Bantwal: ಅಶಕ್ತರಿಗೆ ಒಳಿತು ಬಯಸುವ ಪ್ರೇತ!; 1.50 ಲಕ್ಷ ರೂ. ನೆರವು

ಸರಪಾಡಿಯ ಯುವಕನ 5ನೇ ತಿರುಗಾಟ; ಮಹಿಷಾಸುರ, ಅವತಾರ್‌ ಬಳಿಕ ಪ್ರೇತ ವೇಷದಲ್ಲಿ ಬೈಕ್‌ ಸವಾರಿ!

Team Udayavani, Oct 8, 2024, 12:56 PM IST

ಅಶಕ್ತರಿಗೆ ಒಳಿತು ಬಯಸುವ ಪ್ರೇತ!

ಯುವಕ ದೇವದಾಸ್‌ನ ವೇಷ

ಬಂಟ್ವಾಳ: ಕಳೆದ 4 ವರ್ಷಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ ಹಣ ಸಂಗ್ರಹಿಸಿ ಸುಮಾರು 1.50 ಲಕ್ಷ ರೂ.ಗಳಷ್ಟು ಮೊತ್ತವನ್ನು 10ಕ್ಕೂ ಅಧಿಕ ಅಶಕ್ತರಿಗೆ ನೀಡಿದ್ದ ಸರಪಾಡಿಯ ಯುವಕ ಈ ಬಾರಿ ಪ್ರೇತದ ವೇಷ ಹಾಕಿ ತಿರುಗಾಟ ಆರಂಭಿಸಿದ್ದಾರೆ.

ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್‌ ನಾಯ್ಕ ಅವರು ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ 9 ದಿನಗಳ ಕಾಲ ಊರೂರು ಸುತ್ತಿ ಹಣ ಸಂಗ್ರಹಿಸಿ ಅಶಕ್ತರನ್ನು ಹುಡುಕಿ ಅವರಿಗೆ ನೆರವಾಗುತ್ತಿದ್ದಾರೆ. ಈ ಬಾರಿ ಅ. 6ರ ರಾತ್ರಿ ವೇಷ ಹಾಕಿ ಅ. 13ರ ವರೆಗೆ ತಿರುಗಾಟ ನಡೆಸಿ ವಿಟ್ಲದಲ್ಲಿ ತನ್ನ ತಿರುಗಾಟ ಕೊನೆಗೊಳಿಸಲಿದ್ದಾರೆ.

ಪ್ರತಿವರ್ಷವೂ ವೇಷ ಹಾಕುವ ಮೊದಲೇ ಎರಡು ಮೂರು ಅಶಕ್ತರನ್ನು ಹುಡುಕಿ ಸಂಗ್ರಹಗೊಂಡ ಮೊತ್ತವನ್ನು ಪಾಲು ಮಾಡಿ ನೀಡುತ್ತಿರುವ ದೇವದಾಸ್‌ ಅವರು ಈ ಬಾರಿ ಮೊತ್ತ ಸಂಗ್ರಹಗೊಂಡ ಬಳಿಕ ಅಶಕ್ತರನ್ನು ಹುಡುಕುವ ಕಾರ್ಯ ಮಾಡಲಿದ್ದಾರೆ. ಪ್ರತಿವರ್ಷವೂ ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಅಶಕ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಹೆಚ್ಚಿನ ಮೊತ್ತ ನೀಡಿ ಪ್ರೋತ್ಸಾಹ
ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ದೇವದಾಸ್‌ ಅವರು ಸರಪಾಡಿ, ಮಣಿ ನಾಲ್ಕೂರು ಪರಿಸರದಲ್ಲಿ ಚಿರಪರಿಚಿತವಾಗಿದ್ದು, ಪ್ರತಿವರ್ಷ ವೇಷ ಹಾಕಿಕೊಂಡು ಹೋದಾಗಲೂ ಈತನ ಸದುದ್ದೇಶವನ್ನು ಪ್ರೋತ್ಸಾಹಿಸಿ ಹೆಚ್ಚಿನ ಮೊತ್ತವನ್ನೇ ನೀಡುತ್ತಿದ್ದಾರೆ. ಇವರ ಸೇವಾ ಕಾರ್ಯದ ಕುರಿತು ತಿಳಿಯದೇ ಸ್ವಲ್ಪ ಹಣವನ್ನು ಕೊಟ್ಟವರು ತಿಳಿದ ಬಳಿಕ ಮತ್ತೆ ಕರೆದು ಹೆಚ್ಚಿನ ಹಣ ನೀಡಿದ ಉದಾಹರಣೆಗಳಿವೆ.

