Kundapura: ಈ ದೇವಿಯ ಊರಲ್ಲಿ ತೊಟ್ಟಿಲೇ ಕಟ್ಟುವುದಿಲ್ಲ!

ಹಿಲಿಯಾಣದ ನಾಗೇರ್ತಿ ಅಮ್ಮನವರ ದೇಗುಲದ ಗರ್ಭಗುಡಿಗೆ ಛಾವಣಿಯೇ ಇಲ್ಲ!; ಅರಣ್ಯದಲ್ಲಿ ನೆಲೆ ನಿಂತ ದೇವರಿಗೆ ಈಗಲೂ ಮಣ್ಣಿನ ಕೊಡದ ನೀರಿನಿಂದಲೇ ಪೂಜೆ

Team Udayavani, Oct 8, 2024, 2:46 PM IST

5(1)

ಗರ್ಭಗುಡಿಗೆ ಮಾಡಿಲ್ಲದ ಶ್ರೀ ನಾಗೇರ್ತಿ ಕ್ಷೇತ್ರ.

ಕುಂದಾಪುರ: ನದಿ, ಕಾಡಿನ ಪ್ರದೇಶಗಳಿಂದ ಆವೃತವಾದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನೆಲೆ ನಿಂತ ಈ ದೇವರ ಗುಡಿಗೆ ಮಾಡೇ ಇಲ್ಲ. ಈ ಊರಿನಲ್ಲಿ ಮಕ್ಕಳನ್ನು ಮಲಗಿಸಲೆಂದು ತೊಟ್ಟಿಲು ಕಟ್ಟುವಂತೆಯೂ ಇಲ್ಲ. ಈ ಊರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನವೂ ನಡೆಯುವುದಿಲ್ಲ.: ಇಂಥ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಕ್ಷೇತ್ರವೇ ಹಾಲಾಡಿ ಸಮೀಪದ ಹೈಕಾಡಿಯಿಂದ 2 ಕಿ.ಮೀ. ದೂರದ ಹಿಲಿಯಾಣ ಗ್ರಾಮದಲ್ಲಿರುವ ಶ್ರೀ ನಾಗೇರ್ತಿ (ನಾಗರತಿ) ಅಮ್ಮನವರ ದೇವಸ್ಥಾನ.

ಮಾಡಿಲ್ಲದ ಗರ್ಭಗುಡಿ
ದಟ್ಟ ಅಡವಿಯೊಳಗಿರುವ ಉದ್ಭವ ಮೂರ್ತಿಯ ಈ ನಾಗೇರ್ತಿ ದೇವಿಯ ಗರ್ಭಗುಡಿಗೆ ಮಾಡಿಲ್ಲ. ಇದಕ್ಕೆ ನಿರ್ದಿಷ್ಟ ಐತಿಹ್ಯ ಕಂಡು ಬಾರದಿದ್ದರೂ, ಮಾಡು ಮಾಡಿದರೆ ಒಂದೇ ದಿನದಲ್ಲಿ ನಿರ್ಮಿಸಿ, ಅದಕ್ಕೆ ಪ್ರತಿಷ್ಠೆ, ಪೂಜೆ ಎಲ್ಲವೂ ಆ ದಿನವೇ ಆಗಬೇಕು ಅನ್ನುವ ಕಾರಣಕ್ಕೆ ಹಿಂದಿನಿಂದಲೂ ಮಾಡು ನಿರ್ಮಿಸಲು ಮುಂದಾಗಿಲ್ಲ. ಕೆಲ ವರ್ಷಗಳ ಜೀರ್ಣೋದ್ಧಾರಕ್ಕೆ ಪ್ರಶ್ನೆ ಇಟ್ಟ ವೇಳೆಯೂ ಮಾಡು ಮಾಡುವಂತಿಲ್ಲ ಅನ್ನುವ ಅಭಿಪ್ರಾಯ ವ್ಯಕ್ತವಾಯಿತು. ಮಳೆ, ಬಿಸಿಲು, ಬೆಳದಿಂಗಳು ಉದ್ಭವ ದೇವಿ ಮೂರ್ತಿಯ ಮೇಲೆ ಸ್ಪರ್ಶವಾಗಬೇಕು ಅನ್ನುವ ನಂಬಿಕೆಯೂ ಇದೆ. ಶ್ರೀ ದುರ್ಗಾಪರರ್ಮೇಶ್ವರಿ, ಶ್ರೀ ನಾಗದೇವರು, ಶ್ರೀ ವೀರಭದ್ರ ಸ್ವಾಮಿಗೂ ಆರಾಧನೆ ನಡೆಯುತ್ತದೆ. ಸುಮಾರು 100 ಕ್ಕೂ ಮಿಕ್ಕಿ ನಾಗಶಿಲೆಗಳು ಇಲ್ಲಿವೆ.

