Kundapura: ಈ ದೇವಿಯ ಊರಲ್ಲಿ ತೊಟ್ಟಿಲೇ ಕಟ್ಟುವುದಿಲ್ಲ!

ಹಿಲಿಯಾಣದ ನಾಗೇರ್ತಿ ಅಮ್ಮನವರ ದೇಗುಲದ ಗರ್ಭಗುಡಿಗೆ ಛಾವಣಿಯೇ ಇಲ್ಲ!; ಅರಣ್ಯದಲ್ಲಿ ನೆಲೆ ನಿಂತ ದೇವರಿಗೆ ಈಗಲೂ ಮಣ್ಣಿನ ಕೊಡದ ನೀರಿನಿಂದಲೇ ಪೂಜೆ

Team Udayavani, Oct 8, 2024, 2:46 PM IST

5(1)

ಗರ್ಭಗುಡಿಗೆ ಮಾಡಿಲ್ಲದ ಶ್ರೀ ನಾಗೇರ್ತಿ ಕ್ಷೇತ್ರ.

ಕುಂದಾಪುರ: ನದಿ, ಕಾಡಿನ ಪ್ರದೇಶಗಳಿಂದ ಆವೃತವಾದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನೆಲೆ ನಿಂತ ಈ ದೇವರ ಗುಡಿಗೆ ಮಾಡೇ ಇಲ್ಲ. ಈ ಊರಿನಲ್ಲಿ ಮಕ್ಕಳನ್ನು ಮಲಗಿಸಲೆಂದು ತೊಟ್ಟಿಲು ಕಟ್ಟುವಂತೆಯೂ ಇಲ್ಲ. ಈ ಊರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನವೂ ನಡೆಯುವುದಿಲ್ಲ.: ಇಂಥ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಕ್ಷೇತ್ರವೇ ಹಾಲಾಡಿ ಸಮೀಪದ ಹೈಕಾಡಿಯಿಂದ 2 ಕಿ.ಮೀ. ದೂರದ ಹಿಲಿಯಾಣ ಗ್ರಾಮದಲ್ಲಿರುವ ಶ್ರೀ ನಾಗೇರ್ತಿ (ನಾಗರತಿ) ಅಮ್ಮನವರ ದೇವಸ್ಥಾನ.

ಮಾಡಿಲ್ಲದ ಗರ್ಭಗುಡಿ
ದಟ್ಟ ಅಡವಿಯೊಳಗಿರುವ ಉದ್ಭವ ಮೂರ್ತಿಯ ಈ ನಾಗೇರ್ತಿ ದೇವಿಯ ಗರ್ಭಗುಡಿಗೆ ಮಾಡಿಲ್ಲ. ಇದಕ್ಕೆ ನಿರ್ದಿಷ್ಟ ಐತಿಹ್ಯ ಕಂಡು ಬಾರದಿದ್ದರೂ, ಮಾಡು ಮಾಡಿದರೆ ಒಂದೇ ದಿನದಲ್ಲಿ ನಿರ್ಮಿಸಿ, ಅದಕ್ಕೆ ಪ್ರತಿಷ್ಠೆ, ಪೂಜೆ ಎಲ್ಲವೂ ಆ ದಿನವೇ ಆಗಬೇಕು ಅನ್ನುವ ಕಾರಣಕ್ಕೆ ಹಿಂದಿನಿಂದಲೂ ಮಾಡು ನಿರ್ಮಿಸಲು ಮುಂದಾಗಿಲ್ಲ. ಕೆಲ ವರ್ಷಗಳ ಜೀರ್ಣೋದ್ಧಾರಕ್ಕೆ ಪ್ರಶ್ನೆ ಇಟ್ಟ ವೇಳೆಯೂ ಮಾಡು ಮಾಡುವಂತಿಲ್ಲ ಅನ್ನುವ ಅಭಿಪ್ರಾಯ ವ್ಯಕ್ತವಾಯಿತು. ಮಳೆ, ಬಿಸಿಲು, ಬೆಳದಿಂಗಳು ಉದ್ಭವ ದೇವಿ ಮೂರ್ತಿಯ ಮೇಲೆ ಸ್ಪರ್ಶವಾಗಬೇಕು ಅನ್ನುವ ನಂಬಿಕೆಯೂ ಇದೆ. ಶ್ರೀ ದುರ್ಗಾಪರರ್ಮೇಶ್ವರಿ, ಶ್ರೀ ನಾಗದೇವರು, ಶ್ರೀ ವೀರಭದ್ರ ಸ್ವಾಮಿಗೂ ಆರಾಧನೆ ನಡೆಯುತ್ತದೆ. ಸುಮಾರು 100 ಕ್ಕೂ ಮಿಕ್ಕಿ ನಾಗಶಿಲೆಗಳು ಇಲ್ಲಿವೆ.

