Vijayapura: ಮಿಸ್ಟರ್ ಯತ್ನಾಳ್, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್
ʼವಕ್ಫ್ ಜಮೀನು ಎಲ್ಲಿ ಅತಿಕ್ರಮಣವಾಗಿದೆಯೋ ಅಲ್ಲಿ ತೆರವುಗೊಳಿಸಿ ತಂತಿ ಬೇಲಿ ಹಾಕುವ ಕಾರ್ಯ ಮಾಡುವೆವುʼ
Team Udayavani, Oct 7, 2024, 9:01 PM IST
ವಿಜಯಪುರ: ವಕ್ಫ್ ಬೋರ್ಡ್ ಆಸ್ತಿ ಎನ್ನುವುದು ದಾನ ಕೊಟ್ಟಿರುವ ಆಸ್ತಿ, ಮಿಸ್ಟರ್ ಯತ್ನಾಳ್ ಇದು ನಿಮ್ಮಪ್ಪನ ಆಸ್ತಿಯೂ ಅಲ್ಲ, ನನ್ನಪ್ಪನ ಆಸ್ತಿಯೂ ಇಲ್ಲ. ಇದು ಯಾರಪ್ಪನ ಆಸ್ತಿಯೂ ಅಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಟಾಂಗ್ ನೀಡಿದರು.
ನಗರದಲ್ಲಿ ಸೋಮವಾರ ನಡೆದ ವಕ್ಫ್ ಅದಾಲತ್ನಲ್ಲಿ ಮಾತನಾಡಿ, ವಕ್ಫ್ ಆಸ್ತಿ ಬಗ್ಗೆ ಯತ್ನಾಳ್ ಹೆಚ್ಚಾಗಿ ಮಾತನಾಡುತ್ತಾರೆ. ಆದರೆ, ಒಂದೇ ಒಂದು ಇಂಚು ಸರ್ಕಾರದ ಜಮೀನನ್ನು ವಕ್ಫ್ ಮಂಡಳಿ ಪಡೆದುಕೊಂಡಿಲ್ಲ. ಇದನ್ನು ತಿಳಿದು ಯತ್ನಾಳ್ ಮಾತನಾಡಬೇಕು. ದೊಡ್ಡದಾದ ಜಮೀನು ಖಾಲಿ ಉಳಿಸಿಕೊಂಡ ಪರಿಣಾಮ ಕೆಲವರ ಕಣ್ಣು ಕುಕ್ಕುತ್ತಿದೆ. ವಕ್ಫ್ ಜಮೀನು ಎಲ್ಲಿ ಅತಿಕ್ರಮಣವಾಗಿದೆಯೋ ಅದನ್ನು ತೆರವುಗೊಳಿಸಿ ಗೋಡೆ, ತಂತಿ ಬೇಲಿ ಹಾಕಿ ಸುರಕ್ಷಿತವಾಗಿರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಕ್ಫ್ ಬೋರ್ಡ್ ವತಿಯಿಂದಲೇ 15 ಜಿಲ್ಲೆಗಳಲ್ಲಿ ಅತ್ಯಾಧುನಿಕ ಕಾಲೇಜು ಆರಂಭಿಸಲಾಗುವುದು. ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದೆ. ನಮ್ಮ ಸರ್ಕಾರದ ಆಡಳಿತ ಇನ್ನೂ ಮೂರೂವರೆ ವರ್ಷ ಇದೆ. ಅಷ್ಟರೊಳಗೆ ಎಲ್ಲ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಿಸುವ ಉದ್ದೇಶ ಇದೆ. ಅಲ್ಲದೇ, ಮನೆಗಳನ್ನು ನಿರ್ಮಿಸಿ, ಮನೆರಹಿತರಿಗೆ ಕೇವಲ ಐದಾರು ನೂರು ರೂಪಾಯಿಗೆ ಮನೆ ಬಾಡಿಗೆ ನೀಡುವ ಯೋಜನೆ ಇದೆ. ಇದರಿಂದ ವಕ್ಫ್ ಬೋರ್ಡ್ ಗೆ ಆದಾಯವೂ ಬರಲಿದೆ. ಅಷ್ಟೇ ಅಲ್ಲ, ಹಣ ಮಾಡುವ ಉದ್ದೇಶ ಹೊಂದಿರುವ ಅಧಿಕಾರಿಗಳಿಗೆ ವಕ್ಫ ಇಲಾಖೆಯಲ್ಲಿ ಜಾಗ ಇಲ್ಲ. ಇಂತಹ ಅಧಿಕಾರಿಗಳಿಗೆ ಬೇಕಾದರೆ ನಾನೇ ಬೇರೆ ಇಲಾಖೆಗೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿರುವೆ ಎಂದು ಜಮೀರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ
ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ
Vijayapura; ಮಹಿಳೆಯ ಕೊ*ಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ
Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ
PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ
Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.