Udupi: ಗೀತಾರ್ಥ ಚಿಂತನೆ-59: ಪಾಂಡವರಲ್ಲಿ ಒಗ್ಗಟ್ಟು,ಕೌರವರಲ್ಲಿ ಬಿಕ್ಕಟ್ಟು
Team Udayavani, Oct 9, 2024, 12:30 AM IST
ರಾಜ್ಯಾಡಳಿತ ದುರ್ಯೋಧನನ ಕೈಯಲ್ಲಿತ್ತು. ಆತನೇ ಯುದ್ಧವನ್ನು ಪ್ರಚೋದಿಸುವುದು ಅಗತ್ಯವಿರಲಿಲ್ಲ. “ನಾನು ರಾಜ್ಯವನ್ನು ಕೊಡುವುದಿಲ್ಲ. ನೀವು ಬೇಕಾದರೆ ತೆಗೆದುಕೊಳ್ಳಿ’ ಎಂದು ಕುಳಿತಿದ್ದರೆ ಪಾಂಡವರೇ ಮೊದಲು ಯುದ್ಧ ಮಾಡಬೇಕಿತ್ತು. ಈಗ ದುರ್ಯೋಧನನೇ ಯುದ್ಧವನ್ನು ಮೊದಲು ಆರಂಭಿಸಿದ್ದು. ಈ ಆಯಾಮದಲ್ಲಿ ದುರ್ಯೋಧನನೊಬ್ಬ “ಪೆದ್ದ’. ಅಪರಾಧ ಪ್ರಕರಣಗಳಲ್ಲಿ ಪ್ರಥಮ ಕ್ರಿಯೆ ಮಹಾಪರಾಧವೇ ಹೊರತು ಪ್ರತಿಕ್ರಿಯೆ ಮಹಾಪರಾಧವಲ್ಲ. “ಅಣುಬಾಂಬನ್ನು ನಾವಾಗಿ ಮೊದಲು ಪ್ರಯೋಗಿಸುವುದಿಲ್ಲ’ ಎಂಬುದು ಭಾರತದ ನೀತಿ.
ಬೇರೆಯವರು ಬಾಂಬು ಹಾಕಿದ ಬಳಿಕ ನಾವು ಹಾಕಿದರೆ ತಪ್ಪಿಲ್ಲ. ಕೌರವರ ಕಡೆಯಿಂದ ಮೊದಲು ಶಂಖನಾದ ಮಾಡಿದ ಬಳಿಕ ಪಾಂಡವರ ಕಡೆಯಿಂದ ಕೃಷ್ಣಾರ್ಜುನರು ಜತೆಯಾಗಿ ಶಂಖನಾದ ಮಾಡಿದರು.
“ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ| ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ|| (ಗೀತೆ 1-14). ಇಲ್ಲಿ ಮಾಧವ ಪಾಂಡವಶ್ಚೈವ ಎಂದು ಉಲ್ಲೇಖಿಸಿದ್ದಾರೆ. ಇದೇಕೆ? ಶಂಖಾಭಿಮಾನಿ ದೇವತೆ ಲಕ್ಷ್ಮೀ ದೇವಿ. ಹೀಗಾಗಿ ಲಕ್ಷ್ಮೀಪತಿ ಜ್ಞಾಪಕವಾಗಿ ಮಾಧವ ಎಂದು ಹೇಳಿದ್ದಾರೆ. ಇವರಿಬ್ಬರು ಪಾಂಡವರ ಕಡೆಯ ವಕ್ತಾರರು. ಹೀಗಾಗಿ ಇವರಿಬ್ಬರಿಂದ ಶಂಖ ಮೊಳಗಿತು. ಈ ಎಲ್ಲ ಹಿನ್ನೆಲೆಗಳನ್ನು ಅಧ್ಯಯನ ನಡೆಸಿದರೆ ಪಾಂಡವರಲ್ಲಿ ಏಕಾಭಿಪ್ರಾಯವಿರುವುದೂ, ಕೌರವರಲ್ಲಿ ಏಕಾಭಿಪ್ರಾಯವಿಲ್ಲದಿರುವುದೂ ಕಂಡುಬರುತ್ತದೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ
Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ
Congress Politics: ಕಾಫೀ ಪೇ ಚರ್ಚೆ ಆಗಬೇಕಲ್ಲವೇ: ಗೃಹ ಸಚಿವ ಪರಮೇಶ್ವರ್
Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ
Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.