PUC: ವಿಜ್ಞಾನದಲ್ಲಿ ಪ್ರೀತಂ, ವಾಣಿಜ್ಯದಲ್ಲಿ ಸಾನ್ವಿ, ಕಲಾ ವಿಭಾಗದಲ್ಲಿ ವೇದಾಂತ್ ಟಾಪರ್
ದ್ವಿತೀಯ ಪಿಯು: ಮೂರೂ ಪರೀಕ್ಷೆಗಳ ಅಂಕಿ-ಅಂಶ ಪ್ರಕಟ
Team Udayavani, Oct 9, 2024, 1:30 AM IST
ಬೆಂಗಳೂರು: ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ಅಂಕಿ-ಅಂಶಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ಪ್ರಕಟಿಸಿದೆ. ಮೊದಲ ಬಾರಿಗೆ ದ್ವಿತೀಯ ಪಿಯುವಿನಲ್ಲಿ ಮೂರು ಅಂತಿಮ ಪರೀಕ್ಷೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಮೂರು ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳನ್ನು ಕೆಎಸ್ಇಎಬಿ ಪರಿಗಣಿಸಿದೆ.
ವಿಜ್ಞಾನ ವಿಷಯದಲ್ಲಿ ಶೇಷಾದ್ರಿಪುರಂ ಕಂಪೊಸಿಟ್ ಪಿಯು ಕಾಲೇಜಿನ ಪ್ರೀತಂ ರವಲಪ್ಪ ಪನಸೂಡ್ಕರ್ 600ಕ್ಕೆ 599 ಅಂಕ ಪಡೆದಿದ್ದಾರೆ. ಧಾರವಾಡದ ವಿದ್ಯಾನಿಕೇತನ ಸೈನ್ಸ್ ಪಿಯು ಕಾಲೇಜಿನ ಎ. ವಿದ್ಯಾಲಕ್ಷ್ಮೀ 598 ಅಂಕ ಪಡೆದಿದ್ದಾರೆ. ಉಳಿದಂತೆ 11 ವಿದ್ಯಾರ್ಥಿಗಳು 597 ಅಂಕ ಗಳಿಸಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ಉಡುಪಿಯ ಕುಕ್ಕುಂದೂರಿನ ಕ್ರಿಯೇಟಿವ್ ಪಿಯು ಕಾಲೇಜಿನ ಸಾನ್ವಿ ರಾವ್ 598 ಅಂಕ ಗಳಿಸಿದ್ದಾರೆ.ತುಮಕೂರಿನ ವಿದ್ಯಾನಿಧಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಜ್ಞಾನವಿ ರಾವ್ 597 ಅಂಕ ಪಡೆದಿದ್ದಾರೆ. ಉಳಿದಂತೆ 8 ಮಂದಿ ವಿದ್ಯಾರ್ಥಿಗಳು 596 ಅಂಕ ಗಳಿಸಿದ್ದಾರೆ.
ಇನ್ನು ಕಲಾ ವಿಭಾಗದಲ್ಲಿ ವಿಜಯಪುರದ ಎಸ್ಎಸ್ ಪಿಯು ಕಾಲೇಜಿನ ವೇದಾಂತ್ ಜೆ.ಎನ್., ಬೆಂಗಳೂರಿನ ಎನ್ಎಂಕೆಆರ್ವಿ ಪಿಯು ಕಾಲೇಜಿನ ಮೇಧಾ ಡಿ. ಮತ್ತು ಬಳ್ಳಾರಿಯ ಕೂಡ್ಲಿಗಿಯ ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜಿನ ಕವಿತಾ ಬಿ.ವಿ. ತಲಾ 596 ಅಂಕ ಪಡೆದು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ದ್ವಿತೀಯ ಸ್ಥಾನದಲ್ಲಿ 595 ಅಂಕ ಪಡೆದಿರುವ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ದೇವಾಂಶಿ ದಿನೇಶ ಅಮಿತಾ, ಧಾರವಾಡದ ಕೆಇಬಿ ಕಂಪಾಸಿಟ್ ಪಿಯು ಕಾಲೇಜಿನ ರವೀನಾ ಸೊಮಪ್ಪ ಲಮಾಣಿ ತಲಾ 594 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಔಟ್ ಆಫ್ ಔಟ್ ಎಷ್ಟು?
ಗಣಿತದಲ್ಲಿ ಗರಿಷ್ಠ 7,378 ವಿದ್ಯಾರ್ಥಿಗಳು, ಜೀವಶಾಸ್ತ್ರ -5,959, ಕಂಪ್ಯೂಟರ್ ಸೈನ್ಸ್-2,681, ಕನ್ನಡ- 2,595, ರಸಾಯನಶಾಸ್ತ್ರ-1,986, ಅಕೌಂಟೆನ್ಸಿ-1,834, ಸಂಸ್ಕೃತ-1,512, ಅರ್ಥಶಾಸ್ತ್ರ-1,452 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ತಮಿಳು, ತೆಲುಗು, ಮರಾಠಿ, ಅರೇಬಿಕ್, ಹಿಂದೂಸ್ತಾನಿ ಸಂಗೀತ, ರಿಟೇಲ್ ವಿಷಯದಲ್ಲಿ ಒಬ್ಬರೂ 100ಕ್ಕೆ 100 ಅಂಕ ಪಡೆದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Politics: ಕಾಫೀ ಪೇ ಚರ್ಚೆ ಆಗಬೇಕಲ್ಲವೇ: ಗೃಹ ಸಚಿವ ಪರಮೇಶ್ವರ್
Haryana Result: ಸಿದ್ದರಾಮಯ್ಯ ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಪರಿಣಾಮ: ಕೋಳಿವಾಡ
Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್ – ಶಾಸಕ ಯತ್ನಾಳ್ ವಾಕ್ಸಮರ!
Gadag: ಆರ್ಸಿ ಬ್ರಿಗೇಡ್ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್ ಸಮಾವೇಶ: ಈಶ್ವರಪ್ಪ
Election Result: ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಂಬಿಕೆಯಿಲ್ಲ…: ಡಿಕೆ ಶಿವಕುಮಾರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.