Vettaiyan: ರಿಲೀಸ್ಗೂ ಮುನ್ನ ʼಗೋಟ್ʼ ದಾಖಲೆ ಮೀರಿಸಿದ ರಜಿನಿಕಾಂತ್ ʼವೆಟ್ಟೈಯನ್ʼ
ʼವೆಟ್ಟೈಯನ್ʼ ಕಲಾವಿದರ ಸಂಭಾವನೆ ಎಷ್ಟು?
Team Udayavani, Oct 8, 2024, 4:21 PM IST
ಚನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ʼವೆಟ್ಟೈಯನ್ʼ (Vettaiyan) ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಸದ್ದು ಮಾಡಿದೆ.
ʼಜೈಲರ್ʼ ಬಳಿಕ ರಜಿನಿಕಾಂತ್ ಮತ್ತೆ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼವೆಟ್ಟೈಯನ್ʼನಲ್ಲಿ ರಜಿನಿ ಎನ್ ಕೌಂಟರ್ ಸ್ಪೆಷೆಲಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೇನು ರಿಲೀಸ್ ಗೆ ದಿನಗಣನೆ ಬಾಕಿ ಉಳಿದಿದ್ದು, ಟಿಕೆಟ್ ಬುಕಿಂಗ್ ನಲ್ಲಿ ಸಿನಿಮಾ ದಾಖಲೆ ಬರೆದಿದೆ.
ʼಗೋಟ್ʼ, ʼಇಂಡಿಯನ್-2ʼ ವನ್ನೇ ಮೀರಿಸಿದ ʼವೆಟ್ಟೈಯನ್ʼ: ಸೆಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ʼವೆಟ್ಟೈಯನ್ʼ ಟಿಕೆಟ್ ಸೇಲ್ಸ್ ನಲ್ಲೂ ಸದ್ದು ಮಾಡಿದೆ. ʼಬುಕ್ ಮೈ ಶೋʼ ವೆಬ್ ಸೈಟ್ ನಲ್ಲಿ ʼವೆಟ್ಟೈಯನ್ʼ ಟಿಕೆಟ್ ಹೆಚ್ಚು ಮಾರಾಟವಾಗಿದೆ.
ʼವೆಟ್ಟೈಯನ್ʼ ಟಿಕೆಟ್ ಬುಕಿಂಗ್ ʼಗೋಟ್ʼ(The GOAT) ಸಿನಿಮಾಗಿಂತ 54 ಪ್ರತಿಶತದಷ್ಟು ಹೆಚ್ಚಾಗಿದೆ. ಬುಕ್ ಮೈ ಶೋ ಸೈಟ್ನಲ್ಲಿ ಇಲ್ಲಿಯವರೆಗೆ ʼವೆಟ್ಟೈಯಾನ್ʼನ 1.40 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ವರದಿಗಳ ಪ್ರಕಾರ, ವೆಟ್ಟೈಯಾನ್ನ ಟಿಕೆಟ್ ಮಾರಾಟವು ʼದಿ ಗೋಟ್ʼ, ʼಇಂಡಿಯನ್ 2ʼ ಮತ್ತು ʼರಾಯನ್ʼಗಿಂತ ಹೆಚ್ಚಾಗಿದೆ ಎನ್ನಲಾಗಿದೆ.
ʼವೆಟ್ಟೈಯಾನ್ʼಗೆ ಸ್ಟಾರ್ಗಳು ಪಡೆದ ಸಂಭಾವನೆ ಎಷ್ಟು?: ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ (Amitabh Bachchan), ರಾಣಾ ದಗ್ಗುಬಾಟಿ (Rana Daggubati) ಫಾಹದ್ ಫಾಸಿಲ್ (Fahadh Faasil) ನಂತಹ ದೊಡ್ಡ ಕಲಾವಿದರೇ ನಟಿಸಿದ್ದಾರೆ.
ರಜಿನಿಕಾಂತ್ ಅವರು ತಮ್ಮ ಪಾತ್ರಕ್ಕೆ 100-125 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅಮಿತಾಭ್ 7 ಕೋಟಿ ರೂ., ಫಾಹದ್ 2-4 ಕೋಟಿ ರೂ., ರಾಣಾ ದಗ್ಗುಬಾಟಿ 5 ಕೋಟಿ ರೂ., ನಟಿ ಮಂಜು ವಾರಿಯರ್ 85 ಲಕ್ಷ ರೂ, ನಟಿ ರಿತಿಕಾ ಸಿಂಗ್ ತಮ್ಮ ಕೆಲಸಕ್ಕಾಗಿ 25 ಲಕ್ಷ ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ.
ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.
ಇದೇ ಅ.10 ರಂದು ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss Tamil 8: ಬಿಗ್ ಬಾಸ್ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ
Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಶಸ್ತಿ ರದ್ದು!
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.