ಕಳೆದ ವರ್ಷ ಅವರು ಸುಮಾರು 47 ಸಾವಿರ ರೂ.ಗಳನ್ನು ಸಂಗ್ರಹಿಸಿ ಮೂವರು ಅಶಕ್ತರಿಗೆ ವಿತರಿಸಿದ್ದರು. ವಿಶೇಷವೆಂದರೆ ವೇಷ ಹಾಕುವ ಖರ್ಚು, ತಿರುಗಾಟ ಖರ್ಚು ಹೀಗೆ ಇತರ ಯಾವುದೇ ಖರ್ಚನ್ನು ಸಂಗ್ರಹಗೊಂಡ ಮೊತ್ತದಿಂದ ಪಡೆಯದೆ ಅದಕ್ಕೆ ತನ್ನ ದುಡಿಮೆಯ ಹಣವನ್ನೇ ಬಳಸುತ್ತಿದ್ದಾರೆ.

ಬೈಕಿನ ವಿನ್ಯಾಸವೂ ಬದಲು.!
ವಿಭಿನ್ನ ವೇಷಗಳ ಮೂಲಕ ಗಮನ ಸೆಳೆದಿರುವ ದೇವದಾಸ್‌ ಅವರು ಈ ಹಿಂದೆ ಮಹಿಷಾಸುರ, ಪ್ರೇತ, ಅವತಾರ್‌ ವೇಷದ ಮೂಲಕ ಗಮನ ಸೆಳೆದಿದ್ದು, ಈ ಬಾರಿ ಮತ್ತೆ ಪ್ರೇತವಾಗಲು ಹೊರಟಿದ್ದಾರೆ. ತನ್ನ ವೇಷಕ್ಕೆ ತಕ್ಕಂತೆ ತಿರುಗಾಡುವ ಬೈಕನ್ನೂ ಗ್ಯಾರೇಜ್‌ನಲ್ಲಿ ವಿನ್ಯಾಸಗೊಳಿಸಿ ಬಳಿಕ ಮತ್ತೆ ಹಿಂದಿನ ರೂಪಕ್ಕೆ ತರುತ್ತಾರೆ.

ನೆರವು ನೀಡುವುದರಲ್ಲಿ ತೃಪ್ತಿ
ಈ ಬಾರಿ ಪ್ರೇತದ ಮೂಲಕ 7 ದಿನಗಳ ಕಾಲ ತಿರುಗಾಟ ನಡೆಸಿ ವಿಟ್ಲದಲ್ಲಿ ಕೊನೆಗೊಳಿಸಲಿದ್ದೇನೆ. ಸಂಗ್ರಹಗೊಂಡ ಮೊತ್ತವನ್ನು ಪ್ರತಿವರ್ಷದಂತೆ ಅಶಕ್ತರಿಗೆ ನೀಡಲಿದ್ದು, ನವರಾತ್ರಿ ಮುಗಿದ ಬಳಿಕ ಯಾರಿಗೆ ನೀಡಬೇಕು ಎಂಬುದರ ಕುರಿತು ನಿರ್ಧರಿಸಲಿದ್ದೇನೆ. ಬೇರೆ ರೂಪದಲ್ಲಿ ಅಶಕ್ತರಿಗೆ ನೆರವು ನೀಡುವಷ್ಟು ಶ್ರೀಮಂತ ನಾನಲ್ಲ. ಹೀಗಾಗಿ ಈ ರೀತಿ ವೇಷ ಹಾಕಿ ನೆರವು ನೀಡುವುದರಲ್ಲಿ ತೃಪ್ತಿ ಇದೆ.
-ದೇವದಾಸ್‌ ನಾಯ್ಕ ನೀರೊಲ್ಬೆ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.