Belthangady: ಅಸಹಾಯಕ ಕುಟುಂಬಕ್ಕೆ ಚಾಲಕನ ಆಸರೆ

ಶಿರ್ಲಾಲು: ದೇಹ ಸ್ವಾಧೀನವಿಲ್ಲದ ಪುತ್ರ, ಶತಾಯುಷಿ ತಾಯಿಗೆ ಸಿಗಲಿದೆ ಹೊಸ ಮನೆ; ಮುರುಕಲು ಗುಡಿಸಲು ಕೆಡವಿ ಹೊಸದಕ್ಕೆ ಅಡಿಪಾಯ; ತಿಂಗಳ ಆಹಾರಕ್ಕೂ ಸಹಾಯ

Team Udayavani, Oct 8, 2024, 12:40 PM IST

1(1)

ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಬೈಲಡ್ಕ ನಿವಾಸಿ ಶತಾಯುಷಿ ಈರಮ್ಮ ಹಾಗೂ ಪುತ್ರ ಸುಂದರ ಅವರ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಸಿದ್ಧವಾಗಿರುವುದು.

ಬೆಳ್ತಂಗಡಿ: ಆಕಸ್ಮಿಕ ಘಟನೆಯಿಂದ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡಿರುವ ಮಗ, ಅವರ ಜತೆಗಿರುವುದು ಶತಾಯುಷಿ ತಾಯಿ. ಕಳೆದ ಮೂವತ್ತೈದು ವರ್ಷಗಳಿಂದ ಇಂಥ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬ ವಾಸವಾಗಿರುವುದು ಮುರುಕಲು ಗುಡಿಸಲಿನಲ್ಲಿ. ಈ ಪರಿಸ್ಥಿತಿಯನ್ನು ಅರಿತ ಆ್ಯಂಬುಲೆನ್ಸ್‌ ಚಾಲಕರೊಬ್ಬರು ಈ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿ ಕೊಡಲು ಮುಂದೆ ಬಂದಿದ್ದು, ಆಗಲೇ ಹಳೆ ಮನೆ ಕೆಡವಿ ಅಡಿಪಾಯಕ್ಕೆ ಸಿದ್ಧತೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬೈಲಡ್ಕದ ನಿವಾಸಿ ಈರಮ್ಮ (105) ಹಾಗೂ 15ನೇ ವಯಸ್ಸಿನಲ್ಲಿ ಹಲಸಿನ ಕಾಯಿ ಕೊಯ್ಯುವ ವೇಳೆ ಬೆನ್ನಿಗೆ ಹಲಸು ಬಿದ್ದು ಸೊಂಟದ ಕೆಳ ಭಾಗ ಸ್ವಾಧೀನ ಕಳೆದಕೊಂಡು 35 ವರ್ಷಗಳಿಂದ ವೀಲ್‌ಚೇರ್‌ನಲ್ಲೆ ಬದುಕು ಸವೆಸುತ್ತಿರುವ ಪುತ್ರ ಸುಂದರ (49) ಅವರ ನೋವಿನ ವ್ಯಥೆಯಿದು.

ಅಣ್ಣನ ಆಸರೆಯಲ್ಲಿ
ಸಂಕಷ್ಟದಲ್ಲಿರುವ ಸುಂದರ ಮತ್ತು ತಾಯಿಯನ್ನು ಅವರ ಸಹೋದರ ಶೀನಪ್ಪ ಸಲಹುತ್ತಿದ್ದಾರೆ. ಅವರದೂ ಬಡ ಕುಟುಂಬ. ಕಳೆದ ಕೆಲವು ವರ್ಷಗಳಿಂದ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಇಂಥ ಪರಿಸ್ಥಿತಿಯನ್ನು ತಿಳಿದು ನೆರವಾಗಲು ಮುಂದೆ ಬಂದವರು ಮೂಡುಬಿದಿರೆಯ ಗಂಟಲ್ಕಟ್ಟೆ ನಿವಾಸಿ Óಸಮಾಜ ಸೇವಕ ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕರಾಗಿರುವ ಅನಿಲ್‌ ಮೊಂಡೋನ್ಸಾ ಅವರು. ಇದೀಗ ಅವರು ಈ ಕುಟುಂಬಕ್ಕೆ ಒಂದು ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಸಂಪೂರ್ಣ ಜರ್ಜರಿತವಾಗಿದ್ದ ಹಳೆ ಮನೆ.

ನಾಲ್ಕು ತಿಂಗಳಲ್ಲಿ ಇದು 4ನೇ ಮನೆ
ಅನಿಲ್‌ ಮೆಂಡೋನ್ಸಾ ಅವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಬಿಟ್ಟು ಈಗ ಗಂಟಲ್ಕಟ್ಟೆಯ 5 ಸೆಂಟ್ಸ್‌ ಮನೆಯಲ್ಲಿ ಪತ್ನಿ, ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕ-ಮಾಲಕರಾಗಿರುವ ಅವರು ಅಸಹಾಯಕರ ಕಷ್ಟಕ್ಕೆ ಮರುಗಿ ಸಹಾಯಕ್ಕೆ ನಿಲ್ಲುತ್ತಾರೆ. ಅವರು ಕಳೆದ ನಾಲ್ಕು ತಿಂಗಳಲ್ಲಿ ಸಂಕಷ್ಟದಲ್ಲಿರುವ ಮೂರು ಕುಟುಂಬಗಳಿಗೆ ದಾನಿಗಳ ನೆರವಿನಿಂದ ಮನೆ ಕಟ್ಟಿಕೊಟ್ಟಿದ್ದು, ಈಗ ಉದ್ದೇಶಿಸಿರುವುದು ನಾಲ್ಕನೇ ಮನೆ.