ಮಡಿಕೆ ನೀರಿನಿಂದ ಪೂಜೆ
ದೇಗುಲ ಸನಿಹವೇ ವಾರಾಹಿ ಉಪನದಿ ಹರಿಯುತ್ತಿದ್ದು, ಅಲ್ಲಿಂದ ಮಣ್ಣಿನ ಕೊಡದಲ್ಲೇ ನೀರು ತಂದು ಪೂಜೆ ನಡೆಸುವುದು ಈಗಲೂ ಮುಂದುವರಿಯುತ್ತಿರುವ ಸಂಪ್ರದಾಯ. ಹಿಂದೆ ಕುಂಬಾರರು ಈ ಹಾದಿಯಲ್ಲಿ ಹೋಗುವಾಗ ಒಂದೊಂದು ಮಡಿಕೆ ಇಲ್ಲಿ ಇಟ್ಟು ಹೋಗುತ್ತಿದ್ದರಂತೆ. ಹಾಗಾಗಿ ಮಡಿಕೆಯಲ್ಲೇ ನೀರು ತರಲಾಗುತ್ತದೆ.

ತುಲಾ ಭಾರ ಇಷ್ಟದ ಸೇವೆ
ತುಲಾಭಾರ ದೇವರಿಗೆ ಇಷ್ಟದ ಸೇವೆ. ಕುಂಭ, ಮೀನ, ಮೇಷ, ವೃಷಭ ಮಾಸದಲ್ಲಿ ನೀಲಕಂಠ ಅಡಿಗರು ಪೂಜೆ ನೆರವೇರಿಸಿದರೆ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ತಿಂಗಳಲ್ಲಿ ರಾಮಕೃಷ್ಣ ಅಡಿಗರು, ತುಲಾ, ವೃಶ್ಚಿಕ, ಧನು, ಮಕರ ಮಾಸದಲ್ಲಿ 2 ಕುಟುಂಬಗಳು (ಗಿರೀಶ್‌ ಅಡಿಗರು, ಉಮೇಶ್‌ ಅಡಿಗರು, ಕಿರಾಡಿ ಕೆಳಾಬೈಲು ಗೋವಿಂದ ಭಟ್ಟರ ಮಕ್ಕಳು) ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವಿಜಯ ಕುಮಾರ್‌ ಶೆಟ್ಟಿ ಆಡಳಿತ ಮೊಕ್ತೇಸರರು.

ನಾಗೇರ್ತಿ ಅಪರೂಪದ ದೇವಸ್ಥಾನಗಳಲ್ಲಿ ಒಂದು. ಈಗಿರುವಂತಹ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಚಿಂತನೆ ನಡೆಸಬೇಕಾಗಿದೆ ಎನ್ನುತ್ತಾರೆ ಹೈಕಾಡಿಯ ರಾಘವೇಂದ್ರ ಶೆಟ್ಟಿ.

