Kundapura: ಬಸ್ರೂರಿಗೇ ಕದಿರು ನೀಡುವ ಕೊಳ್ಕೇರಿ ಮನೆತನ

ಕದಿರು ಗದ್ದೆಯಲ್ಲಿ ಬೆಳೆದ ಪೈರು ಬಸ್‌ ನಿಲ್ದಾಣದ ಕದಿರು ಕಟ್ಟೆಯ ಮೂಲಕ ಜನರಿಗೆ ಹಂಚಿಕೆ

Team Udayavani, Oct 8, 2024, 2:58 PM IST

6(1)

ಕುಂದಾಪುರ: ನವರಾತ್ರಿ ಸಂದರ್ಭ ನಡೆಯುವ ಕದಿರು ಪೂಜೆಯ ವೇಳೆ ಬಸ್ರೂರಿನ ಮನೆತನವೊಂದು ಇಡೀ ಊರಿಗೆ ಕದಿರು ದಾನ ಮಾಡುವ ಸಂಪ್ರದಾಯ ಉಳಿಸಿಕೊಂಡಿದೆ. ಅದಕ್ಕಾಗಿಯೇ ಭತ್ತ ಬಿತ್ತಿ ಪೈರು ಬೆಳೆಯುವ ಗದ್ದೆಗೆ ಕದಿರು ಗದ್ದೆ ಎಂದೇ ಹೆಸರು!

ಬಸ್ರೂರಿನ  ಪ್ರಮುಖ ಮನೆತನದಲ್ಲಿ ಒಂದಾದ ಕೊಳ್ಕೇರಿ  ಮನೆತನ ಊರಿನ ಯಾವುದೇ ಧಾರ್ಮಿಕ ಶುಭ ಕಾರ್ಯಕ್ರಮಗಳಲ್ಲಿ ಮುಂಚೂಣಿ ಯಲ್ಲಿರುತ್ತದೆ. ಹೊಸ್ತು ಅಥವಾ ಕದಿರು ಹಬ್ಬದಲ್ಲೂ ಕದಿರು ದಾನದ ಮೂಲಕ ಸಂಪ್ರದಾಯ ಪಾಲಿಸುತ್ತಿದೆ. ಕೊಳ್ಕೇರಿಯ ಕದಿರು ಗದ್ದೆಯಲ್ಲಿ ಬೆಳೆದ ಪೈರನ್ನು ಹೊಸ್ತಿನ ಮುಂಚಿನ ಕಟಾವು ಮಾಡಿ ತಂದು ದೇವರ ಪ್ರಸಾದವನ್ನು ಹಾಕಿ  ಮರುದಿನ ಬಸ್‌ ನಿಲ್ದಾಣದ ಸಮೀಪದ ಕದಿರು ಕಟ್ಟೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಹಂಚುವುದು ರೂಢಿ.

ಕದಿರು ಉತ್ಸವದ ದಿನಾಂಕ ನಿಗದಿಯಾಗುವುದು ಪಂಚ ಗ್ರಾಮಗಳ ಅಧಿದೈವ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ಊರಿನ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು ಇದರ ನೇತೃತ್ವ ವಹಿಸುತ್ತಾರೆ. ಹೊಸ್ತಿನ ಮುನ್ನಾ ದಿನ ಕದಿರು ಕಟಾವು ಮಾಡಿ ಮೆರವಣಿಗೆ ಮೂಲಕ ಕದಿರು ಕಟ್ಟೆಗೆ ತರಲಾಗುತ್ತದೆ. ಇದೊಂದು ರೀತಿಯಲ್ಲಿ ಕೊಡಗಿನ ಹುತ್ತರಿ ಹಬ್ಬವನ್ನು ನೆನಪಿಸುತ್ತದೆ.

ಹೊಸ್ತು ಹಬ್ಬದ ದಿನ  ಬೆಳಗ್ಗೆ  ದೇವಸ್ಥಾನದಲ್ಲಿ ಮಹಾ ಪೂಜೆಯಾದ ನಂತರ ಜಾಗಟೆ ಬಾರಿಸಲಾಗುತ್ತದೆ. ಆಗ  ಜನರು ಬಸ್‌ ನಿಲ್ದಾಣದಲ್ಲಿರುವ  ಕದಿರು ಕಟ್ಟೆಯ ಕಡೆ ತೆರಳುತ್ತಾರೆ. ಅಲ್ಲಿ ಊರಿನ ಜನರು ಸಾಮರಸ್ಯರಿಂದ ಕದಿರು ಪಡೆಯುತ್ತಾರೆ. ಆಗ ಮತ್ತೆ ದೇವಸ್ಥಾನದ ಜಾಗಟೆ ಮೊಳಗುತ್ತದೆ. ಆಗ ಎಲ್ಲರೂ ಸಾಲಾಗಿ ದೇವಸ್ಥಾನಕ್ಕೆ ಹೋಗಿ  ದೇವರ ದರುಷನ ಪಡೆದು ಮತ್ತೆ ಮನೆ ಕಡೆ ತೆರಳಿ ಹಬ್ಬದ ಆಚರಣೆ ಮಾಡಲಾಗುತ್ತದೆ.