ಮಡಿಕೆ ನೀರಿನಿಂದ ಪೂಜೆ
ದೇಗುಲ ಸನಿಹವೇ ವಾರಾಹಿ ಉಪನದಿ ಹರಿಯುತ್ತಿದ್ದು, ಅಲ್ಲಿಂದ ಮಣ್ಣಿನ ಕೊಡದಲ್ಲೇ ನೀರು ತಂದು ಪೂಜೆ ನಡೆಸುವುದು ಈಗಲೂ ಮುಂದುವರಿಯುತ್ತಿರುವ ಸಂಪ್ರದಾಯ. ಹಿಂದೆ ಕುಂಬಾರರು ಈ ಹಾದಿಯಲ್ಲಿ ಹೋಗುವಾಗ ಒಂದೊಂದು ಮಡಿಕೆ ಇಲ್ಲಿ ಇಟ್ಟು ಹೋಗುತ್ತಿದ್ದರಂತೆ. ಹಾಗಾಗಿ ಮಡಿಕೆಯಲ್ಲೇ ನೀರು ತರಲಾಗುತ್ತದೆ.

ತುಲಾ ಭಾರ ಇಷ್ಟದ ಸೇವೆ
ತುಲಾಭಾರ ದೇವರಿಗೆ ಇಷ್ಟದ ಸೇವೆ. ಕುಂಭ, ಮೀನ, ಮೇಷ, ವೃಷಭ ಮಾಸದಲ್ಲಿ ನೀಲಕಂಠ ಅಡಿಗರು ಪೂಜೆ ನೆರವೇರಿಸಿದರೆ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ತಿಂಗಳಲ್ಲಿ ರಾಮಕೃಷ್ಣ ಅಡಿಗರು, ತುಲಾ, ವೃಶ್ಚಿಕ, ಧನು, ಮಕರ ಮಾಸದಲ್ಲಿ 2 ಕುಟುಂಬಗಳು (ಗಿರೀಶ್‌ ಅಡಿಗರು, ಉಮೇಶ್‌ ಅಡಿಗರು, ಕಿರಾಡಿ ಕೆಳಾಬೈಲು ಗೋವಿಂದ ಭಟ್ಟರ ಮಕ್ಕಳು) ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವಿಜಯ ಕುಮಾರ್‌ ಶೆಟ್ಟಿ ಆಡಳಿತ ಮೊಕ್ತೇಸರರು.

ನಾಗೇರ್ತಿ ಅಪರೂಪದ ದೇವಸ್ಥಾನಗಳಲ್ಲಿ ಒಂದು. ಈಗಿರುವಂತಹ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಚಿಂತನೆ ನಡೆಸಬೇಕಾಗಿದೆ ಎನ್ನುತ್ತಾರೆ ಹೈಕಾಡಿಯ ರಾಘವೇಂದ್ರ ಶೆಟ್ಟಿ.

ಪುರಾಣದ ಹಿನ್ನೆಲೆಯೇನು?
ಶಿವದತ್ತನೆಂಬ ಬ್ರಾಹ್ಮಣನು ತಪಸ್ಸಿಗಾಗಿ ಗೊಂಡಾರಣ್ಯವನ್ನು ಪ್ರವೇಶಿಸಿದಾಗ ಕಾಳಿYಚ್ಚಿನ ಬೆಂಕಿಯ ಜ್ವಾಲೆಯಿಂದ ಪರಿತಪಿಸುತ್ತಿದ್ದ ಐದು ಸರ್ಪಗಳನ್ನು ಕಂಡು, ಅವುಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಹಿಡಿದುಕೊಂಡು ಊರಿಗೆ ಹೊರಟಾಗ ಅವುಗಳು ಒಂದೊಂದಾಗಿಯೇ ಕಾಡಿನಲ್ಲಿ ಶಿವದತ್ತನ ಕೈಯಿಂದ ತಪ್ಪಿಸಿಕೊಂಡು, ಮಾಯವಾಗುತ್ತವೆ. ಅವು ಮಾಯವಾದ ಸ್ಥಳಗಳಲ್ಲಿ ಶಿವದತ್ತನು ದುರ್ಗಾದೇವಿಯ ಆಲಯವನ್ನು, ಸನಿಹವೇ ಸುಬ್ರಹ್ಮಣ್ಯನನ್ನು ಪ್ರತಿಷ್ಠೆ ಮಾಡಿದನು ಎನ್ನುವ ಪ್ರತೀತಿಯಿದೆ. ಅವುಗಳೇ ಈಗ ಪಂಚಕನ್ಯಾ ಕ್ಷೇತ್ರಗಳಾದ ಶೇಡಿಮನೆಯ ಅರಸಮ್ಮಕಾನು (ದೇವರತಿ), ಹಿಲಿಯಾಣದ ನಾಗೇರ್ತಿ (ನಾಗರತಿ), ಚೋರಾಡಿ ಸಮೀಪದ ಚಾರುರತಿ, ಮಂದಾರ್ತಿಯ ಮಂದಾರತಿ ಹಾಗೂ ನೀಲಾವರದ ನೀಲಾರತಿ ದೇವಿ ದೇವಸ್ಥಾನಗಳಾಗಿ ಪ್ರಸಿದ್ಧಿ ಪಡೆದಿವೆ.