ಪುರಾಣದ ಹಿನ್ನೆಲೆಯೇನು?
ಶಿವದತ್ತನೆಂಬ ಬ್ರಾಹ್ಮಣನು ತಪಸ್ಸಿಗಾಗಿ ಗೊಂಡಾರಣ್ಯವನ್ನು ಪ್ರವೇಶಿಸಿದಾಗ ಕಾಳಿYಚ್ಚಿನ ಬೆಂಕಿಯ ಜ್ವಾಲೆಯಿಂದ ಪರಿತಪಿಸುತ್ತಿದ್ದ ಐದು ಸರ್ಪಗಳನ್ನು ಕಂಡು, ಅವುಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಹಿಡಿದುಕೊಂಡು ಊರಿಗೆ ಹೊರಟಾಗ ಅವುಗಳು ಒಂದೊಂದಾಗಿಯೇ ಕಾಡಿನಲ್ಲಿ ಶಿವದತ್ತನ ಕೈಯಿಂದ ತಪ್ಪಿಸಿಕೊಂಡು, ಮಾಯವಾಗುತ್ತವೆ. ಅವು ಮಾಯವಾದ ಸ್ಥಳಗಳಲ್ಲಿ ಶಿವದತ್ತನು ದುರ್ಗಾದೇವಿಯ ಆಲಯವನ್ನು, ಸನಿಹವೇ ಸುಬ್ರಹ್ಮಣ್ಯನನ್ನು ಪ್ರತಿಷ್ಠೆ ಮಾಡಿದನು ಎನ್ನುವ ಪ್ರತೀತಿಯಿದೆ. ಅವುಗಳೇ ಈಗ ಪಂಚಕನ್ಯಾ ಕ್ಷೇತ್ರಗಳಾದ ಶೇಡಿಮನೆಯ ಅರಸಮ್ಮಕಾನು (ದೇವರತಿ), ಹಿಲಿಯಾಣದ ನಾಗೇರ್ತಿ (ನಾಗರತಿ), ಚೋರಾಡಿ ಸಮೀಪದ ಚಾರುರತಿ, ಮಂದಾರ್ತಿಯ ಮಂದಾರತಿ ಹಾಗೂ ನೀಲಾವರದ ನೀಲಾರತಿ ದೇವಿ ದೇವಸ್ಥಾನಗಳಾಗಿ ಪ್ರಸಿದ್ಧಿ ಪಡೆದಿವೆ.

ನವರಾತ್ರಿಗೆ ವಿಶೇಷ ಪೂಜೆಯೇನೂ ಇಲ್ಲ
ವಿಶಿಷ್ಟ ಆಚರಣೆಗಳಿರುವ ಕ್ಷೇತ್ರ ಇದಾಗಿದ್ದು, ನವರಾತ್ರಿ ವೇಳೆ ವಿಶೇಷ ಪೂಜೆಯೇನೂ ಇಲ್ಲ. ಆದರೆ ನಿತ್ಯ ಪೂಜೆ ನಡೆಯುತ್ತದೆ. ಮಕರ ಸಂಕ್ರಾಂತಿ ದಿನ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. 15 ಸಾವಿರಕ್ಕೂ ಮಿಕ್ಕಿ ಭಕ್ತರು ಬರುತ್ತಾರೆ. ತುಲಾಭಾರ ಪ್ರಮುಖ ಸೇವೆ.
-ನೀಲಕಂಠ ಅಡಿಗರು, ದೇವಸ್ಥಾನದ ಅರ್ಚಕರು