ಮನೆತನಕ್ಕೆ ದೇವರ ನೈವೇದ್ಯ
ಕೊಳ್ಕೇರಿ  ಮನೆತನ ಸಾರ್ವಜನಿಕವಾಗಿ ಕದಿರು ದಾನ ನೀಡಿರುವ ಕಾರಣದಿಂದ ಮಹಾದೇವನ ಸನ್ನಿಧಿಯಲ್ಲಿ ನಡೆಯುವ ವಿಶೇಷ ನೈವೇದ್ಯ ಸೇವೆಯ ಪ್ರಸಾದವನ್ನು ಮನೆತನಕ್ಕೆ ನೀಡಲಾಗುತ್ತದೆ. “ಸಾರ್ವ ಜನಿಕ ಬಾಂಧವ್ಯ ಬೆಸೆಯುವಂತೆ ಮೆರವಣಿಗೆ ಮೂಲಕ ಕದಿರು ತರುವುದು ಅಪರೂಪದ ಕಾರ್ಯಕ್ರಮ. ಇದು ಇಂದಿಗೂ ಕೊಳ್ಕೇರಿ  ಮನೆತನದ ಹೆಮ್ಮೆಯ ಸಂಗತಿ ಎನಿಸಿದೆ” ಎನ್ನುತ್ತಾರೆ ವಿಕಾಸ್‌ ಹೆಗ್ಡೆ ಕೊಳ್ಕೇರಿ .

ಟಾಪ್ ನ್ಯೂಸ್

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

8-vijayanagara

Kanahosahalli: ಈಜಲು ತೆರಳಿದ್ದ ಮೂವರು ಬಾಲಕರ ದಾರುಣ ಸಾವು

Eshwarappa

Gadag: ಆರ್‌ಸಿ ಬ್ರಿಗೇಡ್​ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್‌ ಸಮಾವೇಶ: ಈಶ್ವರಪ್ಪ

4

Tollense Valley: ಬಾಣದ ಮೊನೆಯಂಚು ಹುಡುಕುತ್ತಾ.. ಸುಂದರ ಜಾಗದ ಹಿಂದಿದೆ ರಕ್ತಸಿಕ್ತ ಇತಿಹಾಸ

Bangladesh Cricket: Another senior player announced his farewell in the midst of the India series

Bangladesh Cricket: ಭಾರತ ಸರಣಿಯ ನಡುವೆ ವಿದಾಯ ಘೋಷಿಸಿದ ಮತ್ತೊಬ್ಬ ಹಿರಿಯ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

13(2)

Manipal: ಮಣ್ಣಪಳ್ಳ ಕೆರೆಯೊಡಲಿಗೆ ತ್ಯಾಜ್ಯ;ಡಸ್ಟ್‌ಬಿನ್‌ ಅಳವಡಿಕೆ ಮಾಡಿದ್ದರೂ ಉಪಯೋಗ ಶೂನ್ಯ

12

MGM, ಕುಂಜಿಬೆಟ್ಟು: ಇಂಟರ್‌ಲಾಕ್‌ ಅಳವಡಿಕೆ

10

Malpe: ಬಾಳೆಗಿಡಕ್ಕೆ ಬಾಣ ಪ್ರಯೋಗ!; ಕ್ಷತ್ರಿಯ ಶಿವಾಜಿ ಮರಾಠ ವಂಶಸ್ಥರ 45 ಕುಟುಂಬಗಳ ಆಚರಣೆ

5(1)

Kundapura: ಈ ದೇವಿಯ ಊರಲ್ಲಿ ತೊಟ್ಟಿಲೇ ಕಟ್ಟುವುದಿಲ್ಲ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

10-kottigehara

Kottigehara: ಕಾಳಿಂಗ ಸರ್ಪ ಸೆರೆ

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

Kaup: ನಾಡಹಬ್ಬದಂತೆ ಕಂಗೊಳಿಸುವ ಉಚ್ಚಿಲ ದಸರಾ: ಪೇಜಾವರ ಶ್ರೀ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.