ಸ್ಥಳೀಯರು ಸಹಕಾರ ಅಗತ್ಯವಾಗಿದೆ
ನಾನು ಬೆವರು ಸುರಿಸಿ ದುಡಿದ ಮೊತ್ತ ಮತ್ತು ಗೆಳೆಯರ ನೆರವಿನಿಂದ ಈ ಕೆಲಸ ಮಾಡುತ್ತಿದ್ದೇನೆ. ಗಂಟಲ್ಕಟ್ಟೆಯಿಂದ ಶಿರ್ಲಾಲಿಗೆ ಬಂದು ಹೋಗುವುದು ದೂರವಾಗಿರುವುದರಿಂದ ಮನೆ ನಿರ್ಮಾಣಕ್ಕೆ ಸ್ಥಳೀಯರು ಸಹಕಾರ ಅಗತ್ಯವಾಗಿದೆ.
-ಅನಿಲ್‌ ಮೆಂಡೋನ್ಸಾ ಸಾಮಾಜಿಕ ಕಾರ್ಯಕರ್ತ

ಸ್ನೇಹಿತರ ಸಹಕಾರದಲ್ಲಿ ನಿರ್ಮಾಣ
ಅನಿಲ್‌ ಅವರು ಈಗಾಗಲೇ ಮೂಡುಬಿದಿರೆಯ ಕರಿಂಜೆ, ಅಲಂಗಾರು, ನೆತ್ತೋಡಿಯಲ್ಲಿ ಸ್ನೇಹಿತರ ಜತೆ ಸೇರಿ ಮನೆ ನಿರ್ಮಿಸಿದ್ದರು. ತಾವೇ ಕಲ್ಲುಗಳನ್ನೂ ಹೊತ್ತಿದ್ದರು. ಕೇರ್‌ ಚಾರಿಟೆಬಲ್‌ ಟ್ರಸ್ಟ್‌ ರಚಿಸಿಕೊಂಡಿರುವ ಅವರು ಎಲ್ಲರೂ ಕೈಜೋಡಿಸಿದರೆ ಅಶಕ್ತರಿಗೆ ಸೂರು ಒದಗಿಸಬಹುದು ಎನ್ನುತ್ತಾರೆ.

ಈಗ ಅಣ್ಣನ ಮನೆಯಲ್ಲಿ ವಾಸ
ಹಳೆ ಮನೆ ಸ್ಥಿತಿ ಚಿಂತಾಜನಕ ವಾಗಿದ್ದರಿಂದ ಅನಿಲ್‌ ಅದನ್ನು ಕೆಡವಿ ತತ್‌ಕ್ಷಣವೇ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಈರಮ್ಮ ಮತ್ತು ಸುಂದರ ಅವರು ಸೋದರ ಶೀನಪ್ಪ ಅವರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ತಿಂಗಳಿಗೆ ಬೇಕಾದ ದಿನಸಿಯನ್ನು ಅನಿಲ್‌ ಅವರೇ ಒದಗಿಸಿದ್ದಾರೆ. ಬೆಳ್ತಂಗಡಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೂಡಾ ಕೊಡಿಸಿದ್ದಾರೆ.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

udupi-DC-office-Kota

Udupi: ಗ್ರಾ.ಪಂ ಸಿಬ್ಬಂದಿ ಮುಷ್ಕರದಿಂದ ಆಡಳಿತ ವ್ಯವಸ್ಥೆಯೇ ಸ್ಥಗಿತ: ಸಂಸದ ಕೋಟ ಶ್ರೀನಿವಾಸ

13-bharamasagara

Bharamasagara: ಸಾಲಭಾದೆಯಿಂದ ಮನನೊಂದು ನೇಣೆಗೆ ಶರಣಾದ ರೈತ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

11-davangere

Davangere: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಬಂಧನ

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಶಕ್ತರಿಗೆ ಒಳಿತು ಬಯಸುವ ಪ್ರೇತ!

Bantwal: ಅಶಕ್ತರಿಗೆ ಒಳಿತು ಬಯಸುವ ಪ್ರೇತ!; 1.50 ಲಕ್ಷ ರೂ. ನೆರವು

Savanooru

Savanooru: ಪಿಕಪ್‌-ಬೈಕ್‌ ಅಪಘಾತ: ಸವಾರರಿಗೆ ಗಾಯ

River-Hand-Person

Vitla: ಹೊಳೆಗೆ ಬಿದ್ದ ವೃದ್ಧರೊಬ್ಬರ ರಕ್ಷಿಸಿದ ಯುವಕರು; ಶ್ಲಾಘನೆ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Untitled-1

Puttur: ಪದವಿ ವಿದ್ಯಾರ್ಥಿ ನಾಪತ್ತೆ; ದೂರು ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

The BJP people mocked Rahul by giving him Jalebi!

Haryana: ಜಿಲೇಬಿ ಕೊಟ್ಟು ರಾಹುಲ್‌ರನ್ನು ಲೇವಡಿ ಮಾಡಿದ ಬಿಜೆಪಿಗರು!

udupi-DC-office-Kota

Udupi: ಗ್ರಾ.ಪಂ ಸಿಬ್ಬಂದಿ ಮುಷ್ಕರದಿಂದ ಆಡಳಿತ ವ್ಯವಸ್ಥೆಯೇ ಸ್ಥಗಿತ: ಸಂಸದ ಕೋಟ ಶ್ರೀನಿವಾಸ

1

Siddapura: ಹೊಡೆದಾಟ; ಯುವಕರ ವಿರುದ್ಧ ಪ್ರಕರಣ ದಾಖಲು

complaint

Kundapura: ಪತಿಯಿಂದ ವರದಕ್ಷಿಣೆ ಹಿಂಸೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.