ಕಸಿಯ ಮನದಲ್ಲೂ ಅರಳಿದ ಪ್ರೀತಿಯ ಈ ಕಥನ ಅದೆಷ್ಟೋ ಇಂದಿನ ಪ್ರೇಮಿಗಳಿಗೆ ಕೂಡ ಉದಾಹರಣೆ ಅಂದರೆ ತಪ್ಪಿಲ್ಲವೇನೋ.

ಹಲವಾರು ವರ್ಷಗಳಿಂದ ತಾನು ಬೆಳೆಸಿದ ಅಭ್ಯಾಸಗಳನ್ನೇ ಬಿಡಲಾಗದು ಎನ್ನುವ ಕಾರಣಕ್ಕೆ ದೂರಾವಾಗುವ ಈಗಿನ ಕಾಲದ ಪ್ರೇಮಿಗಳ ನಡುವೆ, ನರಭಕ್ಷಕ ರಕ್ಕಸಿಯೊಬ್ಬಳು ಪ್ರೀತಿಸಿ ಮದುವೆಯಾಗಿ ಕೊನೆಗೆ ತನ್ನ ಬದುಕನ್ನೇ ಬದಲಿಸಿದ ಈ ಕಥೆ ಮಹಾಭಾರತದ ಕವಲುಗಳಲ್ಲಿ ನನಗೆ ಪ್ರಿಯವಾದದ್ದು.

ಕೆಲವೇ ದಿನಗಳಲ್ಲಿ ಆ ಪ್ರೀತಿ ಕೈ ಬಿಟ್ಟು ಹೋದರು ಕೂಡ ಕಷ್ಟ ಕಾಲಕ್ಕೆ ಜೊತೆಯಾಗಿ ಪಾಂಡವರ ಸಾಲಲ್ಲಿ ಹಿಡಿಂಬೆಯ ಮಗ ಘಟೋತ್ಕಚ ಯುದ್ಧಕ್ಕೆ ನಿಂತಿದ್ದ. ಕೊನೆಗೆ ಅವನಲ್ಲಿದ್ದ ರಾಕ್ಷಸ ಗುಣದ ಸಂಹಾರಕ್ಕೆ ಕರ್ಣ ಇಂದ್ರಾಸ್ತ್ರವನ್ನು ಪ್ರಯೋಗಿಸಬೇಕಾಯಿತು ಎಂದಾದರೆ ರಾಕ್ಷಸ ಗುಣದಲ್ಲೂ ಭಗವಂತನ ಪಕ್ಷದಲ್ಲಿ ನಿಲ್ಲುವಷ್ಟು ಬಲಿಷ್ಠ ಸಂಸ್ಕಾರ ನೀಡಿ ಬೆಳೆಸಿದ ಆ ರಾಕ್ಷಸಿಯ ಒಳಗಿರುವ ಅಪಾರವಾದ ಆ ಶಕ್ತಿ “ತಾಯಿ” ಅಲ್ವಾ?

ಕೆಸರಲ್ಲಿ ಅರಳಿದ ಕಮಲದಂತೆ, ರಾಕ್ಷಸಿಯ ಒಳಗೆ ಬೆಳಗಿದ ತಾಯ್ತನದ ಈ ಕಥನ ಮಹಾಭಾರತದ ನಡುವಿನ ಅಮೂಲ್ಯ ರತ್ನ.

ತೇಜಸ್ವಿನಿ

ಟಾಪ್ ನ್ಯೂಸ್

ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು

ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Haryana Results: ಬಿಜೆಪಿಯ ಕ್ಯಾಪ್ಟನ್‌ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!

Haryana Results: ಬಿಜೆಪಿಯ ಕ್ಯಾಪ್ಟನ್‌ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!

Ballari: ಮಧ್ಯಾರಾತ್ರಿ ಆರ್ ಟಿಓ‌ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

Ballari: ಮಧ್ಯಾರಾತ್ರಿ ಆರ್ ಟಿಓ‌ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

1

Food Poisoning: ಮಗು ಸಾವು, ಅಪ್ಪ- ಅಮ್ಮ ಅಸ್ವಸ್ಥ

Result 2024:ಜಮ್ಮು-ಕಾಶ್ಮೀರದಲ್ಲಿ ಕೈ ಮೈತ್ರಿ ಗದ್ದುಗೆಯತ್ತ‌,ಹರ್ಯಾಣದಲ್ಲಿ ತೀವ್ರ ಪೈಪೋಟಿ

Result 2024:ಜಮ್ಮು-ಕಾಶ್ಮೀರದಲ್ಲಿ ಕೈ ಮೈತ್ರಿ ಗದ್ದುಗೆಯತ್ತ‌,ಹರ್ಯಾಣದಲ್ಲಿ ತೀವ್ರ ಪೈಪೋಟಿ

Thirthahalli; ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

Thirthahalli; ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri Special: ತಾಯ್ತನ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು

ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Haryana Results: ಬಿಜೆಪಿಯ ಕ್ಯಾಪ್ಟನ್‌ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!

Haryana Results: ಬಿಜೆಪಿಯ ಕ್ಯಾಪ್ಟನ್‌ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!

Ballari: ಮಧ್ಯಾರಾತ್ರಿ ಆರ್ ಟಿಓ‌ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

Ballari: ಮಧ್ಯಾರಾತ್ರಿ ಆರ್ ಟಿಓ‌ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.