ಇಲ್ಲಿ ತೊಟ್ಟಿಲು ಕಟ್ಟುವುದಿಲ್ಲ ಯಾಕೆ?
ಈ ನಾಗೇರ್ತಿ ಪರಿಸರ ಹಾಗೂ ಚೋರಾಡಿಯ ಕಂಬಳಗದ್ದೆಯವರೆಗಿನ ಪ್ರದೇಶದವರೆಗೆ ಸುಮಾರು 70-80 ಮನೆಗಳಿವೆ. ಇಂದಿಗೂ ಮಕ್ಕಳಿಗೆ ತೊಟ್ಟಿಲು ಕಟ್ಟಬಾರದು ಅನ್ನುವ ಪ್ರತೀತಿಯಿದೆ. ತೊಟ್ಟಿಲು ಕಟ್ಟಿದರೆ ಆ ಹಗ್ಗದಲ್ಲಿ ನಾಗರ ಹಾವು ಕಾಣಿಸುತ್ತದೆ ಅನ್ನುವ ನಂಬಿಕೆ. 8-10 ವರ್ಷದ ಹಿಂದೆ ಒಬ್ಬರು ತೊಟ್ಟಿಲು ಕಟ್ಟಿದರೂ, ಅರ್ಧ – ಮುಕ್ಕಾಲು ಗಂಟೆಯಲ್ಲಿಯೇ ಹಗ್ಗದಲ್ಲಿ ಹಾವು ನೇತಾಡಿಕೊಂಡಿದ್ದು, ಬಳಿಕ ಕೈ ಮುಗಿದ ಬಳಿಕ ಇಳಿದು ಹೋಯಿತು. ಈ ವಿಚಾರವನ್ನು ಸ್ವತಃ ಆ ದಂಪತಿಯೇ ಬಂದು ಹೇಳಿಕೊಂಡಿರುವುದಾಗಿ ಇಲ್ಲಿನ ಅರ್ಚಕರಲ್ಲಿ ಒಬ್ಬರಾದ ನೀಲಕಂಠ ಅಡಿಗರು ನೆನಪಿಸಿಕೊಳ್ಳುತ್ತಾರೆ. ತೊಟ್ಟಿಲು ಮಾತ್ರವಲ್ಲ ಈ ಊರಲ್ಲಿ ಯಾವುದನ್ನು ನೇತು ಹಾಕುವುದಿಲ್ಲ. ಮಕ್ಕಳನ್ನು ಜನಿಸಿದ ವರ್ಷದೊಳಗೆ ಇಲ್ಲಿಗೆ ಕರೆದುಕೊಂಡು ಬಂದು 8 ದಿಕ್ಕಿಗೆ ಪ್ರದಕ್ಷಿಣೆ (ಸುತ್ತು ಹೊಡೆಸುವ ಸೇವೆ) ಹಾಕಿದರೆ ದೇವಿಗೆ ಇಷ್ಟ. ಆ ಮಕ್ಕಳು ಮತ್ತೆ ಹಠ ಹಿಡಿದು ಅಳುವುದಿಲ್ಲ ಅನ್ನುವ ನಂಬಿಕೆಯಿದೆ.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

8-vijayanagara

Kanahosahalli: ಈಜಲು ತೆರಳಿದ್ದ ಮೂವರು ಬಾಲಕರ ದಾರುಣ ಸಾವು

Eshwarappa

Gadag: ಆರ್‌ಸಿ ಬ್ರಿಗೇಡ್​ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್‌ ಸಮಾವೇಶ: ಈಶ್ವರಪ್ಪ

4

Tollense Valley: ಬಾಣದ ಮೊನೆಯಂಚು ಹುಡುಕುತ್ತಾ.. ಸುಂದರ ಜಾಗದ ಹಿಂದಿದೆ ರಕ್ತಸಿಕ್ತ ಇತಿಹಾಸ

Bangladesh Cricket: Another senior player announced his farewell in the midst of the India series

Bangladesh Cricket: ಭಾರತ ಸರಣಿಯ ನಡುವೆ ವಿದಾಯ ಘೋಷಿಸಿದ ಮತ್ತೊಬ್ಬ ಹಿರಿಯ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

13(2)

Manipal: ಮಣ್ಣಪಳ್ಳ ಕೆರೆಯೊಡಲಿಗೆ ತ್ಯಾಜ್ಯ;ಡಸ್ಟ್‌ಬಿನ್‌ ಅಳವಡಿಕೆ ಮಾಡಿದ್ದರೂ ಉಪಯೋಗ ಶೂನ್ಯ

12

MGM, ಕುಂಜಿಬೆಟ್ಟು: ಇಂಟರ್‌ಲಾಕ್‌ ಅಳವಡಿಕೆ

10

Malpe: ಬಾಳೆಗಿಡಕ್ಕೆ ಬಾಣ ಪ್ರಯೋಗ!; ಕ್ಷತ್ರಿಯ ಶಿವಾಜಿ ಮರಾಠ ವಂಶಸ್ಥರ 45 ಕುಟುಂಬಗಳ ಆಚರಣೆ

6(1)

Kundapura: ಬಸ್ರೂರಿಗೇ ಕದಿರು ನೀಡುವ ಕೊಳ್ಕೇರಿ ಮನೆತನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

10-kottigehara

Kottigehara: ಕಾಳಿಂಗ ಸರ್ಪ ಸೆರೆ

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.