Relationship Build: ರಾಜಧಾನಿ ಬೆಂಗಳೂರಲ್ಲಿ ಮಾಲ್ದೀವ್ಸ್ ದೂತಾವಾಸ ಕಚೇರಿ ಶೀಘ್ರ ಸ್ಥಾಪನೆ
ದಿಲ್ಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾಗಿ ಮಾಲ್ದೀವ್ಸ್ ಅಧ್ಯಕ್ಷ ಮುಯಿಜ್ಜು ಮಾತು
Team Udayavani, Oct 8, 2024, 7:50 AM IST
ಹೊಸದಿಲ್ಲಿ: ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮತ್ತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಮಾಲ್ದೀವ್ಸ್ನ ದೂತಾವಾಸ ಕಚೇರಿ ಸ್ಥಾಪನೆಗೆ ಸಮ್ಮತಿ ನೀಡಲಾಗಿದೆ.
ರವಿವಾರ ಹೊಸದಿಲ್ಲಿಗೆ ಆಗಮಿಸಿದ್ದ ಮುಯಿಜ್ಜು ಅವರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಬಳಿಕ ಪ್ರಧಾನಿ ಮೋದಿ ಅವರನ್ನು ಮುಯಿಜ್ಜು ಭೇಟಿಯಾಗಿದ್ದಾರೆ. ಈ ವೇಳೆ ಸಾಗರ ಭದ್ರತೆ, ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಮಾಲ್ದೀವ್ಸ್ನ ಆಯ್ದ ನಗರಗಳಲ್ಲಿ ಭಾರತದ ದೂತಾ ವಾಸ, ಬೆಂಗಳೂರಿನಲ್ಲಿ ಮಾಲ್ದೀವ್ಸ್ನ ದೂತವಾಸ ಕಚೇರಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ, ಮಾಲ್ದೀವ್ಸ್ ಜತೆಗಿನ 400 ದಶಲಕ್ಷ ಡಾಲರ್ ವಿದೇಶಿ ಕರೆನ್ಸಿ ವಿನಿಮಯ ಒಪ್ಪಂದದ ಜತೆಗೆ ಹೆಚ್ಚುವರಿಯಾಗಿ 360 ದಶಲಕ್ಷ ಡಾಲರ್ ವಿನಿಮಯಕ್ಕೂ ಭಾರತ ಅನುಮತಿಸಿದೆ. ಈ ಮೂಲಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿರುವ ಮಾಲ್ದೀವ್ಸ್ಗೆ ಭಾರತ ಬಲ ನೀಡಿದಂತಾಗಿದೆ.
ರುಪೇ ಕಾರ್ಡ್ಗೆ ಚಾಲನೆ:
ಭಾರತದಿಂದ ಮಾಲ್ದೀವ್ಸ್ಗೆ ತೆರಳುವ ಹಾಗೂ ಅಲ್ಲಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಣಕಾಸು ವಹಿವಾಟು ಸುಲ ಭ ಗೊಳಿಸುವ ನಿಟ್ಟಿನಲ್ಲಿ ಭಾರತದ ರುಪೇ ಕಾರ್ಡ್ ಗಳನ್ನು ಮಾಲ್ದೀವ್ಸ್ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.
ಜನೌಷಧಿ ಕೇಂದ್ರ:
ಉಭಯ ರಾಷ್ಟ್ರಗಳ ನಡುವಿನ ಆರೋಗ್ಯ ಸಹಕಾರದ ಭಾಗವಾಗಿ ಮಾಲ್ದೀವ್ಸ್ ಜನತೆಗೆ ಗುಣಮಟ್ಟದ ಜನೆರಿಕ್ ಔಷಧಿಗಳನ್ನು ಒದಗಿಸಿಕೊಡುವುದಕ್ಕಾಗಿ ಮಾಲ್ದೀವ್ಸ್ನಾದ್ಯಂತ ಜನೌ ಷಧಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
ಭಾರತದ ಭದ್ರತೆಗೆ ಧಕ್ಕೆ ತರುವುದಿಲ್ಲ: ಅಧ್ಯಕ್ಷ ಮುಯಿಜ್ಜು
ಚೀನಪರ ನಿಲುವುಗಳಿಂದಲೇ ಪ್ರಖ್ಯಾತರಾಗಿ ರುವ ಮುಯಿಜ್ಜು ಭಾರತ ಭೇಟಿ ವೇಳೆ ತಮ್ಮ ವರಸೆ ಬದಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು “ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರ. ಮಾಲ್ದೀವ್ಸ್ ಮೊದಲು ಎನ್ನುವ ನೀತಿ ನಮ್ಮದಾದರೂ ಭಾರತವನ್ನು ಆದ್ಯತೆಯಾಗಿ ಪರಿಗಣಿಸುವುದನ್ನು ನಿಲ್ಲಿಸುವುದಿಲ್ಲ. ನಮ್ಮ ದೇಶದ ಅಭಿವೃದ್ಧಿಗಾಗಿ ವಿದೇಶಗಳೊಂದಿಗೆ ನಾವು ಸಹಕಾರ ಹೆಚ್ಚಿಸಿಕೊಳ್ಳಬೇಕಿದೆ. ಆದರೆ ನಮ್ಮ ನಿಲುವುನಿಂದ ಭಾರತದ ಭದ್ರತೆಗೂ ಧಕ್ಕೆ ಬಾರದಂತೆ ಖಾತರಿಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana Results: ಬಿಜೆಪಿಯ ಕ್ಯಾಪ್ಟನ್ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!
Result 2024:ಜಮ್ಮು-ಕಾಶ್ಮೀರದಲ್ಲಿ ಕೈ ಮೈತ್ರಿ ಗದ್ದುಗೆಯತ್ತ,ಹರ್ಯಾಣದಲ್ಲಿ ತೀವ್ರ ಪೈಪೋಟಿ
Election Result: ಹರ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ… ಕಾಶ್ಮೀರದಲ್ಲಿ ಭಾರೀ ಪೈಪೋಟಿ
Public Meeting: ಬಾಲಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಸಿಟ್ಟಿಗೆದ್ದ ಜಾಕೀರ್ ನಾಯ್ಕ್!
Jharkhand: ಬಿಜೆಪಿ ಗೆದ್ದರೆ ಎನ್ಆರ್ಸಿ ಜಾರಿ ಖಚಿತ: ಕೇಂದ್ರ ಸಚಿವ ಶಿವರಾಜ್ ಸಿಂಗ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು
Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ
Haryana Results: ಬಿಜೆಪಿಯ ಕ್ಯಾಪ್ಟನ್ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!
Ballari: ಮಧ್ಯಾರಾತ್ರಿ ಆರ್ ಟಿಓ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ
Arrested: ಪಾಕ್ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್ಪಿನ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.