ನವರಾತ್ರಿಗೆ ವಿಶೇಷ ಪೂಜೆಯೇನೂ ಇಲ್ಲ
ವಿಶಿಷ್ಟ ಆಚರಣೆಗಳಿರುವ ಕ್ಷೇತ್ರ ಇದಾಗಿದ್ದು, ನವರಾತ್ರಿ ವೇಳೆ ವಿಶೇಷ ಪೂಜೆಯೇನೂ ಇಲ್ಲ. ಆದರೆ ನಿತ್ಯ ಪೂಜೆ ನಡೆಯುತ್ತದೆ. ಮಕರ ಸಂಕ್ರಾಂತಿ ದಿನ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. 15 ಸಾವಿರಕ್ಕೂ ಮಿಕ್ಕಿ ಭಕ್ತರು ಬರುತ್ತಾರೆ. ತುಲಾಭಾರ ಪ್ರಮುಖ ಸೇವೆ.
-ನೀಲಕಂಠ ಅಡಿಗರು, ದೇವಸ್ಥಾನದ ಅರ್ಚಕರು

ಇಲ್ಲಿ ತೊಟ್ಟಿಲು ಕಟ್ಟುವುದಿಲ್ಲ ಯಾಕೆ?
ಈ ನಾಗೇರ್ತಿ ಪರಿಸರ ಹಾಗೂ ಚೋರಾಡಿಯ ಕಂಬಳಗದ್ದೆಯವರೆಗಿನ ಪ್ರದೇಶದವರೆಗೆ ಸುಮಾರು 70-80 ಮನೆಗಳಿವೆ. ಇಂದಿಗೂ ಮಕ್ಕಳಿಗೆ ತೊಟ್ಟಿಲು ಕಟ್ಟಬಾರದು ಅನ್ನುವ ಪ್ರತೀತಿಯಿದೆ. ತೊಟ್ಟಿಲು ಕಟ್ಟಿದರೆ ಆ ಹಗ್ಗದಲ್ಲಿ ನಾಗರ ಹಾವು ಕಾಣಿಸುತ್ತದೆ ಅನ್ನುವ ನಂಬಿಕೆ. 8-10 ವರ್ಷದ ಹಿಂದೆ ಒಬ್ಬರು ತೊಟ್ಟಿಲು ಕಟ್ಟಿದರೂ, ಅರ್ಧ – ಮುಕ್ಕಾಲು ಗಂಟೆಯಲ್ಲಿಯೇ ಹಗ್ಗದಲ್ಲಿ ಹಾವು ನೇತಾಡಿಕೊಂಡಿದ್ದು, ಬಳಿಕ ಕೈ ಮುಗಿದ ಬಳಿಕ ಇಳಿದು ಹೋಯಿತು. ಈ ವಿಚಾರವನ್ನು ಸ್ವತಃ ಆ ದಂಪತಿಯೇ ಬಂದು ಹೇಳಿಕೊಂಡಿರುವುದಾಗಿ ಇಲ್ಲಿನ ಅರ್ಚಕರಲ್ಲಿ ಒಬ್ಬರಾದ ನೀಲಕಂಠ ಅಡಿಗರು ನೆನಪಿಸಿಕೊಳ್ಳುತ್ತಾರೆ. ತೊಟ್ಟಿಲು ಮಾತ್ರವಲ್ಲ ಈ ಊರಲ್ಲಿ ಯಾವುದನ್ನು ನೇತು ಹಾಕುವುದಿಲ್ಲ. ಮಕ್ಕಳನ್ನು ಜನಿಸಿದ ವರ್ಷದೊಳಗೆ ಇಲ್ಲಿಗೆ ಕರೆದುಕೊಂಡು ಬಂದು 8 ದಿಕ್ಕಿಗೆ ಪ್ರದಕ್ಷಿಣೆ (ಸುತ್ತು ಹೊಡೆಸುವ ಸೇವೆ) ಹಾಕಿದರೆ ದೇವಿಗೆ ಇಷ್ಟ. ಆ ಮಕ್ಕಳು ಮತ್ತೆ ಹಠ ಹಿಡಿದು ಅಳುವುದಿಲ್ಲ ಅನ್ನುವ ನಂಬಿಕೆಯಿದೆ.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.